ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ ಕೋಟ್ ನಲ್ಲಿ ಅಗ್ನಿ ಆಕಸ್ಮಿಕ: ಮೂವರ ದುರಂತ ಅಂತ್ಯ
ರಾಜ್ ಕೋಟ್, ಜನವರಿ 13: ಇತ್ತೀಚೆಗೆ ಬೆಂಕಿ ಅವಘಡಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು(ಜ.13) ಬೆಳಗ್ಗಿನ ಜಾವ ಗುಜರಾತಿನ ರಾಜ್ ಕೋಟ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ರಾಜ್ ಕೋಟ್ನ ಪ್ರಾನ್ಸ್ಲಾ ಎಂಬ ಹಳ್ಳಿಯಲ್ಲಿ ನಡೆಯುತ್ತಿದ್ದ ಶಿಬಿರವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಈ ಘಟನೆ ನಡೆದಿದೆ. ಆದರೆ ಬೆಂಕಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಕೆಆರ್ ಮಾರುಕಟ್ಟೆ ಕೈಲಾಶ್ ಬಾರ್ ನಲ್ಲಿ ಬೆಂಕಿ, 5 ಮಂದಿ ದುರ್ಮರಣ
ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ಕೆ.ಆರ್.ಮಾರ್ಕೇಟ್ ಬಳಿಯ ಕೈಲಾಶ್ ಬಾರಿನಲ್ಲಿ ಬೆಂಕ ಅವಘಡ ಸಂಭವಿಸಿದ ಪರಿಣಾಮ 5 ಜನ ಮೃತರಾಗಿದ್ದರು. ಮುಂಬೈಯ ಕಮಲಾಮಿಲ್ ನಲ್ಲಿ ಹೊಸ ವರ್ಷಕ್ಕೂ ಎರಡು ದಿನ ಮೊದಲು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 14 ಜನ ಮೃತರಾಗಿದ್ದರು.
Comments
English summary
Three girls died and few others were injured after a fire broke out at a Rashtriya Shivir in Rajkot's Pransla village on Jan 13th. The reason for the fire is yet to be known.