ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಕಾಲ್ಸೇತುವೆ ಕುಸಿದು ನಾಲ್ವರಿಗೆ ಗಾಯ

|
Google Oneindia Kannada News

ಚಂದ್ರಾಪುರ್, ನವೆಂಬರ್ 27: ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಾಡುವ ಕಾಲು ಸೇತುವೆಯ ಚಪ್ಪಡಿ ಕುಸಿದು ನಾಲ್ವರು ಗಾಯಗೊಂಡಿದ್ದಾರೆ. ನಗರದ ಬಲ್ಲಾರ್ ಶಾ ರೈಲು ನಿಲ್ದಾಣದಲ್ಲಿ ಸಂಜೆ 5 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಫುಟ್‌ಬ್ರಿಡ್ಜ್‌ನಲ್ಲಿದ್ದ ಜನರು ಕೆಳಗಿನ ರೈಲು ಹಳಿಗಳ ಮೇಲೆ ಬಿದ್ದಿದ್ದಾರೆ. ಅದೃಷ್ಟವಶಾತ್ ಈ ಸಮಯದಲ್ಲಿ ಆ ಹಳಿಗಳಲ್ಲಿ ಯಾವುದೇ ರೈಲು ಸಂಚರಿಸುತ್ತಿರಲಿಲ್ಲ ಎಂದು ಗೊತ್ತಾಗಿದೆ. ಈ ಪಾದಚಾರಿ ಸೇತುವೆಯು 60 ಅಡಿ ಎತ್ತರವಿದ್ದು ಸಾಕಷ್ಟು ಹಳೆಯದಾಗಿದೆ ಎಂದು ವರದಿಯಾಗಿದೆ.

Breaking; ಬೆಂಗಳೂರು-ಹೌರಾ ರೈಲು ಬೋಗಿಯಲ್ಲಿ ಬೆಂಕಿ, ಸ್ಪಷ್ಟನೆBreaking; ಬೆಂಗಳೂರು-ಹೌರಾ ರೈಲು ಬೋಗಿಯಲ್ಲಿ ಬೆಂಕಿ, ಸ್ಪಷ್ಟನೆ

ಮಹಾರಾಷ್ಟ್ರದ ಚಂದ್ರಾಪುರದ ರೈಲ್ವೆ ನಿಲ್ದಾಣದಲ್ಲಿ ಕುಸಿತ ಕಂಡಿರುವ ಕಾಲು ಸೇತುವೆಯು ಒಂದು ಮತ್ತು ನಾಲ್ಕು ಪ್ಲಾಟ್‌ಫಾರ್ಮ್‌ಗಳ ನಡುವೆ ಸಂಪರ್ಕ ಕೊಂಡಿಯಾಗಿತ್ತು ಎಂದು ತಿಳಿದು ಬಂದಿದೆ.

Footbridge Collapses In Maharashtras Chandrapur; Four people injured

ಸಿವಿಲ್ ಆಸ್ಪತ್ರೆಗೆ ಗಾಯಾಳುಗಳು ದಾಖಲು:
ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಗಾಯಗೊಂಡ ಎಲ್ಲರನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ವಕ್ತಾರ ಶಿವಾಜಿ ಸುತಾರ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಗಾಯಾಳುಗಳಿಗೆ ಪರಿಹಾರ: ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

English summary
Footbridge Collapses In Maharashtra's Chandrapur; Four people injured. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X