Fact Check: ಕೊರೊನಾ ಸೋಂಕಿತರ ಕಣ್ಗಾವಲಿಗೆ ಆರೋಗ್ಯ ಸೇತು App ಬಳಕೆ ?
ನವದೆಹಲಿ, ಏಪ್ರಿಲ್ 7: ಕೊರೊನಾ ಸೋಂಕಿತರ ಮೇಲೆ ಕಣ್ಗಾವಲಿಡಲು ಸರ್ಕಾರವು 'ಆರೋಗ್ಯ ಸೇತು' ಅಪ್ಲಿಕೇಷನ್ ಬಳಕೆ ಮಾಡುತ್ತಿದೆ ಎನ್ನುವುದು ಸುಳ್ಳು ಸುದ್ದಿ.
ಆರೋಗ್ಯ ಸೇತು ಅಪ್ಲಿಕೇಷನ್ನಿಂದ ಕೊರೊನಾ ಸೋಂಕಿತರ ಜೊತೆ ನಿಕಟ ಸಂಪರ್ಕ ಹೊಂದಿದ್ದರೆ ಅದು ಇಲಾಖೆ ಗಮನಕ್ಕೆ ಬರುತ್ತದೆ.
ಈ ಅಪ್ಲಿಕೇಷನ್ ಜನರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತದೆ. ಈ ಅಪ್ಲಿಕೇಷನ್ ಹೊಸ ಪ್ರಕರಣಗಳನ್ನು ಕಂಡು ಹಿಡಿಯುತ್ತದೆಯೇ ಹೊರತು ಇರುವ ರೋಗಿಗಳ ಮೇಲೆ ಕಣ್ಗಾವಲಿಡುವುದಿಲ್ಲ.
ದೆಹಲಿಯ ತಬ್ಲಿಘಿ ಜಮಾತ್ ನಿಂದ ಬಂದವರ ಮೊಬೈಲ್ ಸ್ವಿಚ್ ಆಫ್
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೊವಿಡ್ 19 ರೋಗಿಗಳ ಮೇಲೆ ಈ ಅಪ್ಲಿಕೇಷನ್ನಿಂದ ಕಣ್ಗಾವಲಿಡಲಾಗುತ್ತಿದೆ ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ.
ಸರ್ಕಾರವು ಈ ಸುದ್ದಿಯನ್ನು ತಳ್ಳಿ ಹಾಕಿದೆ. ಈ ಆರೋಪ ಆಧಾರರಹಿತ, ಈ ಅಪ್ಲಿಕೇಷನ್ ಯೂಸರ್ ಲೊಕೇಷನ್ನ್ನು ಲಿಂಕ್ ಮಾಡುವುದಿಲ್ಲ. ಹಾಗೆಯೇ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನೂ ಕೂಡ ಇದು ಪಡೆಯುವುದಿಲ್ಲ.
ಒಂದೊಮ್ಮೆ ನಿಮ್ಮ ಮನೆಯ ಬಳಿ ಯಾರಾದರೂ ಸೋಂಕಿತ ವ್ಯಕ್ತಿ ಇದ್ದರೆ ನೀವು ಆ ಅಪ್ಲಿಕೇಷನ್ ಮೂಲಕ ಅಲರ್ಟ್ ನೀಡಬಹುದಾಗಿದೆ. ಅಥವಾ ಆ ಅಪ್ಲಿಕೇಷನ್ ನಿಮಗೆ ಅಲರ್ಟ್ ನೀಡುತ್ತದೆ.
ತಮಿಳುನಾಡಿನ 34 ಜಿಲ್ಲೆಗಳಿಗೆ ಹರಡಿದ ಕೊರೊನಾ
ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಕೊರೊನಾ ವೈರಸ್ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇದೊಂದು ಮಾರ್ಗವಾಗಿದೆ.
ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಾಗ ಆಸ್ಪತ್ರೆಯಲ್ಲಿ ಅವರ ಮೊಬೈಲ್ ನಂಬರ್ ಪಡೆದು ತಕ್ಷಣವೇ ಈ ಅಪ್ಲಿಕೇಷನ್ನಲ್ಲಿ ನೋಂದಣಿ ಮಾಡಲಾಗುತ್ತದೆ.
ಕೊರೊನಾ ಸೋಂಕು ಹರಡದಿರಲು ಸರ್ಕಾರವು ತೆಗೆದುಕೊಂಡ ಒಂದು ಕ್ರಮ ಇದಾಗಿದೆ. ಅಪ್ಲಿಕೇಷನ್ ಬಳಕೆ ದಾರರ ಪರವಾಗಿಯೇ ಸರ್ಕಾರ ಕೆಲಸ ಮಾಡುತ್ತದೆ. ಅದರಿಂದ ಯಾವುದೇ ತೊಂದರೆಯಿಲ್ಲ. ಈ ಅಪ್ಲಿಕೇಷನ್ 11 ಭಾಷೆಯಲ್ಲಿ ಲಭ್ಯವಿದೆ.