ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂದು ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತ ಸಂಘಗಳ ಬೃಹತ್ ಪ್ರತಿಭಟನೆ
ನವದೆಹಲಿ, ಸೆಪ್ಟೆಂಬರ್ 05: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶದ ಬೇರೆ ಬೇರೆ ರಾಜ್ಯದ ರೈತರು ಮತ್ತು ಕಾರ್ಮಿಕರು ದೆಹಲಿಗೆ ತೆರಳಿ ಇಂದು(ಸೆ.05) ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಅಖಿಲ ಭಾರತ ಕಿಸಾನ್ ಸಭಾ(AIKS), ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ(AIAWU), ಭಾರತೀಯ ಟ್ರೇಡ್ ಯೂನಿಯನ್ ಕೇಂದ್ರ(CITU)ಗಳು ಸೇರಿ 'ಮಜ್ದೂರ್ ಕಿಸಾನ್ ಸಂಘರ್ಷ rally' ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಸಾಲದ ಋಣದಿಂದ ಬಿಡುಗಡೆ: ದುರ್ಬಲ ವರ್ಗದವರಿಗೆ ರಾಜ್ಯ ಸರ್ಕಾರದ ಕೊಡುಗೆ
ಒಟ್ಟು 15 ಬೇಡಿಕೆಗಳನ್ನು ಸಂಘಟನೆಗಳು ಸರ್ಕಾರದ ಮುದ್ದಿಟ್ಟಿದ್ದು, ಅವುಗಳಲ್ಲಿ ಪ್ರಮುಖವಾಗಿ ಸಾಲಮನ್ನಾ, ಭೂರಹಿತರಿಗೆ ಭೂಮಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸುವುದು, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದು, ಬೆಂಬಲ ಬೆಲೆ ನೀಡುವುದು ಇತ್ಯಾದಿಗಳು ಸೇರಿವೆ.
ಫಸಲ್ ಭೀಮಾ ಯೋಜನೆ ಸಂಪೂರ್ಣ ವಿಫಲ: ಕೇಂದ್ರದ ವಿರುದ್ಧ ಖಂಡ್ರೆ ಕಿಡಿ
ಈ ಪ್ರತಿಭಟನೆಯಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು, ಕೂಲಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ.
Comments
English summary
Farmer outfits All India Kisan Sabha (AIKS), All India Agriculture Workers Union (AIAWU) and Centre of Indian Trade Union (CITU) will be holding a rally on Wednesday at Parliament Street in the national capital under the name 'Majdoor Kisan Sangharsh Rally'.