ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾರಿಗೆ ಹಾಗೂ ಎಷ್ಟು ಮಂದಿಗೆ ಸಿಗುತ್ತೆ?
ನವದೆಹಲಿ, ಡಿಸೆಂಬರ್ 04: ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾರಿಗೆ ಮತ್ತು ಎಷ್ಟು ಮಂದಿಗೆ ಸಿಗುತ್ತದೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕರೆದ ಸರ್ವಪಕ್ಷಗಳ ಸಭೆಯಲ್ಲಿ ಈ ವಿಷಯವನ್ನು ತಿಳಿಸಿದ್ದು, ಕೊರೊನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಮೊದಲಿಗೆ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಸರ್ವ ಪಕ್ಷ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಎಲ್ಲಾ ರಾಜ್ಯಗಳ ಕೊರೊನಾ ಪರಿಸ್ಥಿತಿ ಕುರಿತಂತೆ ಹಾಗೂ ಕೊರೊನಾ ಲಸಿಕೆ ಕುರಿತು ಮಾತುಕತೆ ನಡೆಸಿದ್ದಾರೆ.
ಕೊರೊನಾವೈರಸ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ವಪಕ್ಷದ ನಾಯಕರು ತಮ್ಮ ಸಲಹೆ ಸೂಚನೆಗಳನ್ನು ಬರಹದ ರೂಪದಲ್ಲಿ ನೀಡಬೇಕು.
ಭಾರತೀಯರಿಗೆ ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಸಿದ್ಧ: ಮೋದಿ
ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ಎಲ್ಲ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಮನವಿ ಮಾಡಿದ್ದಾರೆ.
ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
ಕೊರೊನಾ ಲಸಿಕೆ ಲಭ್ಯವಾಗುತ್ತಿದ್ದಂತೆಯೇ ಮೊದಲು ದೇಶದ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ, ವೈದ್ಯರು ಹಾಗೂ ನರ್ಸ್ಗಳಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಆರೋಗ್ಯ ಕಾರ್ಯದರ್ಶಿ ಹೇಳಿದ್ದೇನು?
ಸಭೆಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ಯಾವೆಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ವಿದೇಶಗಳು ಹಾಗೂ ಭಾರತದಲ್ಲಿ ತೆಗೆದುಕೊಂಡಿರುವ ಶಿಸ್ತುಕ್ರಮಗಳ ಕುರಿತು ಮಾತನಾಡಿದ್ದಾರೆ.
ಪೊಲೀಸರಿಗೂ ಸಿಗುತ್ತೆ ಲಸಿಕೆ
ಇದಲ್ಲದೆ,
ಪೊಲೀಸರು,
ಸೇನಾ
ಪಡೆಗಳು,
ಪೌರಕಾರ್ಮಿಕರು
ಹಾಗೂ
ಇನ್ನಿತರೆ
ಕಾರ್ಯಕರ್ತರೂ
ಸೇರಿ
ಒಟ್ಟು
2
ಕೋಟಿ
ಜನರಿಗೂ
ಲಸಿಕೆ
ನೀಡಲಾಗುತ್ತದೆ
ಎಂದು
ತಿಳಿಸಿದ್ದಾರೆಂದು
ತಿಳಿದುಬಂದಿದೆ.
ಐದು,
ಅದಕ್ಕಿಂತ
ಹೆಚ್ಚು
ಸಂಸದರನ್ನು
ಹೊಂದಿರುವ
ಪ್ರಮುಖ
ರಾಜಕೀಯ
ಪಕ್ಷಗಳಿಂದ
13
ನಾಯಕರು
ಮಾತನಾಡಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
ಎರಡನೇ ಸರ್ವಪಕ್ಷ ಸಭೆ
ಕೊರೊನಾ
ಸಾಂಕ್ರಾಮಿಕ
ಪಿಡುಗಿನ
ಆರಂಭದಿಂದ
ಕೇಂದ್ರ
ಸರ್ಕಾರ
ನಡೆಸುತ್ತಿರುವ
2ನೇ
ಸರ್ವಪಕ್ಷ
ಸಭೆ
ಇದಾಗಿದೆ.
ಭಾರತದಲ್ಲಿ
ಕೊರೊನಾ
ಲಾಕ್ಡೌನ್
ಜಾರಿಗೊಳಿಸುವುದಕ್ಕೂ
ಮೊದಲು
ಕಳೆದ
ಏಪ್ರಿಲ್
ನಲ್ಲಿ
ಸರ್ವಪಕ್ಷಗಳ
ಸಭೆ
ನಡೆಸಲಾಗಿತ್ತು.
ಸಭೆಯಲ್ಲಿ
ಕಾಂಗ್ರೆಸ್
ಪರವಾಗಿ
ರಾಜ್ಯಸಭೆಯ
ಪ್ರತಿಪಕ್ಷದ
ನಾಯಕ
ಗುಲಾಮ್
ನಬಿ
ಆಜಾದ್
ಮಾತನಾಡಿದ್ದು,
ಟಿಎಂಸಿ
ಪರವಾಗಿ
ಸುದೀಪ್
ಬಂಡೋಪಧ್ಯಾಯ,
ಎನ್'ಸಿಪಿ
ಪರವಾಗಿ
ಶರದ್
ಪವಾರ್,
ಟಿಆರ್'ಎಸ್
ಪರವಾಗಿ
ನಾಮ
ನಾಗೇಶ್ವರ್
ರಾವ್,
ಶಿವಸೇನೆ
ಪರವಾಗಿ
ವಿನಾಯಕ್
ರಾವತ್
ಮಾತನಾಡಿದ್ದಾರೆಂದು
ವರದಿಗಳು
ತಿಳಿಸಿವೆ.
ಸರ್ವಪಕ್ಷ
ಸಭೆಯಲ್ಲಿ
ರಕ್ಷಣಾ
ಸಚಿವ
ರಾಜನಾಥ್
ಸಿಂಗ್,
ಗೃಹ
ಸಚಿವ
ಅಮಿತ್
ಶಾ,
ಆರೋಗ್ಯ
ಸಚಿವ
ಹರ್ಷವರ್ಧನ್
ಹಾಗೂ
ಇನ್ನಿತರೆ
ಅಧಿಕಾರಿಗಳು
ಹಾಜರಿದ್ದರು
ಎಂದು
ತಿಳಿದುಬಂದಿದೆ.
Recommended Video