ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಾಲೂ ಮತ್ತು ಪುತ್ರರಿಗೆ ಅಕ್ರಮ ಭೂ ಖರೀದಿಯ ಸಂಕಷ್ಟ
ಪಾಟ್ನಾ, ಆಗಸ್ಟ್ 1: ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ರತ್ನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ನಡೆದಿರುವ ಭೂ ಖರೀದಿ ಹಗರಣದ ತನಿಖೆಗೆ ಬಿಹಾರ ಸರಕಾರ ನಿರ್ಧರಿಸಿದ್ದು ಇದರಲ್ಲಿ ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಹೆಸರು ಕೇಳಿ ಬಂದಿದೆ.
ಭೂಮಿ ಖರೀದಿಗೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯಗಳನ್ನು ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು ಇದಾದ ಬೆನ್ನಿಗೆ ತನಿಖೆಗೆ ಆದೇಶ ನೀಡಲಾಗಿದೆ. ಸಗುಣ ಮೋರ್ ಎಂಬ ಮಾಲ್ ನಿರ್ಮಾಣಕ್ಕೆ ಪಾಟ್ನಾ ಪ್ರಾಣಿ ಸಂಗ್ರಹಾಲಯದಿಂದ ಟೆಂಡರ್ ಕರೆಯದೇ ಅಕ್ರಮವಾಗಿ ತೇಜ್ ಪ್ರತಾಪ್ ಯಾದವ್ ಭೂಮಿ ಖರೀದಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಮಾಲ್ ಲಾಲೂ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ನಿರ್ದೇಶಕರಾಗಿರುವ ಡಿಲೈಟ್ ಮಾರ್ಕೆಟಿಂಗ್ ಪ್ರೈ. ಲಿ. ಕಂಪನಿಗೆ ಸೇರಿದೆ.
Comments
English summary
There is more trouble brewing for Lalu and sons in Bihar. The newly formed government in Bihar has decided to probe afresh the soil purchase scam involving Lalu Yadav's elder son Tej Pratap.
Story first published: Tuesday, August 1, 2017, 8:32 [IST]