ಮೋದಿ ಹತ್ಯೆ ಸಂಚನ್ನು 'ಹಾಸ್ಯಾಸ್ಪದ' ಎಂದವರಿಗೆ ಫಡ್ನವಿಸ್ ತರಾಟೆ
ನವದೆಹಲಿ, ಜೂನ್ 15: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ವರದಿಯನ್ನು 'ಹಾಸ್ಯಾಸ್ಪದ' ಎಂದು ಕರೆದಿರುವ ವಿರೋಧಪಕ್ಷಗಳ ನಡೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಖಂಡಿಸಿದ್ದಾರೆ.
ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?
"ನಿಜಕ್ಕೂ ಇದೊಂದು ದುರದೃಷ್ಟಕರ ಹೇಳಿಕೆ. ಮೋದಿ ಹತ್ಯೆಗೆ ಸಂಚು ರೂಪಿಸಲಾಗುತ್ತು ಎಂಬ ವಿಷಯವನ್ನು ಹಾಸ್ಯಾಸ್ಪದ ಎಂದು ವಿರೋಧಪಕ್ಷಗಳು ಹೇಳಿವೆ. ಶರದ್ ಪವಾರ್ ರಂಥ ಹಿರಿಯರೂ ಇದೇ ಮಾತನ್ನು ಹೇಳಿರುವುದು ಖೇದಕರ. ಇದು ಕೇವಲ ಬೆದರಿಕೆಯಲ್ಲ. ಇಂಥ ವಿಷಯಗಳಲ್ಲಿ ಎಂದಿಗೂ ರಾಜಕೀಯ ಮಾಡುವುದಕ್ಕೆ ಹೋಗಬಾರದು" ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವರದಿಯನ್ನು ಇತ್ತೀಚೆಗೆ ಮಾಧ್ಯಮಗಳು ಬಯಲಿಗೆಳೆದಿದ್ದವು. ಮೋದಿಯವರ ಹತ್ಯೆ ಸಂಚಿನ ಕುರಿತು ಮಾವೋವಾದಿಗಳು ಬರೆದ ಪತ್ರವೂ ಮಾಧ್ಯಮಗಳಿಗೆ ಸಿಕ್ಕಿತ್ತು. ಆದರೆ ಈ ವದಂತಿಗಳೆಲ್ಲ ಬಿಜೆಪಿಯ ಜನಪ್ರಿಯತೆಯ ಅಜೆಂಡಾ ಎಂದಿರುವ ವಿಪಕ್ಷಗಳು, 'ಹಾಸ್ಯಾಸ್ಪದ' ಎಂದು ದೂರಿವೆ.