
Video: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಕಾಲ್ಸೇತುವೆ ಕುಸಿದು ನಾಲ್ವರಿಗೆ ಗಾಯ
ಚಂದ್ರಾಪುರ್, ನವೆಂಬರ್ 27: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಾಡುವ ಕಾಲು ಸೇತುವೆಯ ಚಪ್ಪಡಿ ಕುಸಿದು ನಾಲ್ವರು ಗಾಯಗೊಂಡಿದ್ದಾರೆ. ನಗರದ ಬಲ್ಲಾರ್ ಶಾ ರೈಲು ನಿಲ್ದಾಣದಲ್ಲಿ ಸಂಜೆ 5 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಫುಟ್ಬ್ರಿಡ್ಜ್ನಲ್ಲಿದ್ದ ಜನರು ಕೆಳಗಿನ ರೈಲು ಹಳಿಗಳ ಮೇಲೆ ಬಿದ್ದಿದ್ದಾರೆ. ಅದೃಷ್ಟವಶಾತ್ ಈ ಸಮಯದಲ್ಲಿ ಆ ಹಳಿಗಳಲ್ಲಿ ಯಾವುದೇ ರೈಲು ಸಂಚರಿಸುತ್ತಿರಲಿಲ್ಲ ಎಂದು ಗೊತ್ತಾಗಿದೆ. ಈ ಪಾದಚಾರಿ ಸೇತುವೆಯು 60 ಅಡಿ ಎತ್ತರವಿದ್ದು ಸಾಕಷ್ಟು ಹಳೆಯದಾಗಿದೆ ಎಂದು ವರದಿಯಾಗಿದೆ.
Breaking; ಬೆಂಗಳೂರು-ಹೌರಾ ರೈಲು ಬೋಗಿಯಲ್ಲಿ ಬೆಂಕಿ, ಸ್ಪಷ್ಟನೆ
ಮಹಾರಾಷ್ಟ್ರದ ಚಂದ್ರಾಪುರದ ರೈಲ್ವೆ ನಿಲ್ದಾಣದಲ್ಲಿ ಕುಸಿತ ಕಂಡಿರುವ ಕಾಲು ಸೇತುವೆಯು ಒಂದು ಮತ್ತು ನಾಲ್ಕು ಪ್ಲಾಟ್ಫಾರ್ಮ್ಗಳ ನಡುವೆ ಸಂಪರ್ಕ ಕೊಂಡಿಯಾಗಿತ್ತು ಎಂದು ತಿಳಿದು ಬಂದಿದೆ.
ಸಿವಿಲ್ ಆಸ್ಪತ್ರೆಗೆ ಗಾಯಾಳುಗಳು ದಾಖಲು:
ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಗಾಯಗೊಂಡ ಎಲ್ಲರನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ವಕ್ತಾರ ಶಿವಾಜಿ ಸುತಾರ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
#WATCH | Slabs fall off of a foot over bridge at Balharshah railway junction in Maharashtra's Chandrapur; people feared injured pic.twitter.com/5VT8ry3ybe
— ANI (@ANI) November 27, 2022
ಗಾಯಾಳುಗಳಿಗೆ ಪರಿಹಾರ: ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.