ದುಬೈನಲ್ಲಿ ರಸ್ತೆ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು
ಅಬುಧಾಬಿ, ಡಿಸೆಂಬರ್ 26: ಅಬುಧಾಬಿಯಲ್ಲಿ ಸಂಭವಿಸಿದ ರಸ್ತೆ ಅಪಾತವೊಂದರಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬುಧವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ರಸ್ತೆ ಅಪಘಾತದಲ್ಲಿ ರೋಹಿತ್ ಕೃಷ್ಣಕುಮಾರ್(19) ಹಾಗೂ ಶರತ್ ಕುಮಾರ್ (21) ಇಬ್ಬರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಬೆಳಗಾವಿ: ಬಂಡೆಗೆ ಡಿಕ್ಕಿ ಹೊಡೆದು ಸರ್ಕಾರಿ ಬಸ್ ಪಲ್ಟಿ
ರೋಹಿತ್ ಹಾಗೂ ಶರತ್ ಮೂಲತಃ ಕೇರಳದವರಾಗಿದ್ದು, ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾಗಲು ತೆರಳಿದ್ದರು.ಶರತ್ ಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ್ದನು. ಇತ್ತ ರೋಹಿತ್ ಕೃಷ್ಣಕುಮಾರ್ ತನ್ನ ಉನ್ನತ ಶಿಕ್ಷಣಕ್ಕಾಗಿ ಲಂಡನ್ಗೆ ತೆರಳಿದ್ದನು. ಕ್ರಿಸ್ಮಸ್ ಹಬ್ಬವನ್ನು ಆಚರಿಸಲು ಇಬ್ಬರು ಮಂಗಳವಾರ ರಾತ್ರಿ ದುಬೈಯಲ್ಲಿ ಭೇಟಿ ಆಗಿದ್ದರು.
ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾದ ನಂತರ ಶರತ್ ಬುಧವಾರ ನಸುಕಿನ ಜಾವದಲ್ಲಿ ರೋಹಿತ್ನನ್ನು ಮನೆಗೆ ಡ್ರಾಪ್ ಮಾಡಲು ಹೋಗುತ್ತಿದ್ದರು. ಈ ವೇಳೆ ಕಾರು ಅಪಘಾತ ಸಂಭವಿಸಿದೆ.