ವಾಯುಸೇನೆ-ಎಚ್ ಎಎಲ್ ಸಂವಹನಕ್ಕೆ ಹೊಸ ಪೋರ್ಟಲ್
ಬೆಂಗಳೂರು, ಸೆಪ್ಟೆಂಬರ್. 07: ಡಿಜಿಟಲ್ ಇಂಡಿಯಾ ಯೋಜನೆಯಡಿ ಭಾರತದ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವ ವಾಯುಸೇನೆ ಮತ್ತು ಎಚ್ಎಎಲ್ ಇ -ಪೋರ್ಟಲ್ಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಿದರು.
ಎಚ್ಎಎಲ್ ಕೇಂದ್ರ ಕಚೇರಿಯಲ್ಲಿ ಇ- ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಪರಿಕ್ಕರ್, ಭಾರತೀಯ ವಾಯುಪಡೆ ಮತ್ತು ಎಚ್ಎಎಲ್ಗಳ ಸಂವಹನ ಹೆಚ್ಚುವುದರೊಂದಿಗೆ ಉತ್ತಮ ಪೈಪೋಟಿ ಸಾದ್ಯವಾಗಲಿದೆ. ಅನುಮಾನ ಮತ್ತು ಗೊಂದಲ ಉಂಟಾದಲ್ಲಿ ಜಂಟಿ ಸಭೆ ನಡೆಸಲು ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದರು.[ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ನಿರ್ಮಾಣ ಘಟಕ]
ಹೊಸ ಹೊಸ ಸಂಶೋಧನೆಗಳನ್ನು ಹಂಚಿಕೊಳ್ಳಲು ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಕ್ಪಪ್ರವಾಗಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ. ಎಂದು ಪರಿಕ್ಕರ್ ತಿಳಿಸಿದರು. ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು, ಏರ್ ಮಾರ್ಷಲ್ ಎಸ್.ಬಿ.ಪಿ. ಸಿನ್ಹಾ ಹಾಜರಿದ್ದರು.[ಎಚ್ ಎಎಲ್ ನೂತನ ಅಧ್ಯಕ್ಷ ಸುವರ್ಣ ರಾಜು ಸಂದರ್ಶನ]
ಅಂತಾರಾಷ್ಟ್ರೀಯ
ಸ್ಮಾರಕ
ಬೆಂಗಳೂರಿನ
ಚೌಡಯ್ಯ
ರಸ್ತೆಯ
8
ಎಕರೆ
ಪ್ರದೇಶದಲ್ಲಿ
ನಿರ್ಮಾಣಗೊಳ್ಳುತ್ತಿರುವ
ರಾಷ್ಟ್ರೀಯ
ಸೈನಿಕ
ಸ್ಮಾರಕವನ್ನು
ಅಂತಾರಾಷ್ಟ್ರೀಯ
ಗುರುತನ್ನಾಗಿಸಲು
ರಕ್ಷಣಾ
ಇಲಾಖೆ
ಸಿದ್ಧವಿದ್ದು
ರಾಜ್ಯ
ಸರ್ಕಾರದ
ಒಪ್ಪಿಗೆ
ಮತ್ತು
ಹೊಂದಾಣಿಕೆ
ಅಗತ್ಯವಿದೆ
ಎಂದು
ಮನೋಹರ್
ಪರಿಕ್ಕರ್
ಹೇಳಿದರು.