ಎಕ್ಸಿಟ್ ಪೋಲ್ ತಿರುಚಲಾಗಿದೆ, ಇವೆಲ್ಲಾ ಸುಳ್ಳಿನ ಸಂತೆ : ವೀರಭದ್ರ ಸಿಂಗ್
ಶಿಮ್ಲಾ, ಡಿಸೆಂಬರ್ 17: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ಮುಖ್ಯಮಂತ್ರಿ ವೀರಭದ್ರ ಸಿಂಗ್ ತಿರಸ್ಕರಿಸಿದ್ದಾರೆ.
ಚುನಾವಣೋತ್ತರ ಸಮೀಕ್ಷೆ: ಒಂದಷ್ಟು ಟೀಕೆ, ಮತ್ತಷ್ಟು ಹಾಸ್ಯ!
ಎಕ್ಸಿಟ್ ಪೋಲ್ ಗಳು ವಸ್ತುನಿಷ್ಠವಾಗಿಲ್ಲ ಎಂದಿರುವ ಅವರು ಇವೆಲ್ಲಾ ಬೋಗಸ್, ತಿರುಚಿದ ಸಮೀಕ್ಷೆಗಳು ಎಂದು ಶನಿವಾರ ಕಿಡಿಕಾರಿದ್ದಾರೆ.
ಹಿಮಾಚಲ ಪ್ರದೇಶ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶ
"ಎಕ್ಸಿಟ್ ಪೋಲ್ ಗಳು ಬೋಗಸ್. ಇವುಗಳನ್ನು ತಿರುಚಲಾಗಿದೆ; ವಸ್ತುನಿಷ್ಠ ವಿಷಯಗಳನ್ನು ಇವು ಒಳಗೊಂಡಿಲ್ಲ. ನಾನು ಹಿಮಾಚಲ ಪ್ರದೇಶದ ಮೂಲೆ ಮೂಲೆಗಳಿಗೆ ಭೇಟಿ ನೀಡಿದ್ದೇನೆ. ಜನರು ಕಾಂಗ್ರೆಸ್ ಪರವಾಗಿದ್ದಾರೆ. ಬಹುಮತ ಪಡೆದು ಕಾಂಗ್ರೆಸ್ ವಿಜಯಿಯಾಗುತ್ತದೆ ಎಂಬ ಭರವಸೆ ನನಗಿದೆ," ಎಂದು ಅವರು ಹೇಳಿದ್ದಾರೆ.
ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?
ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ 68 ಸ್ಥಾನಗಳಿದ್ದು ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ಹೆಚ್ಚಿನ ಎಲ್ಲಾ ಸಮೀಕ್ಷೆಗಳು ಹೇಳಿವೆ. ಇಲ್ಲಿ ಬಹುಮತಕ್ಕೆ 35 ಸ್ಥಾನಗಳು ಅಗತ್ಯವಾಗಿದ್ದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಇಲ್ಲಿ ಬಿಜೆಪಿ 47-55 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕಾಂಗ್ರೆಸ್ 13-20 ಸ್ಥಾನಗಳನ್ನು ಹಾಗೂ ಇತರರು 0-2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಇನ್ನು ನ್ಯೂಸ್ 24 ಕೂಡ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 55 ಕಾಂಗ್ರೆಸ್ 13 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಒಂದೊಮ್ಮೆ ಚುನಾವಣೋತ್ತರ ಸಮೀಕ್ಷೆಗಳು ನಿಜವಾದಲ್ಲಿ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ ಬರುವುದಿಲ್ಲ ಎಂದು ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹೇಳಿದ್ದಾರೆ.