ಭಾರತದ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ, ಪ್ರವಾಹ ಪರಿಸ್ಥಿತಿ
Recommended Video
ನವದೆಹಲಿ, ಆಗಸ್ಟ್ 31: ಭಾರತದ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಶಾನ್ಯ ರಾಜ್ಯಗಳ ಹಲವು ನಗರಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ನಾಗಲ್ಯಾಂಡ್ನಲ್ಲಿ ಭಾರಿ ಮಳೆಯಿಂದಾಗಿ ಈಗಾಗಲೇ 12 ಮಂದಿ ಜೀವ ಕಳೆದುಕೊಂಡಿದ್ದಾರೆ. ಅರುಣಾಚಲಪ್ರದೇಶ, ಚೀನಾ ದೇಶದ ಗಡಿ ಭಾಗದಲ್ಲೂ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ಥವ್ಯವಸ್ಥಗೊಂಡಿದೆ.
ಚೀನಾ ದೇಶವು ಬ್ರಹ್ಮಪುತ್ರ ನದಿಗೆ ಹೆಚ್ಚುವರಿ ನೀರು ಬಿಡುವುದಾಗಿ ಹೇಳಿರುವ ಕಾರಣ ಅರುಣಾಚಲ, ಅಸ್ಸಾಂನಲ್ಲಿ ಪ್ರವಾಹದ ಭಯ ನಿರ್ಮಾಣವಾಗಿದೆ.
ಚೀನಾದ ಸ್ಯಾಂಗ್ಪೋ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ಬ್ರಹ್ಮಪುತ್ರ ನದಿಗೆ ನೀರು ಬಿಡುವುದಾಗಿ ಚೀನಾ ಹೇಳಿದೆ. ಕಳೆದ 50 ವರ್ಷದಲ್ಲೇ ಹರಿದುಬರದಷ್ಟು ನೀರು ಈ ಬಾರಿ ಚೀನಾದಿಂದ ಬ್ರಹ್ಮಪುತ್ರ ನದಿಗೆ ಹರಿದುಬರಲಿದೆ.
ಕೇರಳಕ್ಕೆ ಮೋದಿ ಕೊಟ್ಟ ನೆರವಿಗಿಂತ ಜನರು ಕೊಟ್ಟ ನೆರವೇ ಹೆಚ್ಚು
ನಾಗಾಲ್ಯಾಂಡ್ನಲ್ಲಿ ಈವರೆಗೆ ಪ್ರವಾಹದಿಂದಾಗಿ 12 ಮಂದಿ ಪ್ರಾಣ ಕಳೆದುಕೊಂಡಿದ್ದು. 400 ಜಿಲ್ಲೆಗಳ 3000 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಲ್ಲಿನ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
ನಾಗಾಲ್ಯಾಂಡ್ನಲ್ಲಿ ಭೂಕುಸಿತ ಕೂಡ ಸಂಭವಿಸಿದ್ದು. ಮಳೆಯಿಂದ ಭಾರಿ ಹಾನಿಯಾಗಿರುವ ಕಾರಣ ಅಲ್ಲಿನ ಮುಖ್ಯಮಂತ್ರಿ ನೈಫಿ ರಿಯೋ ಅವರು ನೆರವಿಗಾಗಿ ಕೇಳಿಕೊಂಡಿದ್ದಾರೆ. ಈ ಕುರಿತು ಅವರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ. ಟ್ವೀಟ್ಗೆ ಸ್ಪಂದಿಸಿರುವ ಗೃಹ ಸಚಿವ ರಾಜನಾಥ ಸಿಂಗ್ ಅವರು ರಾಷ್ಟ್ರೀಯ ನಿರ್ವಹಣಾ ಪಡೆಯನ್ನು ಕಳುಹಿಸಿಕೊಡುವುದಾಗಿ ಹೇಳಿದೆ.
NASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರ
ಕೇರಳ, ಕೊಡಗು ಬಳಿಕ ಈಗ ಮಳೆ ತನ್ನ ರುದ್ರಾವತಾರವನ್ನು ಈಶಾನ್ಯ ರಾಜ್ಯಗಳಲ್ಲಿ ತೋರಿಸುತ್ತಿದೆ.