ರೈತರಿಗೆ ಶೇ 4ರ ಬಡ್ಡಿ ದರದಲ್ಲಿ ಕೃಷಿ ಸಾಲ
ಬೆಂಗಳೂರು, ಜುಲೈ 06 : ಈ ಆರ್ಥಿಕ ವರ್ಷದಲ್ಲಿ ರೈತರಿಗೆ 3 ಲಕ್ಷದವರೆಗಿನ ಅಲ್ಪಾವಧಿ ಕೃಷಿ ಸಾಲ ಶೇ 4ರ ಬಡ್ಡಿದರದಲ್ಲಿ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಒಂದು
ವರ್ಷದ
ಅವಧಿಗೆ
3
ಲಕ್ಷ
ರೂ.ವರೆಗೆ
ಕೃಷಿ
ಸಾಲ
ಪಡೆಯುವ
ಎಲ್ಲಾ
ರೈತರಿಗೆ
ಈ
ಯೋಜನೆ
ಅನ್ವಯವಾಗುತ್ತದೆ.
ಪಡೆದ
ಸಾಲಕ್ಕೆ
ರೈತರು
ಶೇ
4ರಷ್ಟು
ಬಡ್ಡಿ
ಪಾವತಿ
ಮಾಡಬೇಕು.
ಕೇಂದ್ರ
ಸರ್ಕಾರದಿಂದ
ಶೇ
5
ರಷ್ಟು
ಸಬ್ಸಿಡಿ
ಸಿಗುತ್ತದೆ.
[ರಸಗೊಬ್ಬರ
ದರ
ಗಣನೀಯ
ಇಳಿಕೆ:
ಕೇಂದ್ರಕ್ಕೆ
ಧನ್ಯವಾದ]
ಒಂದು ವರ್ಷದ ಅವಧಿಯ ಸಾಲಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಒಂದು ವೇಳೆ ರೈತರು ಒಂದು ವರ್ಷದಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ಶೇ 7ರಷ್ಟು ಬಡ್ಡಿ ಪಾವತಿ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. [ಕೃಷಿ ಅಭಿವೃದ್ಧಿ ಪ್ರಚಾರಾಂದೋಲನದ ಬಗ್ಗೆ ತಿಳಿಯಿರಿ]
ಯಾವ ಬ್ಯಾಂಕುಗಳು : ಸರ್ಕಾರಿ, ಖಾಸಗಿ ವಲಯದ ಬ್ಯಾಂಕ್, ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಮತ್ತು ನಬಾರ್ಡ್ ಈ ಯೋಜನೆ ವ್ಯಾಪ್ತಿಗೆ ಬರುತ್ತದೆ. [ಕೇಂದ್ರದ ಯೋಜನೆ, ರೈತರಿಗೂ ಆನ್ ಲೈನ್ ಮಾರುಕಟ್ಟೆ]