ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
ಪುಣೆ, ಜನವರಿ 21: ಮಹಿಳೆಯೊಬ್ಬರಿಗೆ ಗರ್ಭಧರಿಸಲು ಸ್ಥಳೀಯ ತಂತ್ರಿಕ್ ಬಾಬಾ ಸೂಚಿಸಿದ ಮಾಟಮಂತ್ರದ ಆಚರಣೆಯ ಸತ್ತ ವ್ಯಕ್ತಿಯ ಮೂಳೆಗಳಿಂದ ತಯಾರಿಸಿದ ಪುಡಿಯನ್ನು ಆಕೆಯ ಅತ್ತೆ ಮತ್ತು ಅವಳ ಪತಿ ಸೇವಿಸುವಂತೆ ಒತ್ತಾಯ ಮಾಡಿದ್ದಾರೆ ಎಂದು ಆರೋಪಿಸಿದ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಮಹಿಳೆಯ ನೀಡಿದ ದೂರು ನಂತರ, ಪುಣೆ ಸಿಟಿ ಪೊಲೀಸ್ನ ಸಿನ್ಗಡ್ ಪೊಲೀಸ್ ಠಾಣೆಯು ಬುಧವಾರ ದಾಖಲಿಸಿದ ಎಫ್ಐಆರ್ನಲ್ಲಿ ಆಕೆಯ ಪತಿ, ಅತ್ತೆಯಂದಿರು ಮತ್ತು ತಾಂತ್ರಿಕ ಬಾಬಾ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಿಧಿಗಾಗಿ ನಿಂಬೆ ತೋಟದಲ್ಲಿ ಮಾಟಮಂತ್ರ ಮಾಡುತ್ತಿದ್ದ ನಾಲ್ವರ ಬಂಧನ
ಪುಣೆ ನಗರ ಪೊಲೀಸ್ನ ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ ಅವರು ಮಾಹಿತಿ ನೀಡಿರುವ ಪ್ರಕಾರ, ಏಳು ಶಂಕಿತರ ವಿರುದ್ಧ ಮಾನವ ತ್ಯಾಗ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಅಭ್ಯಾಸಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಆಕ್ಟ್, 2013) ಐಪಿಸಿಯ ಸೆಕ್ಷನ್ 498 ಎ, 323, 504, ಮತ್ತು 506 ಮತ್ತು ಮೂಢನಂಬಿಕೆ ವಿರೋಧಿ ಕಾಯ್ದೆಯ ಸೆಕ್ಷನ್ 3 (ಮಹಾರಾಷ್ಟ್ರ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಮಹಿಳೆ ಪೊಲೀಸರಿಗೆ ನೀಡಿರುವ ಆರೋಪ ಪಟ್ಟಿಯಲ್ಲಿ ಮೊದಲ ಪ್ರಕರಣದಲ್ಲಿ ಸಂತ್ರಸ್ತೆ 2019ರಲ್ಲಿ ಮದುವೆಯ ಸಮಯದಲ್ಲಿ ತನ್ನ ಅತ್ತೆಯಂದಿರು ವರದಕ್ಷಿಣೆ ಕೇಳಿದ್ದರು. ಅದರಲ್ಲಿ ಸ್ವಲ್ಪ ಹಣ ಮತ್ತು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಆಭರಣಗಳಿಗೆ ಬೇಡಿಕೆ ಇಡಲಾಗಿತ್ತು. ತದನಂತರ ಎರಡನೇ ದೂರಿನಲ್ಲಿ ಪೊಲೀಸರು ಮೂಢನಂಬಿಕೆ ಮತ್ತು ಬ್ಲ್ಯಾಕ್ ಮ್ಯಾಜಿಕ್ ವಿರೋಧಿ ಕಾಯ್ದೆಯ ಸೆಕ್ಷನ್ 3 ಅನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳ ನರಬಲಿ: ಒಂದೇ ದೇಹದ 56 ಅಂಗಗಳನ್ನು ಬೇಯಿಸಿ ತಿಂದರೇ ಆರೋಪಿಗಳು?
ಮಹಿಳೆಯ ಅತ್ತೆಯಂದಿರು ಅವಳನ್ನು ಹಲವಾರು ಅಮವಾಸ್ಯೆಗಳಲ್ಲಿ ಮನೆಯಲ್ಲಿ ಕೆಲವು ಮೂಢನಂಬಿಕೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದರು. ಇತರ ಆಚರಣೆಗಳಲ್ಲಿ ಸಂತ್ರಸ್ತೆಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಅಪರಿಚಿತ ಸ್ಮಶಾನಕ್ಕೆ ಎಳೆದುಕೊಂಡು ಹೋಗಿ ಕೆಲವು ಮೂಳೆ ತುಣುಕುಗಳನ್ನು ಸೇವಿಸುವಂತೆ ಒತ್ತಾಯಿಸಲಾಯಿತು ಎಂದು ತಿಳಿದು ಬಂದಿದೆ.
ಸಂತ್ರಸ್ತೆಯನ್ನು ಅತ್ತೆ ಮಾವಂದಿರು ಮಹಾರಾಷ್ಟ್ರದ ಕೊಂಕಣ ಪ್ರದೇಶದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಅಲ್ಲಿ ಮತ್ತೊಂದು ವಿಧದ ಆಚರಣೆಯ ಭಾಗವಾಗಿ ಜಲಪಾತದ ಪಕ್ಕದಲ್ಲಿ ಅಘೋರಿ ಪೂಜೆಯಲ್ಲಿ ಕೂರಿಸಿದ್ದರು. ಅವರು ಈ ಆಚರಣೆಯಲ್ಲಿ ತೊಡಗಿರುವಾಗ ಅವರು ತಾಂತ್ರಿಕ ಬಾಬಾರಿಂದ ವೀಡಿಯೊ ಕರೆಗಳ ಮೂಲಕ ನಿರ್ದೇಶನಗಳನ್ನು ಸ್ವೀಕರಿಸುತ್ತಿದ್ದರು ಎಂದು ಡಿಸಿಪಿ ಶರ್ಮಾ ತಿಳಿಸಿದ್ದಾರೆ.
ಈಗ ನಾವು ಏಳು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ದೂರನ್ನು ಗಂಭೀರವಾಗಿ ಪರಿಗಣಿಸಿದ ನಂತರ ತನಿಖೆ ಆರಂಭಿಸಿದ್ದೇವೆ. ಈ ಆಚರಣೆಗಳು ನಡೆದ ನಿರ್ದಿಷ್ಟ ಸ್ಮಶಾನವನ್ನು ನಾವು ಹುಡುಕಲು ಪ್ರಾರಂಭಿಸಿದ್ದೇವೆ. ಈ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಿದ್ದೇವೆ. ನಂತರ ಘಟನೆಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು. ಎಸಿಪಿ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಇದೀಗ ನಾವು ಭರವಸೆ ನೀಡಬಹುದು. ಸಂತ್ರಸ್ತೆಯ ಕುಟುಂಬವು ಸುಶಿಕ್ಷಿತವಾಗಿದೆ ಆದರೂ ಇಂತಹ ಕೃತ್ಯ ಎಸಗಿದೆ ಎಂದು ಡಿಸಿಪಿ ಆಶ್ಚರ್ಯ ವ್ಯಕ್ತಪಡಿಸಿದರು.