ದೇಶದಲ್ಲಿ ಕೊರೊನಾಗಿಂತಲೂ ಮಾರಣಾಂತಿಕವಾದ ವಾಯುಮಾಲಿನ್ಯ
ನವದೆಹಲಿ, ಡಿಸೆಂಬರ್ 22: ದೇಶದಲ್ಲಿ ಕೊರೊನಾಗಿಂತಲೂ ವಾಯುಮಾಲಿನ್ಯ ಹೆಚ್ಚು ಮಾರಣಾಂತಿಕವಾಗಿದೆ.
ಈ ಬಾರಿ ದೇಶದಲ್ಲಿ ಮೃತಪಟ್ಟಿರುವ ಒಟ್ಟು ಮಂದಿ ಪೈಕಿ ಶೇ.17.8ರಷ್ಟು ಮಂದಿ ವಾಯು ಮಾಲಿನ್ಯದಿಂದಾಗಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ ಏರಿಕೆ, ಗಾಳಿಯ ಗುಣಮಟ್ಟ ತೀರಾ ಕಳಪೆ
ವಾಯು ಮಾಲಿನ್ಯವು ಸಾಕಷ್ಟು ರೋಗಿಗಳಿಗೆ ಎಡೆಮಾಡಿಕೊಡುತ್ತದೆ. ದೆಹಲಿಯಲ್ಲಿ ವಾಹನಗಳಿಂದ, ಕಾರ್ಖಾನೆಗಳಿಂದ ವಾಯುಮಾಲಿನ್ಯ ಉಂಟಾಗಲಿದೆ.
2019ರಲ್ಲಿ 67 ಮಿಲಿಯನ್ ಮಂದಿ ವಾಯು ಮಾಲಿನ್ಯದಿಂದಾಗಿ ಸಾವನ್ನಪ್ಪಿದ್ದಾರೆ. 1990ರಿಂದ 2019ರವರೆಗೆ ವಾಯುಮಾಲಿನ್ಯದಿಂದ ಮೃತಪಟ್ಟಿರುವವರ ಪ್ರಮಾಣ ಶೇ.64.2ರಷ್ಟಿದೆ.
ಲೋಧಿ ರಸ್ತೆಯಲ್ಲಿ ಮಾಪನ ಕೇಂದ್ರದಲ್ಲಿ 3.3 ಡಿಗ್ರಿ ಸೆಲ್ಸಿಯಸ್ ತೇವಾಂಶ ವರದಿಯಾಗಿದೆ. ಪಶ್ಚಿಮ ಹಿಮಾಲಯ ಪ್ರದೇಶ ಭಾಗದ ಮೂಲ ಹಿಮಗಾಳಿ ಅಪ್ಪಳಿಸುತ್ತಿರುವುದರಿಂದ ದೆಹಲಿ ಮಂಜಿನ ಕೋಟೆಯಾಗಿದೆ. ಶುಕ್ರವಾರ ಜಫರ್ಪುರ್ ಮಾಪನ ಕೇಂದ್ರದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ಶೀತವಾತಾವರಣ ದಾಖಲಾಗಿದೆ.
ಸರಾಸರಿ ಉಷ್ಣತೆ ಗುರುವಾರ ಗರಿಷ್ಠ 15.2 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿತ್ತು. ಶುಕ್ರವಾರ ಅದು 19.8ಕ್ಕೆ, ಶನಿವಾರ 21.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.ದೆಹಲಿಯ ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ 10 ಡಿಗ್ರಿಗಿಂತ ಕಡಿಮೆ ಇಲ್ಲದ ಮತ್ತು ಗರಿಷ್ಠ 4.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ ಅದನ್ನು ಶೀತದಿನ ಎಂದು ಉಲ್ಲೇಖಿಸಲಾಗುತ್ತದೆ.