Video: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಕಾಲ್ಸೇತುವೆ ಕುಸಿದು ನಾಲ್ವರಿಗೆ ಗಾಯ
ಚಂದ್ರಾಪುರ್,
ನವೆಂಬರ್
27:
ಮಹಾರಾಷ್ಟ್ರದ
ಚಂದ್ರಾಪುರದಲ್ಲಿ
ನಡೆದಾಡುವ
ಕಾಲು
ಸೇತುವೆಯ
ಚಪ್ಪಡಿ
ಕುಸಿದು
ನಾಲ್ವರು
ಗಾಯಗೊಂಡಿದ್ದಾರೆ.
ನಗರದ
ಬಲ್ಲಾರ್
ಶಾ
ರೈಲು
ನಿಲ್ದಾಣದಲ್ಲಿ
ಸಂಜೆ
5
ಗಂಟೆ
ವೇಳೆಗೆ
ಈ
ಘಟನೆ
ನಡೆದಿದೆ.
ಫುಟ್ಬ್ರಿಡ್ಜ್ನಲ್ಲಿದ್ದ
ಜನರು
ಕೆಳಗಿನ
ರೈಲು
ಹಳಿಗಳ
ಮೇಲೆ
ಬಿದ್ದಿದ್ದಾರೆ.
ಅದೃಷ್ಟವಶಾತ್
ಈ
ಸಮಯದಲ್ಲಿ
ಆ
ಹಳಿಗಳಲ್ಲಿ
ಯಾವುದೇ
ರೈಲು
ಸಂಚರಿಸುತ್ತಿರಲಿಲ್ಲ
ಎಂದು
ಗೊತ್ತಾಗಿದೆ.
ಈ
ಪಾದಚಾರಿ
ಸೇತುವೆಯು
60
ಅಡಿ
ಎತ್ತರವಿದ್ದು
ಸಾಕಷ್ಟು
ಹಳೆಯದಾಗಿದೆ
ಎಂದು
ವರದಿಯಾಗಿದೆ.
Breaking; ಬೆಂಗಳೂರು-ಹೌರಾ ರೈಲು ಬೋಗಿಯಲ್ಲಿ ಬೆಂಕಿ, ಸ್ಪಷ್ಟನೆ
ಮಹಾರಾಷ್ಟ್ರದ ಚಂದ್ರಾಪುರದ ರೈಲ್ವೆ ನಿಲ್ದಾಣದಲ್ಲಿ ಕುಸಿತ ಕಂಡಿರುವ ಕಾಲು ಸೇತುವೆಯು ಒಂದು ಮತ್ತು ನಾಲ್ಕು ಪ್ಲಾಟ್ಫಾರ್ಮ್ಗಳ ನಡುವೆ ಸಂಪರ್ಕ ಕೊಂಡಿಯಾಗಿತ್ತು ಎಂದು ತಿಳಿದು ಬಂದಿದೆ.
ಸಿವಿಲ್
ಆಸ್ಪತ್ರೆಗೆ
ಗಾಯಾಳುಗಳು
ದಾಖಲು:
ಪ್ರಾಥಮಿಕ
ಚಿಕಿತ್ಸೆ
ನೀಡಿದ
ನಂತರ
ಗಾಯಗೊಂಡ
ಎಲ್ಲರನ್ನು
ಸಿವಿಲ್
ಆಸ್ಪತ್ರೆಗೆ
ಸ್ಥಳಾಂತರಿಸಲಾಗಿದೆ
ಎಂದು
ರೈಲ್ವೆ
ವಕ್ತಾರ
ಶಿವಾಜಿ
ಸುತಾರ್
ಸುದ್ದಿ
ಸಂಸ್ಥೆ
ANI
ಗೆ
ತಿಳಿಸಿದ್ದಾರೆ.
#WATCH | Slabs fall off of a foot over bridge at Balharshah railway junction in Maharashtra's Chandrapur; people feared injured pic.twitter.com/5VT8ry3ybe
— ANI (@ANI) November 27, 2022
ಗಾಯಾಳುಗಳಿಗೆ ಪರಿಹಾರ: ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.