ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಗೆ ಲಸಿಕೆ: ಬಾಬಾ ರಾಮದೇವ್ ಮಹತ್ವದ ಹೇಳಿಕೆ

|
Google Oneindia Kannada News

ನವದೆಹಲಿ, ಮಾರ್ಚ್ 19: ಮಾರಣಾಂತಿಕ ಕೊರೊನಾ ತನ್ನ ಆರ್ಭಟವನ್ನು ಮುಂದುವರಿಸುತ್ತಿರುವ ಈ ಹೊತ್ತಿನಲ್ಲಿ ಹರಿದ್ವಾರದ ಪತಂಜಲಿ ಯೋಗಪೀಠದ ಬಾಬಾ ರಾಮದೇವ್ ನೀಡಿರುವ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

ಈ ವೈರಸ್ ಗೆ ವಿಶ್ವದಾದ್ಯಂತ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ವೈದ್ಯರು ಇದಕ್ಕೆ ಲಸಿಕೆಯನ್ನು ಕಂಡುಕೊಳ್ಳಲು ಹರಸಾಹಸ ಪಡುತ್ತಿರುವಾಗ, ರಾಮದೇವ್, ಇದಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿರುವುದು ಭಾರೀ ಚರ್ಚೆಗೆ ಗುರಿಯಾಗಿದೆ.

ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಕೊರೊನಾ ಶಂಕಿತರ ಕೈಗೆ ಸ್ಟಾಂಪ್ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಕೊರೊನಾ ಶಂಕಿತರ ಕೈಗೆ ಸ್ಟಾಂಪ್

ತಮ್ಮ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹೀರಾತಿನಲ್ಲಿ ಬಾಬಾ ರಾಮದೇವ್, ಕೊರೊನಾ ವೈರಸ್ ಸೇರಿದಂತೆ, ಮಾರಾಣಾಂತಿಕ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿದ್ದಾರೆ.

Coronavirus: In Ayurvedic, There Is A Medicine , Baba Ramdev

"ವೈಜ್ಞಾನಿಕ ಸಂಶೋಧನೆಯಲ್ಲಿ ಕೊರೊನಾ ವೈರಸ್ ಗೆ ಅಶ್ವಗಂಧ ಮದ್ದು ಎನ್ನುವುದು ಸಾಬೀತಾಗಿದೆ. ಅಶ್ವಗಂಧ, ಮಾನವನ ಪ್ರೊಟೀನ್ ಮತ್ತು ಕೊರೊನಾ ಪ್ರೊಟೀನ್ ಸಮ್ಮಿಲನಗೊಳ್ಳದಂತೆ ನೋಡಿಕೊಳ್ಳುತ್ತದೆ" ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

"ಮೊದಲು ಜನರು ತಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ಯೋಗವೇ ಸೂಕ್ತವಾದ ದಾರಿ, ಎಲ್ಲರೂ ಯೋಗವನ್ನು ಮಾಡಿ" ಎನ್ನುವ ಸಲಹೆಯನ್ನು ರಾಮದೇವ್ ನೀಡಿದ್ದಾರೆ.


"ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ, ಕೊರೊನಾ ಸೋಂಕು ನಿಗ್ರಹ ಇದರಿಂದ ಸಾಧ್ಯವೇ ಎನ್ನುವುದರ ಬಗ್ಗೆ ಮಾಹಿತಿಯಿಲ್ಲ. ಆದರೆ, ಪತಂಜಲಿಯ ಈ ಜಾಹೀರಾತು ಉತ್ತಮ ಬೆಳವಣಿಗೆಯಲ್ಲ" ಎಂದು ಕೇಂದ್ರ ಆಯುಶ್ ಇಲಾಖೆಯ ಅಧಿಕಾರಿ ಮನೋಜ್ ನೇಸರಿ ಬೇಸರ ವ್ಯಕ್ತ ಪಡಿಸಿದ್ದಾರೆ.

English summary
Coronavirus: In Ayurvedic, There Is A Medicine , Baba Ramdev
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X