ಪಿ ಚಿದಂಬರಂ ಪುತ್ರ ಕಾರ್ತಿ ಕಚೇರಿ ಮೇಲೆ 'ಇಡಿ' ದಾಳಿ
ಬೆಂಗಳೂರು, ಡಿ.01: ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಅವರ ಮನೆ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಹಠಾತ್ ದಾಳಿ ನಡೆಸಿದ್ದಾರೆ.
ಏರ್
ಸೆಲ್
ಹಾಗೂ
ಮ್ಯಾಕ್ಸಿಸ್
ನಡುವಿನ
ಪರಭಾರೆ
ಒಪ್ಪಂದದಲ್ಲಿ
ನಡೆದಿದೆ
ಎನ್ನಲಾದ
ಅವ್ಯವಹಾರಕ್ಕೆ
ಸಂಬಂಧಿಸಿದಂತೆ
ಈ
ದಾಳಿ
ನಡೆಸಲಾಗಿದೆ.
ಕಾರ್ತಿ
ಚಿದಂಬರಂಗೆ
ಸಂಬಂಧಿಸಿದ
ಅಡ್ವಾನ್ಟೇಜ್
ಸ್ಟ್ರಾಟೆಜಿಕ್
ಕನ್ಸಲ್ಟಿಂಗ್
ಸಂಸ್ಥೆಯ
ಇಬ್ಬರು
ನಿರ್ದೇಶಕರನ್ನು
ಕಳೆದ
ಆಗಸ್ಟ್
ನಲ್ಲಿ
ವಿಚಾರಣೆಗೊಳಪಡಿಸಲಾಗಿತ್ತು.
[ಮಾರನ್
ಪರಮಾಪ್ತರಿಗೆ
ಸಿಬಿಐ
ಹೊಡೆತ]
ಪಿ
ಚಿದಂಬರಂ
ಅವರು
2006ರಲ್ಲಿ
ವಿತ್ತ
ಸಚಿವರಾಗಿದ್ದಾಗ
ಏರ್
ಸೆಲ್
ನಲ್ಲಿ
ಮ್ಯಾಕ್ಸಿಸ್
ಬಂಡವಾಳ
ಹೂಡಿಕೆಗೆ
ಅನುಮತಿ
ನೀಡಿದ್ದರು.
2004
ಹಾಗೂ
2007ರಲ್ಲಿ
ಕೇಂದ್ರ
ಟೆಲಿಕಾಂ
ಸಚಿವರಾಗಿದ್ದ
ದಯಾನಿಧಿ
ಮಾರನ್
ಅವರು
ಏರ್
ಸೆಲ್
ಗೆ
ತರಂಗ
ಗುಚ್ಛ
ಗುತ್ತಿಗೆ
ಸಿಗುವಂತೆ
ಮಾಡಿದ್ದರು.
ಇದಕ್ಕೆ
ಬದಲಾಗಿ
ಮಲೇಷಿಯಾ
ಮೂಲದ
ಮ್ಯಾಕ್ಸಿಸ್
ಕಮ್ಯೂನಿಕೇಷನ್
ಸಂಸ್ಥೆ
ಸನ್
ನೆಟ್ವರ್ಕ್
ಮಾರಲು
ಮಾರನ್
ಮುಂದಾಗಿದ್ದರು.
My
family
and
I
are
quite
prepared
to
face
the
"malicious
onslaught"
launched
by
government:
Chidambaram.
—
Press
Trust
of
India
(@PTI_News)
December
1,
2015
ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರು ಹೊತ್ತಿದ್ದರು.
ಇದರ ಜೊತೆಗೆ ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ. ಏರ್ ಸೆಲ್ ಮ್ಯಾಕ್ಸಿಸ್ ಒಪ್ಪಂದದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ದಯಾನಿಧಿ ಮಾರನ್ ಅವರ 742 ಕೋಟಿ ರು ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿದ್ದರು.