ಚಳವಳಿಗೆ ಮುಂದಾದ ಅಂಗವಿಕಲರಿಗೆ ಲಾಠಿ ಏಟು
ನವದೆಹಲಿ, ಡಿ. 3 : ವಿಶ್ವ ಅಂಗವಿಕಲರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ ಅಂಗವಿಕಲರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಘರ್ಷಣೆ ಉಂಟಾಗಿ ಪ್ರತಿಭಟನಾನಿರತರು ಪೊಲೀಸರಿಂದ ಲಾಠಿ ಏಟು ತಿನ್ನಬೇಕಾಯಿತು. ಒಂದು ಹಂತದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕಾನೂನು ಭಂಗ ಹೆಸರಿನಲ್ಲಿ ಅಂಗವಿಕಲರು ಚಳವಳಿಗೆ ಮುಂದಾಗಿದ್ದರು.[ಅಂಧ ಮಕ್ಕಳ ಪ್ರತಿಭೆಗೆ ಇಲ್ಲೊಂದು ವೇದಿಕೆ]
ಸಿಪಿಐಎಂ ಮುಖಂಡ ಕಾಂತಿ ಗಂಗೂಲಿ ಕೋಲ್ಕತ್ತಾದಲ್ಲಿ ಪ್ರತಿಭಟನಾಕಾರರ ಪರವಾಗಿ ನಿಂತಿದ್ದರು. ಇತ್ತ ದೆಹಲಿಯಲ್ಲಿ ನ್ಯಾಶನಲ್ ಫೆಡರೇಶನ್ ಆಫ್ ಬ್ಲೈಂಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.[ಪಿಟಿಐ ಚಿತ್ರಗಳು]
ಪ್ರತಿಭಟನಾಕಾರರಿಗೆ ಪೊಲೀಸರ ಲಾಠಿ
ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗವಿಕಲರನ್ನು ತಡೆಯಲು ಮುಂದಾದ ಪೊಲೀಸರು.
ರಕ್ಷಣೆ ಇಲ್ಲವೆ?
ದೆಹಲಿಯಲ್ಲಿ ನ್ಯಾಶನಲ್ ಫೆಡರೇಶನ್ ಆಫ್ ಬ್ಲೈಂಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕೋಲ್ಕತ್ತಾ
ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗವಿಕಲರನ್ನು ತಡೆಯಲು ಪೊಲೀಸರ ಹರಸಾಹಸ.
ನೂಕು ನುಗ್ಗಲು
ಕಾನೂನು ಭಂಗ ಮಾಡಲು ಯತ್ನಿಸಿದ ಅಂಗವಿಕಲರು.
ಕಾಂತಿ ಗಂಗೂಲಿ.
ಹೋರಾಟದಲ್ಲಿ ಪಾಲ್ಗೊಂಡಿದ್ದ ಸಿಪಿಐಎಂ ಮುಖಂಡ ಕಾಂತಿ ಗಂಗೂಲಿ.
ತಡೆಯಲು ಹರಸಾಹಸ
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗುತ್ತಾ ಮುಂದೆ ಬರುತ್ತಿದ್ದ ಹೋರಾಟಗಾರರನ್ನು ತಡೆದ ಪೊಲೀಸರು.