ಚಿದಂಬರಂ ಜೈಲಿಗೆ ಕಳುಹಿಸುವುದೇ 'ಇಡಿ' ನಿರ್ದೇಶಕರ ಗುರಿ!
ನವದೆಹಲಿ, ಅಕ್ಟೋಬರ್ 25: ಏರ್ ಸೆಲ್ ಮ್ಯಾಕ್ಸಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಅವರ ಮಗ ಕಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯವು ಮತ್ತೊಮ್ಮೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಈ ಹಿಂದೆ ಜಾರಿ ನಿರ್ದೇಶನಾಲಯವು ಚಾರ್ಜ್ ಶೀಟ್ ಸಲ್ಲಿಸಿದ ತಿಂಗಳ ನಂತರ ಪಟಿಯಾಲ ಕೋರ್ಟ್ ನಲ್ಲಿ ಸಿಬಿಐ ಪೂರಕ ಚಾರ್ಜ್ ಶೀಟ್ ದಾಖಲಿಸಿತ್ತು. ಈಗ ಜಾರಿ ನಿರ್ದೇಶನಾಲಯವು ಕೂಡಾ ಪೂರಕ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಸುದ್ದಿ ಬಂದಿದೆ.
ಏಲ್ ಸೆಲ್ ನಲ್ಲಿ ಗ್ಲೋಬಲ್ ಕಮ್ಯೂನಿಕೇಷನ್ ನಿಂದ ಹೂಡಿಕೆಗೆ ಅನುಕೂಲ ಆಗುವಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅಧಿಕಾರ ದುರುಪಯೋಗ ಮಾಡಿಕೊಂಡು, ಎಫ್ ಐಪಿಬಿ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ ಎಂಬ ಆರೋಪವಿದೆ.
ಚಿದಂಬರಂ, ಅವರ ಮಗ ಕಾರ್ತಿ, ಒಂಬತ್ತು ಮಂದಿ ಸರಕಾರಿ ಉದ್ಯೋಗಿಗಳು, ಏರ್ ಸೆಲ್ ಮ್ಯಾಕ್ಸಿಸ್ ಅಧಿಕಾರಿಗಳ ಹೆಸರು ಕೂಡ ಚಾರ್ಜ್ ಶೀಟ್ ನಲ್ಲಿದೆ. ಕಳೆದ ಜುಲೈ 31ರಂದು ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟಿಗೆ ಪೂರಕವಾಗಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್ ಶೀಟ್ ಇದೆ.