ಮುಂದಿನ ನಾಲ್ಕೈದು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆ
ನವದೆಹಲಿ, ಸೆಪ್ಟೆಂಬರ್ 20: ಭಾರತದಲ್ಲಿ ಮುಂಗಾರು ಪ್ರಭಾವ ಮುಂದುವರೆಯಲಿದ್ದು, ಮುಂದಿನ ಹತ್ತು ದಿನಗಳ ಕಾಲ ಉತ್ತರ ಭಾರತದಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸೆಪ್ಟೆಂಬರ್ ಕೊನೆಯವರೆಗೂ ಉತ್ತರ ಭಾರತದಲ್ಲಿ ಮಳೆ ಮುಂದುವರೆಯುವ ಸೂಚನೆ ನೀಡಲಾಗಿದ್ದು, ಈ ತಿಂಗಳಿನಲ್ಲಿ ಮುಂಗಾರು ಮಳೆ ಪ್ರಮಾಣ ಅಧಿಕವಿರಲಿದೆ ಎಂದು ತಿಳಿಸಿದೆ.
ಬೆಂಗಳೂರಲ್ಲಿ ರಾತ್ರಿ ಧಾರಾಕಾರ ಮಳೆ, ಇಂದು ಮಳೆ ಮುನ್ಸೂಚನೆ
ನೈಋತ್ಯ, ಮಧ್ಯ ಭಾರತದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಐದು ದಿನಗಳ ನಿರಂತರ ಅವಧಿ ನೈಋತ್ಯ ಭಾಗದಲ್ಲಿ ಮಳೆಯಾಗದಿದ್ದರೆ, ಮುಂಗಾರು ಹಿಂತೆಗೆದುಕೊಂಡಂತೆ ಎಂದು ಇಲಾಖೆ ತಿಳಿಸಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಮುಂದಿನ ನಾಲ್ಕೈದು ದಿನಗಳವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದೆ ಓದಿ...
ಮುಂದಿನ ಐದು ದಿನಗಳ ಕಾಲ ಮಳೆ ಎಚ್ಚರಿಕೆ
ರಾಜಸ್ಥಾನದ ಪೂರ್ವ ಭಾಗ, ಗುಜರಾತ್ನಲ್ಲಿ ಸೆಪ್ಟೆಂಬರ್ 20ರಿಂದ ಆರಂಭವಾಗಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ. ಉತ್ತರಾಖಂಡ, ನೈಋತ್ಯ ರಾಜಸ್ಥಾನ, ಮಧ್ಯ ಪ್ರದೇಶ, ವಿದರ್ಭಾ, ಛತ್ತೀಸ್ಗಡ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು, ಸೌರಾಷ್ಟ್ರ, ಕಚ್ ಹಾಗೂ ತಮಿಳುನಾಡು, ಪುದುಚೇರಿ, ಕಾರೈಕಲ್ನಲ್ಲಿ ಅಧಿಕ ಮಳೆಯಾಗುವುದಾಗಿ ತಿಳಿಸಿದೆ. ಸೆಪ್ಟೆಂಬರ್ 23ರಂದು ಕೇರಳದಲ್ಲಿ ಕೂಡ ಮಳೆ ಪ್ರಮಾಣ ಹೆಚ್ಚಿರುವುದಾಗಿ ತಿಳಿಸಿದೆ.
ಗುಡುಗು ಮಿಂಚು ಸಹಿತ ಮಳೆ
ರಾಜಸ್ಥಾನ, ಮಧ್ಯ ಪ್ರದೇಶ, ವಿದರ್ಭಾ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ-ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರ, ಗುರಜಾತ್, ಮಹಾರಾಷ್ಟ್ರ, ಕೊಂಕಣ, ಗೋವಾ, ಆಂಧ್ರದ ಕರಾವಳಿ ತೀರಗಳು, ತಮಿಳುನಾಡಿನಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವುದಾಗಿ ಮುನ್ಸೂಚನೆ ನೀಡಿದೆ. ನೈಋತ್ಯ ಹಾಗೂ ಪಶ್ಚಿಮ ಕೇಂದ್ರ ಅರಬ್ಬೀ ಸಮುದ್ರದಿಂದ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಮಾರುತಗಳು ಬೀಸಲಿವೆ ಎಂದು ತಿಳಿಸಿ, ಮೀನುಗಾರರು ಸಮುದ್ರ ತೀರಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 25ರವರೆಗೂ ಈ ರಾಜ್ಯಗಳಲ್ಲಿ ಅಧಿಕ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.
ಸೆ.18ರಿಂದ ಈ ರಾಜ್ಯಗಳಲ್ಲಿ ಅಧಿಕ ಮಳೆ ಮುನ್ಸೂಚನೆ
ಮಹಾರಾಷ್ಟ್ರದಲ್ಲಿ ಮತ್ತೆ ಆರಂಭವಾಗಲಿದೆ ಮಳೆ
ಸೆಪ್ಟೆಂಬರ್
20ರಿಂದ
ಮಹಾರಾಷ್ಟ್ರದಲ್ಲಿ
ಮತ್ತೆ
ಮಳೆ
ಪ್ರಮಾಣ
ಹೆಚ್ಚಾಗಲಿದ್ದು,
ಮುಂಬೈ
ನಗರದಲ್ಲಿ
ಭಾರೀ
ಮಳೆಯಾಗಲಿದೆ.
ಬಂಗಾಳ
ಕೊಲ್ಲಿಯಲ್ಲಿ
ಚಂಡಮಾರುತ
ಪ್ರಭಾವ
ತೀಕ್ಷ್ಣವಾಗಲಿದ್ದು,
ಮಹಾರಾಷ್ಟ್ರದಲ್ಲಿ
ಇದರ
ಪ್ರಭಾವ
ಸೆಪ್ಟೆಂಬರ್
20ರಿಂದ
ಹೆಚ್ಚಾಗಲಿದೆ
ಎಂದು
ಪ್ರಾದೇಶಿಕ
ಹವಾಮಾನ
ಕೇಂದ್ರದ
ಡಾ.
ಶುಭಾಂಗಿ
ಭೂಟೆ
ತಿಳಿಸಿದ್ದಾರೆ.
ಮುಂಗಾರು
ಆರಂಭದಲ್ಲಿಯೂ
ಮಹಾರಾಷ್ಟ್ರದಲ್ಲಿ
ಅಧಿಕ
ಮಳೆ
ಉಂಟಾಗಿ
ಪ್ರವಾಹ
ಏರ್ಪಟ್ಟಿತ್ತು.
ಜನಜೀವನ
ಅಸ್ತವ್ಯಸ್ತವಾಗಿ
ಕ್ರಮೇಣ
ಚೇತರಿಸಿಕೊಂಡಿತ್ತು.
ಇದೀಗ
ಮುಂಗಾರಿನ
ಕೊನೆ
ಅವಧಿಯಲ್ಲಿ
ಮತ್ತೆ
ಇಲ್ಲಿ
ಮಳೆ
ಮುನ್ಸೂಚನೆ
ದೊರೆತಿದೆ.
ಆಗಸ್ಟ್
ತಿಂಗಳಿನಲ್ಲಿ
ವಾಡಿಕೆಗಿಂತ
ಕಡಿಮೆ
ಮಳೆಯಾಗಿತ್ತು.
ಸೆಪ್ಟೆಂಬರ್
ತಿಂಗಳಿನಲ್ಲಿ
ವಾಡಿಕೆಗಿಂತ
ಹೆಚ್ಚಿನ
ಮಳೆಯಾಗಲಿದೆ
ಎಂದು
ಇಲಾಖೆ
ಮಾಹಿತಿ
ನೀಡಿದೆ.
ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಮಳೆ
ಸೆ.20ರಿಂದ
ಮುಂದಿನ
ಮೂರು
ದಿನಗಳ
ಕಾಲ
ರಾಜ್ಯದ
ಚಿಕ್ಕಮಗಳೂರು,
ಹಾಸನ,
ಕೊಡಗು,
ಶಿವಮೊಗ್ಗ,
ಕೋಲಾರ,
ಮಂಡ್ಯ,
ಮೈಸೂರು
ಮತ್ತು
ರಾಮನಗರ
ಜಿಲ್ಲೆಯಲ್ಲಿ
ಮಳೆಯಾಗಲಿದೆ
ಎಂದು
ಭಾರತೀಯ
ಹವಾಮಾನ
ಇಲಾಖೆ
ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ
ಉಂಟಾಗಿರುವ
ವಾಯುಭಾರ
ಕುಸಿತದ
ಪರಿಣಾಮದಿಂದಲೇ
ಮಳೆಯಾಗುತ್ತಿದೆ.
ಸೆಪ್ಟೆಂಬರ್
21ರ
ತನಕ
ಕರಾವಳಿ
ಜಿಲ್ಲೆಗಳಾದ
ಉತ್ತರ
ಕನ್ನಡ,
ದಕ್ಷಿಣ
ಕನ್ನಡ,
ಉಡುಪಿ
ಜಿಲ್ಲೆಯಲ್ಲಿ
ಮಳೆಯ
ಅಬ್ಬರ
ಹೆಚ್ಚಿರಲಿದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ.
ರಾಜ್ಯದಲ್ಲಿ
ಮುಂಗಾರು
ದುರ್ಬಲಗೊಂಡಿದೆ.
ಆದರೆ
ಬಂಗಾಳ
ಕೊಲ್ಲಿಯಲ್ಲಿ
ಉಂಟಾಗಿರುವ
ವಾಯುಭಾರ
ಕುಸಿತದ
ಪರಿಣಾಮದಿಂದ
ಮಳೆಯಾಗುತ್ತಿದೆ.
ಇನ್ನು
ಮೂರು
ದಿನ
ವಿವಿಧ
ಜಿಲ್ಲೆಗಳಲ್ಲಿ
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ಹೇಳಿದೆ.