ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಗೋವಾ, ತಕರಾರು ಅಂತ್ಯ

By Manjunatha
|
Google Oneindia Kannada News

ಪಣಜಿ, ಆಗಸ್ಟ್‌ 14: ಮಹದಾಯಿ ವಿವಾದದಲ್ಲಿ ಕರ್ನಾಟಕದ ಎದುರಾಳಿಯಾಗಿದ್ದ ಗೋವಾ ರಾಜ್ಯ ಸಹ ಇಂದು ಪ್ರಕಟವಾಗಿರುವ ಮಹದಾಯಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದೆ.

ತೀರ್ಪಿನ ಬಗ್ಗೆ ಟ್ವೀಟ್ ಮಾಡಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು, ನ್ಯಾಯಾಧಿಕರಣದ ತೀರ್ಪು ಸಂತಸ ತಂದಿದೆ ಎಂದಿದ್ದಾರೆ.

ಮಹದಾಯಿ ತೀರ್ಪಿನ ಬಗ್ಗೆ ಯಾರು ಏನು ಹೇಳಿದರು?ಮಹದಾಯಿ ತೀರ್ಪಿನ ಬಗ್ಗೆ ಯಾರು ಏನು ಹೇಳಿದರು?

122 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇಟ್ಟಿದ್ದ ಗೋವಾಕ್ಕೆ ನ್ಯಾಯಾಧಿಕರಣವು 24 ಟಿಎಂಸಿ ಅಡಿ ನೀರು ನೀಡಿದೆ. 6.70 ಟಿಎಂಸಿ ನೀರು ಕೇಳಿದ್ದ ಮಹರಾಷ್ಟ್ರಾಕ್ಕೆ 1.30 ಟಿಎಂಸಿ ಅಡಿ ನೀರು ನೀಡಿದೆ.

Goa CM Manohar Parrikar welcomes Mahadayi verdict

ತೀರ್ಪಿನ ಬಗ್ಗೆ ಗೋವಾ ಸಿಎಂ ಮಾಡಿರುವ ಟ್ವೀಟ್‌ನಲ್ಲಿ, ತೀರ್ಪಿನಿಂದಾಗಿ ಗೋವಾಕ್ಕೆ ನ್ಯಾಯ ದೊರೆತಿದೆ ಎಂದಿದ್ದಾರೆ. ಅಲ್ಲದೆ ಮಹದಾಯಿ ವಿವಾದ ಕುರಿತು ಕಾನೂನು ಹೋರಾಟ ಮಾಡಿದ ಕಾನೂನು ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮಹದಾಯಿ ತೀರ್ಪು ಪ್ರಕಟ: ಉ.ಕರ್ನಾಟಕ ಹೋರಾಟಗಾರರಿಗೆ ಸಂದ ಜಯಮಹದಾಯಿ ತೀರ್ಪು ಪ್ರಕಟ: ಉ.ಕರ್ನಾಟಕ ಹೋರಾಟಗಾರರಿಗೆ ಸಂದ ಜಯ

ಗೋವಾ ಸರ್ಕಾರವು ತೀರ್ಪಿನ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಿಲೇರುತ್ತದೆ ಎನ್ನಲಾಗಿತ್ತು. ಆದರೆ ಈಗ ಮುಖ್ಯಮಂತ್ರಿಗಳು ತೀರ್ಪಿನಿಂದ ತಮಗೆ ಸಂತಸವಾಗಿರುವುದಾಗಿ ಹೇಳಿದ್ದು, ಗೋವಾ ಸರ್ಕಾರವು ಮೇಲ್ಮನವಿ ಸಲ್ಲಿಸುವುದಿಲ್ಲ ಎನಿಸುತ್ತದೆ.

English summary
Goa CM Manohar Parrikar welcomes Mahadayi verdict, He tweeted and said that, 'happy that the Mhadei Tribunal with its final verdict has done justice to Goa'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X