ಚುನಾವಣೆ ಮೇಲೆ ಕಣ್ಣಿಟ್ಟು ಮಂಡಿಸುತ್ತಿರುವ ಬಜೆಟ್ ಇದು : ಖರ್ಗೆ
Recommended Video
ನವದೆಹಲಿ, ಫೆಬ್ರವರಿ 01 : 'ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಲವು ಹೊಸ ಕೊಡುಗೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಶುಕ್ರವಾರ ಸಂಸತ್ ಭವನದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಇದುವರೆಗೂ ಸರ್ಕಾರ ಮಂಡನೆ ಮಾಡಿದ ಯಾವ ಬಜೆಟ್ ಸಹ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಇರಲಿಲ್ಲ' ಎಂದು ಆರೋಪಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಮೋದಿಯಿಂದ ಮತದಾರರ ಓಲೈಕೆಯ ಬಜೆಟ್?
'ಲೋಕಸಭಾ ಚುನಾವಣೆಗೆ ಕೇವಲ 4 ತಿಂಗಳು ಉಳಿಸಿದೆ. ಈ ಬಜೆಟ್ನಲ್ಲಿ ಹಲವು ಜನಪರ ಘೋಷಣೆಗಳನ್ನು ಮಾಡುವ ನೀರಿಕ್ಷೆ ಇದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡನೆ ಮಾಡುತ್ತಿರುವ ಬಜೆಟ್ ಇದಾಗಿದೆ' ಎಂದು ಖರ್ಗೆ ಅಭಿಪ್ರಾಯಪಟ್ಟರು.
ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ
ಹಣಕಾಸು ಸಚಿವರು ಆಗಿರುವ ಪಿಯೂಷ್ ಘೋಯೆಲ್ ಅವರು ಇಂದು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಇರುವುದರಿಂದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ.
ಸಂಸತ್ ಭವನಕ್ಕೆ ಈಗಾಗಲೇ ಆಗಮಿಸಿರುವ ಪಿಯೂಷ್ ಘೋಯೆಲ್ ಅವರು ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಮಂಡಿಸಲು ಅನುಮೋದನೆಯನ್ನು ಪಡೆದಿದ್ದಾರೆ. ಸಂಸತ್ ಭವನಕ್ಕೆ ಆಗಮಿಸುವ ಮೊದಲು ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದರು.