ಕೊರೊನಾ ವಿರುದ್ಧ ನವಶಕ್ತಿ ಮೈದಳೆಯಲಿ; ಮೋದಿ
ನವದೆಹಲಿ, ಮಾರ್ಚ್ 19; ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಅವರು ಕೊರೊನಾ ವೈರಸ್ ಸೋಂಕಿನ ವಿರುದ್ಧ ನವಶಕ್ತಿ ವೈಭವ ತಾಳಬೇಕಿದೆ ಎಂದರು. ಆ ನವಶಕ್ತಿ ವೈಭವ ಇಲ್ಲಿದೆ...
ಸಂಕಲ್ಪ,
ಸಂಯಮದಿಂದಿರಿ,
ಮಾ.
22ರಂದು
ಜನತಾ
ಕರ್ಫ್ಯೂ
ಆಚರಿಸಿ:
ಮೋದಿ
1) ಪ್ರತಿ ಭಾರತೀಯ ಮನೆಯಿಂದ ಹೊರಗೆ ಬರಬಾರದು
2) 60 ವಯಸ್ಸಿನ ಹಿರಿಯರು ಮನೆಯಿಂದ ಹೊರಗೆ ಬರಲೇಬಾರದು
3) ಭಾನುವಾರ ಜನತಾ ಕರ್ಪ್ಯೂ ಆಚರಿಸಬೇಕು
4) ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಗೌರವ ಸೂಚನೆ ಮಾಡುವುದು
5) ಸಣ್ಣ ಪುಟ್ಟ ರೋಗಗಳಿಗೆ ಆಸ್ಪತ್ರೆ ಗೆ ದೌಡಾಯಿಸಿ ಕೊರೊನಾ ಎಂದು ಭಯಗೊಳ್ಳದೆ ಇರುವುದು
6) ಹಣಕಾಸು ಇಲಾಖೆ ಸಚಿವರು ಟಾಸ್ಕ್ ಫೋರ್ಸ್ ರಚಿಸಿದ್ದಾರೆ, ಇದಕ್ಕೆ ಜನರು ಸ್ಪಂದನೆ ಮಾಡಬೇಕು
7) ಕಂಪೆನಿಗಳು ವರ್ಕ್ ಪ್ರಮ್ ಹೋಮ್ ಗೆ ಉತ್ತೇಜನ ನೀಡಬೇಕು
8) ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರ ಸಮರ್ಥ, ಜನರು ಅನವಶ್ಯಕ ಭಯಕ್ಕೆ ಬೀಳಬಾರದು
9) ವದಂತಿಗಳನ್ನು ನಂಬದೆ ಇರುವುದು
ಇ ಎಲ್ಲ ಒಂಬತ್ತು ಅಂಶಗಳನ್ನು ಕೊರೊನಾ ಹತ್ತಿಕ್ಕಲು ದೇಶವಾಸಿಗಳು ಅನುಸರಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ