ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಕಂಪಿಸಿದ ಭೂಮಿ
ಗುವಾಹಟಿ, ಏಪ್ರಿಲ್ 05: ಮೂರನೇ ಹಂತದ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಆರಂಭಕ್ಕೆ ಕೆಲವು ಗಂಟೆ ಬಾಕಿ ಇರುವಂತೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಪ್ರಬಲ ಭೂಕಂಪನ: ಕಂಗಾಲಾಗಿ ಮನೆಯಿಂದ ಹೊರಬಂದ ಜನರು
ನೇಪಾಳ ಮತ್ತು ಸಿಕ್ಕಿಂ ಗಡಿ ಪ್ರದೇಶದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಭಾರತೀಯ ರಾಷ್ಟ್ರೀಯ ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.4ರಷ್ಟಿದೆ ಎಂದು ಗೊತ್ತಾಗಿದೆ.
ಅಸ್ಸಾಂ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 6ರಂದು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆ ಮತ್ತು ಅಸ್ಸಾಂನಲ್ಲಿ ಕೊನೆಯ ಹಂತದ ಚುನಾವಣೆ ನಡೆಯಲಿದೆ.
ನಾಲ್ಕು
ರಾಜ್ಯಗಳ
ಸಿಎಂಗಳ
ಜೊತೆ
ಪ್ರಧಾನಿ
ಚರ್ಚೆ:
ಭೂಕಂಪನಕ್ಕೆ
ಸಂಬಂಧಿಸಿದಂತೆ
ನಾಲ್ಕು
ರಾಜ್ಯಗಳ
ಮುಖ್ಯಮಂತ್ರಿಗಳ
ಜೊತೆಗೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಚರ್ಚೆ
ನಡೆಸಿದ್ದಾರೆ
ಎಂದು
ತಿಳಿದು
ಬಂದಿದೆ.
ಬಿಹಾರ
ಮುಖ್ಯಮಂತ್ರಿ
ನಿತೀಶ್
ಕುಮಾರ್,
ಅಸ್ಸಾಂ
ಮುಖ್ಯಮಂತ್ರಿ
ಸರ್ಬಾನಂದ್
ಸೋನೋವಾಲಾ,
ಸಿಕ್ಕಿಂ
ಮುಖ್ಯಮಂತ್ರಿ
ಪಿಎಸ್
ತಮಂಗ್
ಜೊತೆಗೆ
ಮಾತುಕತೆ
ನಡೆಸಿದ್ದು,
ಭೂಕಂಪನದಿಂದ
ಆಗಿರುವ
ಹಾನಿ
ಬಗ್ಗೆ
ಮಾಹಿತಿ
ಪಡೆದುಕೊಂಡಿದ್ದಾರೆ
ಎಂದು
ಮೂಲಗಳಿಂದ
ತಿಳಿದು
ಬಂದಿದೆ.