ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆ
ನವದೆಹಲಿ, ಆಗಸ್ಟ್ 10: ಸರಿ ಸುಮಾರು 77 ದಿನಗಳ ಬಳಿಕ ದೇಶದ ಪುರಾತನ ಪಕ್ಷವನ್ನು ಮುನ್ನಡೆಸುವುದು ಯಾರು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದಿನವಿಡಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೂರು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಸೋನಿಯಾ ಗಾಂಧಿ ಅವರು ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ.
ಶನಿವಾರ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಬಹುತೇಕ ಎಲ್ಲಾ ಸದಸ್ಯರು ರಾಹುಲ್ ಗಾಂಧಿ ಅವರು ಇನ್ನೊಂದು ಅವಧಿಗೆ ಅಧ್ಯಕ್ಷರಾಗುವಂತೆ ಒತ್ತಾಯಿಸಿದರು.
ರಾಹುಲ್ ಸ್ಥಾನ ತುಂಬಬಲ್ಲ ಸಮರ್ಥ ಸಂಭಾವ್ಯರ ಪಟ್ಟಿ ಬಹಿರಂಗ
ಆದರೆ, ರಾಹುಲ್ ಗಾಂಧಿ ಇದಕ್ಕೊಪ್ಪದೆ ಸಭೆಯಿಂದ ಹೊರ ಬಂದಿದ್ದರು. ನಂತರ, ಐದು ಪ್ರದೇಶಕ್ಕೆ ಅನುಗುಣವಾಗಿ ಐದು ಉಪ ಗುಂಪುಗಳನ್ನು ಮಾಡಿ ಅದಕ್ಕೆ ಯುವ ನೇತಾರರನ್ನು ನೇಮಿಸಲು ಸದ್ಯಕ್ಕೆ ತೀರ್ಮಾನ ಕೈಗೊಳ್ಳಲಾಯಿತು. ರಾಹುಲ್ ರಾಜೀನಾಮೆ ಬಗ್ಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದರು.
ಸಂಜೆ ತನಕ ಯಾವುದೇ ನಿರ್ಣಯ ಕೈಗೊಳ್ಳಲು ಆಗದ ಕಾರಣ, ಸಂಜೆಯಿಂದ ಸರಿ ರಾತ್ರಿ ತನಕ ಮತ್ತೊಮ್ಮೆ ಕಾರ್ಯಕಾರಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಂತಿಮವಾಗಿ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮಧ್ಯಂತರ ಅಧ್ಯಕ್ಷರನ್ನು ಆಯ್ಕೆ
ಸಂಜೆ ಮತ್ತೊಮ್ಮೆ ಸಭೆ ನಡೆದಾಗ "ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನ ತೊರೆದು ಈಗಾಗಲೇ ಎರಡು ತಿಂಗಳು ಕಳೆದಿವೆ, ತುರ್ತಾಗಿ ಮಧ್ಯಂತರ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಗತ್ಯವಿದೆ, ಪಕ್ಷಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ಈಗಲೂ ವಿಳಂಬ ಮಾಡುತ್ತಿದ್ದು, ಇದು ಕಾರ್ಯಕರ್ತರ ಮನಸ್ಸಿನಲ್ಲಿಯೂ ಉತ್ತಮ ಅಭಿಪ್ರಾಯ ಮೂಡಿಸುವುದಿಲ್ಲ" ಎಂದು ಹಿರಿಯ ನಾಯಕರಾದ ಎಕೆ ಎಂಟನಿ, ಅಹ್ಮದ್ ಪಟೇಲ್, ಕೆಸಿ ವೇಣುಗೋಪಾಲ್ ಅಭಿಪ್ರಾಯಪಟ್ಟರು ಎಂದು ತಿಳಿದು ಬಂದಿದೆ.
CWCಯಲ್ಲಿ ತೆಗೆದುಕೊಂಡ ಮೂರು ನಿರ್ಣಯಗಳು
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಮೂರು ನಿರ್ಣಯಗಳು
1.
ರಾಹುಲ್
ಗಾಂಧಿ
ಅವರು
ಎಐಸಿಸಿ
ಅಧ್ಯಕ್ಷ
ಸ್ಥಾನಕ್ಕೆ
ಸಲ್ಲಿಸಿರುವ
ರಾಜೀನಾಮೆಯನ್ನು
ಅಂಗೀಕರಿಸುವುದು.
2.
ಅಧ್ಯಕ್ಷ
ಸ್ಥಾನಕ್ಕೆ
ಮುಂದಿನ
ಚುನಾವಣೆ
ನಡೆಯುವ
ತನಕ
ಮಧ್ಯಂತರ
ಅಧ್ಯಕ್ಷೆಯಾಗಿ
ಸೋನಿಯಾ
ಗಾಂಧಿಗೆ
ಅಧಿಕಾರ
ನೀಡುವುದು.
3.
ಕಲಂ
370ರದ್ದು
ಮಾಡಿರುವುದರಿಂದ
ಕಣಿವೆ
ರಾಜ್ಯದಲ್ಲಿ
ಪರಿಸ್ಥಿತಿ
ಸುಧಾರಿಸಿಲ್ಲ,
ಈ
ಬಗ್ಗೆ
ಕೇಂದ್ರ
ಸರ್ಕಾರ
ಪಾರದರ್ಶಕವಾಗಿ
ನಡೆದುಕೊಂಡಿಲ್ಲ.
ಕೇಂದ್ರದ
ಹುಳುಕನ್ನು
ಜನತೆ
ಮುಂದಿಡುವುದು.
ಸೋನಿಯಾ ಮುಂದಿರುವ ತಕ್ಷಣದ ಸವಾಲುಗಳು
*
ಮಹಾರಾಷ್ಟ್ರ,
ಹರ್ಯಾಣ,
ಜಾರ್ಖಂಡ್,
ಜಮ್ಮು
ಮತ್ತು
ಕಾಶ್ಮೀರ
ವಿಧಾನಸಭೆ
ಚುನಾವಣೆ
ಕುರಿತಂತೆ
ಪಕ್ಷದ
ಕಾರ್ಯತಂತ್ರ
ಕುರಿತು
ತುರ್ತಾಗಿ
ಹಂಗಾಮಿ
ಅಧ್ಯಕ್ಷೆ
ಸೋನಿಯಾ
ಗಾಂಧಿ
ನಿರ್ಧಾರ
ಕೈಗೊಳ್ಳಬೇಕಾಗುತ್ತದೆ.
*
ಪ್ರದೇಶವಾರು
ಐದು
ಉಪ
ಸಮಿತಿ
ರಚನೆ
ಅದಕ್ಕೆ
ಉಸ್ತುವಾರಿಗಳ
ನೇಮಕ,
ಚುನಾವಣೆಗೆ
ಅಭ್ಯರ್ಥಿಗಳ
ಆಯ್ಕೆ
ಬಗ್ಗೆ
ಕೂಡಾ
ನಿರ್ಣಯ
ಮಹತ್ವ
ಪಡೆಯಲಿದೆ.
*
ಇದರ
ಜೊತೆಗೆ
ಜಮ್ಮು
ಮತ್ತು
ಕಾಶ್ಮೀರ
ವಿಷಯದಲ್ಲಿ
ಮೋದಿ
ಸರ್ಕಾರ
ತಪ್ಪು
ನಿರ್ಣಯ
ತೆಗೆದುಕೊಂಡಿದೆ
ಎಂದು
ತಿಳಿಸಲು
ಬೇಕಾದ
ಕಾರ್ಯತಂತ್ರ
ರೂಪಿಸಬೇಕಿದೆ.
ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸದ್ಯಕ್ಕಿಲ್ಲ
ಗಾಂಧಿ-ನೆಹರು ಮನೆತನಯೇತರ ಹಿರಿಯ ಮುಖಂಡರೊಬ್ಬರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ ಲೋಕಸಭಾ ನಾಯಕನ ಸ್ಥಾನಕ್ಕೆ ಅಧೀರ್ ರಂಜನ್ ಚೌಧುರಿ ಅವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಲಾಯಿತು.
ಈಗ ಅಧ್ಯಕ್ಷ ಸ್ಥಾನಕ್ಕೆ 59 ವರ್ಷ ವಯಸ್ಸಿನ ಮಹಾರಾಷ್ಟ್ರದ ಮುಖಂಡ ಮುಕುಲ್ ವಾಸ್ನಿಕ್, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡುವ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಆದರೆ, ಆಯ್ಕೆ ಪ್ರಕ್ರಿಯೆ, ಆಂತರಿಕ ಚುನಾವಣೆಯನ್ನು ಮೂರು ರಾಜ್ಯಗಳ ಚುನಾವಣೆ ಮುಗಿಯುವ ತನಕ ಮುಂದೂಡಿದರೂ ಅಚ್ಚರಿ ಪಡಬೇಕಾಗಿಲ್ಲ.