ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದೆಲ್ಲೆಡೆ ಪ್ರವಾಹಕ್ಕೆ ಆಹುತಿಯಾದವರ ಸಂಖ್ಯೆ 200ಕ್ಕೇರಿಕೆ

|
Google Oneindia Kannada News

Recommended Video

ಕರ್ನಾಟಕ, ಕೇರಳ, ಮಹರಾಷ್ಟ್ರ, ಗುಜರಾತ್ ನಲ್ಲಿ ಮಳೆಯಿಂದ ಆಗಿದ್ದೇನು ಗೊತ್ತಾ..? | Oneindia Kannada

ಬೆಂಗಳೂರು, ಆಗಸ್ಟ್ 13: ಭಾರಿ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ಸಂಭವಿಸಿದ ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಭಾರತದಲ್ಲಿ ಈ ಸಮಯಕ್ಕೆ ಮೃತಪಟ್ಟವರ ಸಂಖ್ಯೆ 200ಕ್ಕೇರಿದೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗುಜರಾತ್ ಸೇರಿದಂತೆ ದೇಶದ ಹಲವೆಡೆ ಮಳೆ, ಪ್ರವಾಹ ಇನ್ನೂ ಮುಂದುವರೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ಸೇನೆ, ನೌಕಾಪಡೆ, ವಾಯುಸೇನೆ, ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರ ನೆರವಿನಿಂದ ಹಲವು ಜೀವಗಳನ್ನು ರಕ್ಷಿಸಲಾಗಿದೆ.

Around 200 dead due to floods in Gujarat, Kerala, Karnataka and Maharashtra


ಕಚ್ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 120ಕ್ಕೂ ಏರ್ ಲಿಫ್ಟ್ ಮಾಡಿದ್ದು, ಕರ್ನಾಟಕದ ಕೊಪ್ಪಳ ಜಿಲ್ಲೆಯ ವಿರುಪಾಪುರ ಗುಡ್ಡೆಯಿಂದ 301 ಮಂದಿ ರಕ್ಷಣೆ, ಚಿಕ್ಕಮಗಳೂರಿನ ಹೊರಟ್ಟಿ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಸಿಲುಕಿದ್ದ 76 ಮಂದಿ ರಕ್ಷಣೆ ಪ್ರಮುಖವಾದ ಕಾರ್ಯಾಚರಣೆಯಾಗಿದೆ.

ಸಾವು ನೋವು: ಸುಮಾರು 200 ಮಂದಿ ಮೃತರಾಗಿದ್ದು, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿ 9 ಮಂದಿ ಮೃತರಾಗಿದ್ದಾರೆ. ಸೋಮವಾರದಂದು ಪಶ್ಚಿಮ ಬಂಗಾಲ ಹಾಗೂ ಒಡಿಶಾದಲ್ಲಿ ಮಳೆಯಿಂದ 5 ಮಂದಿ ಮೃತರಾಗಿದ್ದಾರೆ. ಕೇರಳದಲ್ಲಿ ಸಾವಿನ ಸಂಖ್ಯೆ 83ಕ್ಕೇರಿದ್ದು, ಮಲಪ್ಪುರಂನಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮಳೆ ಅಬ್ಬರಕ್ಕೆ ಕರ್ನಾಟಕ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಒಟ್ಟಾರೆ 116 ಮಂದಿ ಸಾವನ್ನಪ್ಪಿದ್ದಾರೆ.

English summary
Deluge 2019: Rescue operation on full sling in Flood-hit Gujarat, Kerala, Karnataka and Maharashtra, the four states witness death of more than 200 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X