ನವದೆಹಲಿ, ಏಪ್ರಿಲ್ 27: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಫೆಬ್ರವರಿ ತಿಂಗಳ ನಂತರ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಒಂದು ವರ್ಷದ ನಂತರ ಮತ್ತೆ ಕೊರೊನಾ ಅಲೆ ಆರಂಭವಾಗಿದ್ದು, ಮಾರ್ಚ್ ತಿಂಗಳಿನ ಮಧ್ಯದಿಂದ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹತ್ತು ರಾಜ್ಯಗಳಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.
ಇದರೊಂದಿಗೆ ಲಸಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಏಪ್ರಿಲ್ ತಿಂಗಳಿನಿಂದ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ. ಸದ್ಯಕ್ಕೆ ಲಾಕ್ಡೌನ್ ಮಾಡುವುದಿಲ್ಲ. ಆದರೆ ಸೋಂಕು ಹೆಚ್ಚಿರುವ ಕಡೆಗಳಲ್ಲಿ ಸ್ಥಳೀಯ ಕಂಟೇನ್ಮೆಂಟ್ ವಲಯಗಳನ್ನು ಸೃಷ್ಟಿಸುವುದಾಗಿ ತಿಳಿಸಿದೆ.
Newest FirstOldest First
11:44 PM, 27 Apr
ದೆಹಲಿ ಸರಕಾರ ಅಶೋಕ್ ಹೋಟೆಲ್ನ 100 ಕೋಣೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
11:21 PM, 27 Apr
ಛತ್ತೀಸ್ಗಢ್ನಲ್ಲಿ 14,893 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 236 ಜನರು ಮೃತಪಟ್ಟಿದ್ದಾರೆ. 14,434 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
10:50 PM, 27 Apr
24,149 new cases, 381 deaths and 17,862 recoveries reported in #Delhi today; case tally rises to 10,72,065 pic.twitter.com/3pegufoA3J
ಅಸ್ಸಾಂನಲ್ಲಿ 132 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 18 ಜನರು ಮೃತಪಟ್ಟಿದ್ದು, 955 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,923.
9:45 PM, 27 Apr
ಮಹಾರಾಷ್ಟ್ರದಲ್ಲಿ 66,358 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 895 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,72,434ಕ್ಕೆ ಏರಿಕೆಯಾಗಿದೆ.
9:21 PM, 27 Apr
ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಬಿಎಂಟಿಸಿ 150 ಬಸ್ಗಳನ್ನು ಓಡಿಸಲಿದೆ. 96 ಮಾರ್ಗಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 7 ಗಂಟೆಯ ತನಕ ಏಪ್ರಿಲ್ 27 ರಿಂದ ಮೇ 12ರ ತನಕ ಬಸ್ಗಳನ್ನು ಓಡಿಸಲಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಉದ್ಯೋಗಿಗಳು ಈ ಸೇವೆ ಬಳಸಿಕೊಳ್ಳಬಹುದು.
8:55 PM, 27 Apr
16,403 ಹೊಸ ಕೋವಿಡ್ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7,76,345ಕ್ಕೆ ಏರಿಕೆಯಾಗಿದೆ. 73 ರೋಗಿಗಳು ಮೃತಪಟ್ಟಿದ್ದು, ಒಟ್ಟು ಸಂಖ್ಯೆ 11,082ಕ್ಕೆ ಏರಿಕೆಯಾಗಿದೆ.
8:27 PM, 27 Apr
ಕೊರೋನ ಕರ್ಫ್ಯೂ ಅಂಗವಾಗಿ ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12 ರ ಬೆಳಗ್ಗೆ 6 ಗಂಟೆಯವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
8:03 PM, 27 Apr
ಕರ್ನಾಟಕದಲ್ಲಿ 24 ಗಂಟೆಗಳಲ್ಲಿ 31,830 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 180 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ 10793 ಸೋಂಕಿತರು ಗುಣಮುಖರಾಗಿದ್ದಾರೆ
6:43 PM, 27 Apr
ರಾಜಸ್ಥಾನದಲ್ಲಿ ಒಂದೇ ದಿನ 16089 ಜನರಿಗೆ ಕೊವಿಡ್-19 ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 5,46,964ಕ್ಕೆ ಏರಿಕೆಯಾಗಿದೆ.
6:16 PM, 27 Apr
ಕೇರಳದಲ್ಲಿ ಒಂದೇ ದಿನ 32819 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,47,181ಕ್ಕೆ ಏರಿಕೆಯಾಗಿದೆ.
6:15 PM, 27 Apr
ಉತ್ತರಾಖಂಡದಲ್ಲಿ ಒಂದೇ ದಿನ 5703 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 43,032ಕ್ಕೆ ಏರಿಕೆಯಾಗಿದೆ.
5:24 PM, 27 Apr
ಅಸ್ಸಾಂನಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ಮೇ 1 ರವರೆಗೆ ಜಾರಿಯಲ್ಲಿರುತ್ತದೆ.
5:15 PM, 27 Apr
ರೈಲ್ವೆ ಸಚಿವಾಲಯವು ಸುಮಾರು 4000 ಕೋವಿಡ್ ಆರೈಕೆ ತರಬೇತುದಾರರನ್ನು ನೇಮಕ ಮಾಡಿದೆ, ಸುಮಾರು 64,000 ಹಾಸಿಗೆಗಳು ರಾಜ್ಯಗಳ ಬಳಕೆಗೆ ಸಿದ್ಧವಾಗಿವೆ. ಪ್ರಸ್ತುತ 169 ಬೋಗಿಗಳನ್ನು ವಿವಿಧ ರಾಜ್ಯಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
5:14 PM, 27 Apr
ರಾಜ್ಯಗಳ ಬೇಡಿಕೆಯಂತೆ ರೈಲ್ವೆ ಇಲಾಖೆ ಇಂದೋರ್ ಬಳಿಯ ನಾಗಪುರ, ಭೋಪಾಲ್, ತಿಹಿಯಲ್ಲಿ ಕೋವಿಡ್ ಆರೈಕೆ ತರಬೇತುದಾರರನ್ನು ಸಜ್ಜುಗೊಳಿಸಿದೆ. ನಾಗ್ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮತ್ತು ನಾಗ್ಪುರ ಮಹಾನಗರ ಪಾಲಿಕೆಯ ಆಯುಕ್ತರ ನಡುವೆ 11 ಕೋವಿಡ್ ಆರೈಕೆ ತರಬೇತುದಾರರಿಗಾಗಿ ಒಪ್ಪಂದಕ್ಕೆ ಸಹಿ ಹಾಕಲಾಯಿತು: ರೈಲ್ವೆ ಸಚಿವಾಲಯ
5:12 PM, 27 Apr
ಹೊಸ ಕೋವಿಡ್-19 ಪ್ರಕರಣಗಳಲ್ಲಿ 10 ರಾಜ್ಯಗಳಲ್ಲಿ ಶೇ.69.1 ರಷ್ಟಿದೆ: ಆರೋಗ್ಯ ಸಚಿವಾಲಯ
3:05 PM, 27 Apr
ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರೈತನೊಬ್ಬ ತನ್ನ ಮಗಳ ಮದುವೆಗೆ ಕೂಡಿಟ್ಟ 2ಲಕ್ಷ ಹಣವನ್ನು ಜೀವಸಂರಕ್ಷಕ ಆಮ್ಲಜನಕ ಖರೀದಿಸಲು ದಾನ ಮಾಡಿದ್ದಾರೆ.
1:20 PM, 27 Apr
ಉತ್ತರಾಖಂಡದಲ್ಲಿ ಕಳೆದ 25 ದಿನಗಳಿಂದ ಕುಂಭಮೇಳದಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರವಾಗಿದೆ.
ಮಾ.31 ರಿಂದ ಏ.24 ವರೆಗೆ ಕುಂಭಮೇಳಕ್ಕೆ ಭೇಟಿ ನೀಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ತತ್ಪರಿಣಾಮವಾಗಿ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆಯಲ್ಲಿಯೂ ಭಾರಿ ಏರಿಕೆ ಕಂಡಿದೆ.
12:00 PM, 27 Apr
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ತೆರಳುವ ಪ್ರಯಾಣಿಕರ ವಿಮಾನಗಳಿಗೆ ಆಸ್ಟ್ರೇಲಿಯಾ ನಿರ್ಬಂಧ ವಿಧಿಸಿದೆ.
ಮೇ 15ರವರೆಗೆ ಭಾರತದಿಂದ ಯಾವುದೇ ಪ್ರಯಾಣಿಕ ವಿಮಾನ ಆಸ್ಟ್ರೇಲಿಯಾಗೆ ಬರದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
11:24 AM, 27 Apr
ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದರಿಂದ ಉತ್ತೇಜಿತವಾಗಿರುವ ಭಾರತ್ ಬಯೋಟೆಕ್ ಕಂಪನಿ ಇದೀಗ ಇಂಟ್ರಾನೇಸಲ್ ಕೊರೊನಾ ಲಸಿಕೆಯ ಪ್ರಯೋಗವನ್ನು ಮುಂದುವರೆಸಿದೆ.
11:03 AM, 27 Apr
ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿನ ಕುರಿತು ಆಸ್ಟ್ರೇಲಿಯನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಭಾರತ ಖಂಡಿಸಿದೆ.
ಭಾರತ ಸರ್ಕಾರವು ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಂತಹ ಸಂದರ್ಭದಲ್ಲಿ ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ದೇಶ ಈ ಪರಿಸ್ಥಿತಿಗೆ ಬಂದಿದೆ, ಇನ್ನೂ ಸೋಂಕಿನ ಗಂಭೀರತೆ ಅರ್ಥಮಾಡಿಕೊಂಡಿಲ್ಲ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು.
11:00 AM, 27 Apr
ಮಂಗಳವಾರ ಬೆಳಿಗ್ಗೆವರೆಗೂ ಭಾರತೀಯ ರೈಲ್ವೆಯಿಂದ 450 ಟನ್ ಆಮ್ಲಜನಕ ಪೂರೈಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
10:52 AM, 27 Apr
ಭಾರತದಲ್ಲಿ ಕೊರೊನಾ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ಕಾರಣ ಮೇ 15ರವರೆಗೂ ಭಾರತದಿಂದ ಆಗಮಿಸುವ ನೇರ ಪ್ರಯಾಣಿಕ ವಿಮಾನಗಳನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದೆ.
10:50 AM, 27 Apr
ದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಚುನಾವಣಾ ವಿಜಯೋತ್ಸವ ಮೆರವಣಿಗೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ. ಮೇ 2 ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ವಿಜಯೋತ್ಸವಕ್ಕೆ ಆಯೋಗ ಬ್ರೇಕ್ ಹಾಕಿದೆ
10:49 AM, 27 Apr
Senior Congress leader and former MP Karuna Shukla passed away last night at a hospital in Chhattisgarh where she was under treatment for #COVID19. She was also the niece of former PM, late Atal Bihari Vajpayee.
ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಸಂಸದೆ ಕರುಣಾ ಶುಕ್ಲಾ ಅವರು ಕೊರೊನಾ ಸೋಂಕಿನಿಂದ ಮಂಗಳವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 70 ವರ್ಷವಾಗಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆಯೂ ಆಗಿದ್ದ ಅವರು ಛತ್ತೀಸ್ಗಡದಲ್ಲಿನ ರಾಯ್ಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
10:23 AM, 27 Apr
ತೆಲಂಗಾಣದಲ್ಲಿ ಕಳೆದ 24 ಗಂಟೆಗಳಲ್ಲಿ 10,122 ಕೊರೊನಾ ಪ್ರಕರಣಗಳು ದಾಖಲಾಗಿವೆ. 6446 ಮಂದಿ ಗುಣಮುಖರಾಗಿದ್ದು, 52 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
10:22 AM, 27 Apr
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು, ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ರೊಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಜನರೇಟರ್ಗಳು, ಲಿಕ್ವಿಡ್ O2, ವೆಂಟಿಲೇಟರ್ಗಳನ್ನು ಸರಬರಾಜು ಮಾಡಲಾಗುತ್ತಿದೆ. ಫ್ರಾನ್ಸ್ 8 ಅತ್ಯಧಿಕ, 2 ಸಾವಿರ ಮಂದಿಗೆ ಐದು ದಿನ ನೀಡಬಹುದಾದ ಲಿಕ್ವಿಡ್ ಆಕ್ಸಿಜನ್ , 28 ವೆಂಟಿಲೇಟರ್ಸ್ ಹಾಗೂ ಐಸಿಯುಗಳ ಉಪಕರಣಗಳನ್ನು ಒದಗಿಸುತ್ತಿದೆ.
9:45 AM, 27 Apr
ಭಾರತದಲ್ಲಿ 24 ಗಂಟೆಯಲ್ಲಿ 3,23,144ಹೊಸ ಕೋವಿಡ್ ಪ್ರಕರಣ ದಾಖಲು
24 ಗಂಟೆಯಲ್ಲಿ ಭಾರತದಲ್ಲಿ 2771 ಜನರು ಸಾವು, 2,51,827 ಜನರು ಡಿಸ್ಚಾರ್ಜ್
ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 1,76,36,307
ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 28,82,204
9:07 AM, 27 Apr
ರಾಜ್ಯದಲ್ಲಿ ಕಡಿಮೆ ನೌಕರರೊಂದಿಗೆ ಗಾರ್ಮೆಂಟ್ಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಬಿಸಿಐಸಿ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದೆ.
9:06 AM, 27 Apr
Maharashtra: The statewide restrictions in the wake of #COVID19 situation to continue till May 1st. Visuals from Western Express Highway, Bandra in Mumbai. pic.twitter.com/P9IOliT41I
ಮಹಾರಾಷ್ಟ್ರದಲ್ಲಿ ಮೇ 1ರವರೆಗೂ ಲಾಕ್ಡೌನ್ ಮುಂದುವರೆದಿದ್ದು, ಅಲ್ಲಿನ ಚಿತ್ರಣ ಹೀಗಿದೆ...
READ MORE
4:10 PM, 3 Mar
ಮೋದಿ ಟ್ವೀಟ್
ಕೊರೊನಾ ವೈರಸ್ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಯಾರೂ ಕೂಡ ಕೊರೊನಾ ವೈರಸ್ (ಕೊವಿಡ್ 19)ಗೆ ಭಯ ಪಡಬೇಕಿಲ್ಲ. ಧೈರ್ಯವಾಗಿರಿ ಎಂದು ನಾಡಿನ ಜನತೆಗೆ ಸಾಮಾಧಾನ ಹೇಳಿದ್ದಾರೆ.
4:11 PM, 3 Mar
ಕೊರೊನಾ ವೈರಸ್ನಿಂದ ದೂರವಿರುವುದು ಹೇಗೆ ಎನ್ನುವ ಕೆಲವು ಟಿಪ್ಸ್ ಗಳನ್ನು ಕೂಡ ನೀಡಿದ್ದಾರೆ. ನೀವು ಕೊರೊನಾದಿಂದ ದೂರವಿರಬೇಕಾದರೆ ಪದೇ ಪದೇ ನಿಮ್ಮ ಕೈಗಳನ್ನು ತೊಳೆದುಕೊಳ್ಳುತ್ತಿರುಬೇಕು.
9:59 AM, 6 Mar
ಗುರುವಾರ ಚೀನಾದಲ್ಲಿ ಕೊರೊನಾ ವೈರಸ್ ನಿಂದ 30 ಮಂದಿ ಸಾವು, 143 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಆಯೋಗದಿಂದ ಮಾಹಿತಿ ಬಹಿರಂಗ.
10:14 AM, 6 Mar
ಭಾರತೀಯ ಷೇರು ಮಾರುಕಟ್ಟೆಗೂ ತಟ್ಟಿದ ಕೊರೊನಾ ವೈರಸ್ ಬಿಸಿ. ಶುಕ್ರವಾರ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಭಾರಿ ಕುಸಿತ. 1250 ಅಂಕಗಳ ಕುಸಿತ ಕಂಡ ಮುಂಬೈ ಷೇರು ಮಾರುಕಟ್ಟೆ.
10:40 AM, 6 Mar
Jammu and Kashmir: Isolation wards have been set up in Srinagar over #Coronavirus. 30 positive cases of Coronavirus have been reported across the country till now. pic.twitter.com/qstVG36Z87
ಭಾರತದಲ್ಲಿ 30 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಹಿನ್ನೆಲೆಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಐಸೋಲೇಟೆಡ್ ವಾರ್ಡ್ ಗಳ ಸ್ಥಾಪನೆ.
10:47 AM, 6 Mar
ಭೂತಾನ್ ನಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆ. ಮಾರ್ಚ್.02ರಂದು ಅಮೆರಿಕಾದಿಂದ ಗುವಾಹಟಿಗೆ ಬಂದಿದ್ದ 76 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ.
10:57 AM, 6 Mar
59 ವರ್ಷದ ಪತ್ನಿಯ ಜೊತೆಗೆ 10 ಸಹ ಪ್ರಯಾಣಿಕರೊಂದಿಗೆ ಅಮೆರಿಕಾಗೆ ತೆರಳಿದ್ದ ವೃದ್ಧ. 10 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿರುವ ಬಗ್ಗೆ ಮಾಹಿತಿ.
11:21 AM, 6 Mar
ಭಾರತದಲ್ಲಿ ಒಟ್ಟು 30 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆ.
ಜೈಪುರ್ - 17
ಆಗ್ರಾ - 6
ದೆಹಲಿ ಮತ್ತು ಎನ್ಆರ್ ಸಿ - 3
ಕೇರಳ - 03
ತೆಲಂಗಾಣ - 1
11:30 AM, 6 Mar
ಚೀನಾ, ಹಾಂಗ್ ಕಾಂಗ್, ಇಟಲಿ, ಇರಾನ್, ಇಂಡೋನೆಷ್ಯಾ, ಜಪಾನ್, ಮಲೇಶಿಯಾ, ನೇಪಾಳ, ಸಿಂಗಾಪುರ, ತೈವಾನ್, ಥೈಲ್ಯಾಂಡ್, ವಿಯೆಟ್ನಾ ಮತ್ತು ದಕ್ಷಿಣ ಕೊರೊಯಾದಿಂದ ನೇರ ಮತ್ತು ಪರೋಕ್ಷವಾಗಿ ಭಾರತಕ್ಕೆ ಆಗಮಿಸಿದ ಪ್ರವಾಸಿಗರಿಂದ ಸೋಂಕು.
11:31 AM, 6 Mar
ಚೀನಾ, ಇರಾನ್, ಇಟಲಿ, ಕೊರಿಯಾ ಸೇರಿದಂತೆ ಸೋಂಕಿತ ರಾಷ್ಟ್ರಗಳಿಗೆ ಪ್ರಯಾಣಿಸದಂತೆ ಭಾರತೀಯರಿಗೆ ಎಚ್ಚರಿಕೆ ಸಂದೇಶ ರವಾನೆ.
12:08 PM, 6 Mar
ದೆಹಲಿಯ ಮತ್ತೊಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು. ಭಾರತದಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ.
1:19 PM, 6 Mar
ತೆಲಂಗಾಣದಲ್ಲಿ ಕೊರೊನಾ ವೈರಸ್ ಪೀಡಿತ ದೇಶಗಳಿಂದ ಆಗಮಿಸಿದ 361 ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಸೋಂಕು ತಗಲಿರುವ ಶಂಕೆ ಮೇಲೆ ತೀವ್ರ ಕಣ್ಗಾವಲಿನಲ್ಲಿ ಇರಿಸಲಾಗಿದೆ. 361 ಪ್ರಯಾಣಿಕರ ಪೈಕಿ 13 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದು, 24 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಈ 24 ಜನರ ಪೈಕಿ 11 ಮಂದಿಗೆ ಕೊರೊನಾ ವೈರಸ್ ಇಲ್ಲವೆಂದು ವರದಿ ಬಂದಿದ್ದು, ಉಳಿದ 13 ಜನರ ರಕ್ತ ಪರೀಕ್ಷೆಯ ಫಲಿತಾಂಶವು ಇನ್ನಷ್ಟೇ ತಿಳಿದು ಬರಬೇಕಿದೆ.
1:48 PM, 6 Mar
Punjab: 13 Italian nationals have been kept in isolation at a hotel in Amritsar, keeping in view the Coronavirus situation. Vikas Heera, SDM says, "None of the 13 people have symptoms for Coronavirus. They all are healthy. They have been isolated as a precautionary measure". pic.twitter.com/UdGeuEqd2T
ಇಟಲಿಯ 13 ಪ್ರಯಾಣಿಕರನ್ನು ಅಮೃತ್ ಸರ್ ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿದೆ. ಈ ಪೈಕಿ ಯಾರಿಗೂ ಕೊರೊನಾ ಸೋಂಕು ತಗಲಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಐಸೋಲೆಟೆಡ್ ನಲ್ಲಿ ಇರಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಎಸ್ ಡಿಎಂ ಆಸ್ಪತ್ರೆ ವೈದ್ಯ ವಿಕಾಸ್ ಹೀರಾ ತಿಳಿಸಿದ್ದಾರೆ.
1:51 PM, 6 Mar
Tamil Nadu Health Minister C. Vijayabaskar: There is no #Coronavirus infection in the state. People should not panic but at the same time do not be careless as it is an airborne disease. We are doing 24x7 screening in Chennai. We also have dedicated ambulances on standby. pic.twitter.com/iNNi1xFKTO
ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಚೆನ್ನೈನಲ್ಲಿ 24/7 ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಸಿ. ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
3:12 PM, 6 Mar
ಕೊರೊನಾ ವೈರಸ್ ನಿಂದ ಇರಾನ್ ವಿದೇಶಾಂಗ ಸಚಿವರ ಸಲಹೆಗಾರ ಹುಸೇನ್ ಶೇಖುಲೆಸ್ಲಂ ಗುರುವಾರ ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
3:21 PM, 6 Mar
ಕೊರೊನಾ ವೈರಸ್ ಹಿನ್ನೆಲೆ ಇರಾನ್ ನಿಂದ 300 ಭಾರತೀಯರನ್ನು ವಿಶೇಷ ವಿಮಾನದಲ್ಲಿ ದೇಶಕ್ಕೆ ವಾಪಸ್ ಕರೆದುಕೊಂಡು ಬರಲಾಗುತ್ತಿದೆ. ಶುಕ್ರವಾರ ರಾತ್ರಿ ವೇಳೆಗೆ ಈ ವಿಶೇಷ ವಿಮಾನವು ಭಾರತಕ್ಕೆ ಆಗಮಿಸಲಿದೆ ಎಂದು ವಿಮಾನಯಾನ ಸಚಿವ ಹಾರ್ದಿಪ್ ಸಿಂಗ್ ಪುರಿ ತಿಳಿಸಿದ್ದಾರೆ.
4:08 PM, 6 Mar
ನೆದರ್ ಲ್ಯಾಂಡ್ ನಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾರಿಗುವ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ.
4:21 PM, 6 Mar
West Bengal CM Mamata Banerjee on Kolkata: I have held a meeting with all concerned officers. Till today, no positive case of #Coronavirus detected in West Bengal. There is no need to panic. pic.twitter.com/6qG1RVmaET
ಕೊರೊನಾ ವೈರಸ್ ಹಿನ್ನೆಲೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಆಗಿದೆ. ರಾಜ್ಯದಲ್ಲಿ ಇದುವರೆಗೂ ಒಂದೇ ಒಂದು ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
4:35 PM, 6 Mar
ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಭೂತಾನ್.
10:31 AM, 7 Mar
ಶುಕ್ರವಾರ ಚೀನಾದಲ್ಲಿ 28 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸತ್ತವರ ಸಂಖ್ಯೆ 3070ಕ್ಕೆ ಏರಿಕೆಯಾಗಿದೆ.
ಬೆಂಗಳೂರಲ್ಲಿ ಕೊರೊನಾ ಜೊತೆಗೆ ಎಚ್1ಎನ್1 ಭೀತಿಯೂ ಆರಂಭವಾಗಿದೆ. ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಭಯ ಕಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಒಂದೆಡೆ ಕುಳಿತು ಕೆಲಸ ಮಾಡುವ ಕಾರಣ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ.
ಕೊರೊನಾದಿಂದ ವಿಮಾನ ಸಂಸ್ಥೆಗಳು ಬರೋಬ್ಬರಿ 8 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿವೆ. ವಿಶ್ವಾದ್ಯಂತ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದು ಭಾರಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಜಗತ್ತಿನ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ.ಕೊರೊನಾದಿಂದ ಜಾಗತಿಕ ಆರ್ಥಿಕತೆಗೆ ಸುಮಾರು 25 ಲಕ್ಷ ಕೋಟಿ ರೂ.ನಷ್ಟವಾಗಬಹುದು ಎಂದು ಭವಿಷ್ಯ ನುಡಿದಿದೆ.
3:47 PM, 7 Mar
"ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಹಿಡಿದು ನಗರ ಪ್ರದೇಶದ ಎಲ್ಲ ಸ್ಥಳದಲ್ಲೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದರು.
3:47 PM, 7 Mar
"ರಾಜ್ಯ ಸರ್ಕಾರದಿಂದ ಟಾಸ್ಕ್ ಫೋರ್ಸ್ ರಚಿಸಿ ಕೊರೊನಾ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ. ನಮ್ಮ ಸರ್ಕಾರದ ಮುಂಜಾಗ್ರತಾ ಕ್ರಮದಿಂದಾಗಿ ಕರ್ನಾಟಕಕ್ಕೆ ಕೊರೊನಾ ಬಂದಿಲ್ಲ. ಲಕ್ಷಾಂತರ ಜನ ನಿತ್ಯ ರಾಜ್ಯದಿಂದ ಓಡಾಟ ಮಾಡುತ್ತಿದ್ದರೂ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಕೊರೊನಾ ಪತ್ತೆಗಾಗಿ ಹೊಸ ಯಂತ್ರಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಡುತ್ತಿದ್ದೇವೆ" ಎಂದು ತಿಳಿಸಿದರು-ಡಾ. ಸುಧಾಕರ್
3:47 PM, 7 Mar
ಇದೇ ಸಂದರ್ಭ ರಾಜ್ಯ ಬಜೆಟ್ ಕುರಿತ ಪ್ರಶ್ನೆಗೂ ಪ್ರತಿಕ್ರಿಯಿಸಿ, "ರಾಜ್ಯ ಬಜೆಟ್ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಆರ್ಥಿಕ ಹಿಂಜರಿತದ ನಡುವೆಯೇ ಉತ್ತಮ ಬಜೆಟ್ ನೀಡಲಾಗಿದೆ. ಎಲ್ಲ ಭಾಗಗಳಿಗೂ ಅವಶ್ಯಕತೆಗೆ ತಕ್ಕ ಅನುದಾನ ನೀಡಿದ್ದಾರೆ. ಇದು ಅಭಿವೃದ್ಧಿ ದೃಷ್ಟಿಯಿಂದ ಪೂರಕವಾದ ಬಜೆಟ್ ಆಗಿದೆ" ಎಂದು ಹೇಳಿಕೆ ನೀಡಿದರು-ಡಾ. ಸುಧಾಕರ್
3:52 PM, 7 Mar
ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಬಗ್ಗೆ ಶಂಕಿಸಲಾಗಿದೆ.
3:53 PM, 7 Mar
ಜಮ್ಮು ಮತ್ತು ಕಾಶ್ಮೀರದ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ರಕ್ತ ಪರೀಕ್ಷೆಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಬ್ಬರನ್ನೂ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ.
3:53 PM, 7 Mar
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಭೀತಿ ಹೆಚ್ಚಾಗಿರುವ ಕಾರಣ ಜಮ್ಮು ಮತ್ತು ಸಾಂಬಾ ಜಿಲ್ಲೆಗಳ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮಾರ್ಚ್ 31 ರವರೆಗೆ ಮುಚ್ಚಲು ಜಮ್ಮು ಮತ್ತು ಕಾಶ್ಮೀರದ ಪ್ರಿನ್ಸಿಪಾಲ್ ಸೆಕ್ರೆಟರಿ (ಪ್ಲಾನ್ನಿಂಗ್) ಆದೇಶಿಸಿದ್ದಾರೆ.
4:15 PM, 7 Mar
ವೈರಾಣು ಹಬ್ಬದೇ ಇರುವಂತೆ ಭಾರತದ ವಾತಾವರಣ ನಮ್ಮನ್ನ ಕಾಪಾಡಬಹುದು. ಹಾಗಂದ ಮಾತ್ರಕ್ಕೆ ಕೊರೊನಾ ವೈರಸ್ ಬಗ್ಗೆ ಭಾರತೀಯರು ನಿರ್ಲಕ್ಷ್ಯ ಮಾಡುವಂತಿಲ್ಲ. ಒಂದು ವೇಳೆ ಕೊರೊನಾ ವೈರಸ್ ಭಾರತದಲ್ಲಿ ಹರಡಿದರೆ, ಮಿಕ್ಕೆಲ್ಲಾ ದೇಶಗಳಿಗಿಂತ ಹೆಚ್ಚು ಆಪತ್ತು ಭಾರತಕ್ಕೆ ಕಾದಿದೆ.
5:07 PM, 7 Mar
ಜನಸಂದಣಿ ಇರುವ ಜಾಗಕ್ಕೆ ಹೋದರೆ, ಎಲ್ಲಿ ಸೋಂಕು ತಗುಲುತ್ತೋ ಎಂಬ ಭಯದಿಂದ ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಕಡೆಗೆ ಬೆಂಗಳೂರಿನ ಮಂದಿ ಮುಖ ಮಾಡುತ್ತಿಲ್ಲ. ಕೊರೊನಾ ಭೀತಿಯಿಂದಾಗಿ ಮಾಲ್ ಗಳಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲೂ ಜನ ಇಲ್ಲದ ಕಾರಣ ಬಾಕ್ಸ್ ಆಫೀಸ್ ಕಲೆಕ್ಷನ್ ಗೂ ಹೊಡೆತ ಬಿದ್ದಿದೆ.
COVID-19 Vaccination in India Live Updates in Kannada: coronavirus vaccine programmes will begin in India with PM Narendra Modi launching the vaccination drive at 10.30 am on Jan 16.