ಹಿಮಾಚಲ ಪ್ರದೇಶ ಸಿಎಂಗೆ ಸೇರಿದ 27 ಕೋಟಿ ರು ಆಸ್ತಿ ವಶ
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಸೇರಿದ 27 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಸೋಮವಾರದಂದು ಮುಟ್ಟುಗೋಲು ಹಾಕಿಕೊಂಡಿದೆ.
ಶಿಮ್ಲಾ, ಏಪ್ರಿಲ್ 03: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಸೇರಿದ 27 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಸೋಮವಾರದಂದು ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಭದ್ರ ಸಿಂಗ್ ಅವರು ಆರೋಪ ಎದುರಿಸುತ್ತಿದ್ದಾರೆ.
ಅಕ್ರಮ
ಹಣ
ವರ್ಗಾವಣೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಹಿಮಾಚಲ
ಪ್ರದೇಶ
ಮುಖ್ಯಮಂತ್ರಿ
ವೀರಭದ್ರ
ಸಿಂಗ್
ಅವರಿಗೆ
ಸೇರಿದ
27
ಕೋಟಿ
ರೂ.
ಮೌಲ್ಯದ
ತೋಟದ
ಮನೆಯನ್ನು
ಜಾರಿ
ನಿರ್ದೇಶನಾಲಯ
ಮುಟ್ಟುಗೋಲು
ಹಾಕಿಕೊಂಡಿದೆ.
ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ. ದಕ್ಷಿಣ ದೆಹಲಿಯ ಮೆಹರೂಲಿಯಾ ಪ್ರದೇಶದಲ್ಲಿರುವ ವೀರಭದ್ರ ಸಿಂಗ್ ಒಡೆತನದ ತೋಟದ ಮನೆ (ಫಾರ್ಮ್ ಹೌಸ್) ಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಸುಮಾರು
6.61
ಕೋಟಿ
ರೂ.
ಮೌಲ್ಯಕ್ಕೆ
ಈ
ಫಾರ್ಮ್
ಹೌಸ್
ಖರೀದಿಸಿದ್ದರು.
ಆದರೆ,
ಇದರ
ಮಾರುಕಟ್ಟೆ
ಈಗಿನ
ಮೌಲ್ಯ
27
ಕೋಟಿ
ರೂ.
ನಷ್ಟಿದೆ.
ಈ
ಫಾರ್ಮ್
ಹೌಸ್
Maple
Destinations
&
Dreambuild
ಎಂಬ
ಕಂಪನಿಯ
ಹೆಸರಿನಲ್ಲಿ
ನೋಂದಾಯಿಸಲಾಗಿದೆ
ಎಂದು
ಜಾರಿ
ನಿರ್ದೇಶನಾಲಯ
ತನ್ನ
ಪ್ರಕಟಣೆಯಲ್ಲಿ
ತಿಳಿಸಿದೆ.
ED attaches a farm (Purchased at 6.61 Cr in black & white) worth Rs 27 Crore of Maple Destinations & Dreambuild in Virbhadra Singh DA case.
— ED (@dir_ed) April 3, 2017
ಇದಲ್ಲದೆ 10 ಕೋಟಿ ರೂ. ಹಣ ಅಕ್ರಮವಾಗಿ ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ಇತ್ತೀಚೆಗೆ ವೀರಭದ್ರ ಸಿಂಗ್, ಅವರ ಪತ್ನಿ ಮತ್ತು ಇತರ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಸಹ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ವೀರಭದ್ರ ಸಿಂಗ್ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್ ಕೂಡಾ ನಿರ್ದೇಶಿಸಿತ್ತು.