ಕಾಂಗ್ರೆಸ್ಸಿನ ಕಾರ್ಯದರ್ಶಿ ಸ್ಥಾನದಿಂದ ಮಾಜಿ ಸಂಸದೆ ಪ್ರಿಯಾದತ್ ವಜಾ
ಮುಂಬೈ, ಅಕ್ಟೋಬರ್ 02: ಕಾಂಗ್ರೆಸ್ ನಾಯಕಿ, ಮಾಜಿ ಸಂಸದೆ ಪ್ರಿಯಾ ದತ್ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿ ಎಐಸಿಸಿ ಆದೇಶ ಹೊರಡಿಸಿದೆ.
ಮುಂಬೈನ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಜತೆಗಿನ ವೈಮನಸ್ಯವೇ ಪ್ರಿಯಾ ಅವರನ್ನು ಪ್ರಮುಖ ಸ್ಥಾನದಿಂದ ಕೆಳಗಿಳಿಸಲು ಕಾರಣ ಎನ್ನಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯು ಮೂಲ ಕಾಂಗ್ರೆಸ್ಸಿಗರು, ಪಕ್ಷದ ನಿಷ್ಠಾವಂತರಿಗೆ ಸರಿಯಾದ ಮನ್ನಣೆ ನೀಡುತ್ತಿಲ್ಲ ಎಂದು ಪ್ರಿಯಾ ಅವರು ದನಿಯೆತ್ತಿದ್ದರು.
ಆದರೆ, ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾ, ಪಕ್ಷದ ಮುಖಂಡರ ಜೊತೆ ಯಾವುದೇ ವೈಮನಸ್ಯವಿಲ್ಲ ಎಂದಿದ್ದಾರೆ. ಎಲ್ಲಾ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿದೆ. ಈ ಕುರಿತಂತೆ ನನಗೆ ಸಿಕ್ಕಿರುವ ಪತ್ರದಿಂದ ನನಗೆ ಹಿನ್ನಡೆಯಾಗಿಲ್ಲ, ಇಷ್ಟು ವರ್ಷ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಈಗ ಹೊಸಬರಿಗೆ ಅವಕಾಶ ಸಿಗಲಿ, ನಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಭಾರಿಯಾಗಿದ್ದೇನೆ. ನನಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
I recieved a letter relieving me of my duties as secretary AICC, I am very Thank full and extremely grateful to Mrs Gandhi and Rahulji to have given me this opportunity to serve the party for all these years. I thank all my colleagues in AICC for their help and guidance. pic.twitter.com/s4trhBBAJg
— Priya Dutt (@PriyaDutt_INC) September 30, 2018
ಮಾಜಿ ಸಂಸದ, ದಿವಂಗತ ಸುನೀಲ್ ದತ್ ಅವರ ಪುತ್ರಿ, ನಟ ಸಂಜಯ್ ದತ್ ಅವರ ಸೋದರಿ ಪ್ರಿಯಾ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಶಿವ ಸೇನಾ ಯತ್ನಿಸುತ್ತಿರುವ ಸುದ್ದಿಯೂ ಇದೆ.
Want to clarify there is nothing to be upset about this letter, this is a process, I have been AICC secretary long enough, new and young people need to be brought into the organisation. If each one holds on to positions forever where will the other aspirants go.
— Priya Dutt (@PriyaDutt_INC) October 1, 2018
ಮುಂಬೈ ವಾಯುವ್ಯ ಹಾಗೂ ಕೇಂದ್ರ ಕ್ಷೇತ್ರದಿಂದ ಗೆದ್ದು ಲೋಕಸಭಾ ಸದಸ್ಯೆಯಾಗಿದ್ದ ಪ್ರಿಯಾ ಅವರು 2014ರಲ್ಲಿ ಬಿಜೆಪಿಯ ಪೂನಮ್ ಮಹಾಜನ್ ವಿರುದ್ಧ 1.86 ಲಕ್ಷ ಅಂತರದ ಮತಗಳಿಂದ ಸೋಲು ಕಂಡಿದ್ದರು.