ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಷ್ಣೋದೇವಿ ಯಾತ್ರಾರ್ಥಿ ಬೆಂಗಳೂರಿನ ಶಶಿಧರ್ ಸಾವು

By Mahesh
|
Google Oneindia Kannada News

ಜಮ್ಮು, ಆಗಸ್ಟ್ 06: ಮಾತಾ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಮೂವರು ಭಕ್ತರು ಹಾಗೂ ಒಬ್ಬ ಸಹಾಯಕ ಮೃತಪಟ್ಟಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ವೈಷ್ಣೋದೇವಿ ದೇಗುಲಕ್ಕೆ ತೆರಳುವ ಹಳೆ ಮಾರ್ಗದಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತರ ಪೈಕಿ ಬೆಂಗಳೂರಿನ ಯಾತ್ರಿ ಶಶಿಧರ ಕುಮಾರ್ ಕೂಡಾ ಇದ್ದಾರೆ

ಕತ್ರಾ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 12 ಮಂದಿ ಸಂತ್ರಸ್ತರಾಗಿದ್ದಾರೆ. 3 ಜನ ಯಾತ್ರಾರ್ಥಿಗಳು ಮೃತಪಟ್ಟಿದ್ದು, ಓರ್ವ ಪೋನಿವಾಲ(ಕುದುರೆ ನೋಡಿಕೊಳ್ಳುವವರು) ಮೃತರಾಗಿದ್ದಾರೆ. [ವೈಷ್ಣೋದೇವಿ ದರ್ಶನಕ್ಕೆ ಹೋಗಲು ಬೆಂಗಳೂರಿನಿಂದ ರೈಲು]

Four die in landslide on Vaishno Devi Shrine track

ಮಿಕ್ಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆಬೆಂಗಾಂಗ-ಅರ್ಧಕುವಾರಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಯಾತ್ರಿಕರು ವಿಶ್ರಮಿಸುತ್ತಿದ್ದ ತಾತ್ಕಾಲಿಕ ಡೇರೆ ಮೇಲೆ ಮಣ್ಣು ಕುಸಿದಿದೆ.

ಈ ದುರ್ಘಟನೆಯಲ್ಲಿ 5 ವರ್ಷದ ಒಂದು ಮಗು ಸೇರಿದಂತೆ ಮೂವರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಅಜೀತ್ ಸಾಹು ತಿಳಿಸಿದ್ದಾರೆ.

ಮೃತರನ್ನು ಬೆಂಗಳೂರಿನ ಶಶಿಧರ ಕುಮಾರ್ (29) ಛತ್ತೀಸ್​ಗಢದ ಬಿಂದು ಸಾಹ್ನಿ (30) ಮತ್ತು ಆಕೆಯ 5 ವರ್ಷದ ಮಗ ವಿಶಾಲ್ ಹಾಗೂ ರಿಯಾಸಿಯ 'ಪೋನಿವಲ್ಲ' ಸಾದಿಕ್ (32) ಎಂದು ಗುರುತಿಸಲಾಗಿದೆ. (ಪಿಟಿಐ)

English summary
At least four people -- three pilgrims and one Ponywallah were killed and eight injured on Saturday morning in a landslide on old track to Mata Vaishno Devi Shrine in Jammu region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X