ಸೈಕ್ಲೋನ್ ಪೀಡಿತ ಪ್ರದೇಶದಲ್ಲೇ ಇರುತ್ತೇನೆ, ಎಲ್ಲೂ ಹೋಗೋಲ್ಲ: ದೀದಿ
ಖರ್ಗ್ಪುರ(ಪಶ್ಚಿಮ ಬಂಗಾಳ), ಮೇ 03: ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಿರುವ ಚಂಡಮಾರುದಿಂದಾಗಿ ಈ ರಾಜ್ಯಗಳಲ್ಲಿ ಎಲ್ಲಾ ರೀತಿಯ ರಾಜಕೀಯ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ.
ಸಮಾವೇಶಗಳು ರದ್ದಾಗಿದ್ದರೂ, ಪಶ್ಚಿಮ ಬಂಗಾಳದ ಕರಾವಳಿಯ ಖರ್ಗ್ಪುರದಲ್ಲಿಯೇ ಇನ್ನೆರಡು ದಿನ ನೆಲೆಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಫೋನಿ ಚಂಡಮಾರುತದ ಅಬ್ಬರಕ್ಕೆ ಮೊದಲ ದಿನವೇ ಐವರು ಬಲಿ
"ನಾವು ಸೈಕ್ಲೋನ್ ಫೋನಿಯಿಂದ ಉಂಟಾಗುತ್ತಿರುವ ಎಲ್ಲಾ ಸಮಸ್ಯೆಗಳ ನಿವಾರಣೆಗೂ 24x7 ರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ. ಎಲ್ಲರೂ ತಂತಮ್ಮ ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಬೇಕು ಎಂದು ನಾನು ಮನವಿ ಮಾಡುತ್ತೇನೆ. ಎರಡು ದಿನಗಳ ಕಾಲ ನಾನು ಖರ್ಗ್ಪುರ ಕರಾವಳಿಯಲ್ಲೇ ಇರುತ್ತೇನೆ. ಚಂಡಮಾರುತ ಮರೆಯಾದ ಮೇಲೆ ನಾನೂ ವಾಪಸ್ ನನ್ನ ಕೆಲಸಗಳಿಗೆ ಮರಳುತ್ತೇನೆ" ಎಂದು ದೀದಿ ಹೇಳಿದ್ದಾರೆ.
'ಫೋನಿ' ರುದ್ರನರ್ತನ: ಭಯಾನಕ ಚಂಡಮಾರುತದ ವಿಡಿಯೋ
ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ಎದ್ದಿರುವ ಫೋನಿ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗಳು ತತ್ತರಿಸಿವೆ. ಈಗಾಗಲೇ ಇಬ್ಬರು ಈ ಸೈಕ್ಲೋನ್ ಹಾವಳಿಗೆ ಮೃತರಾಗಿದ್ದಾತೆ.