ರಾಮಮಂದಿರ ನಿರ್ಮಾಣ ನಮ್ಮ ಆಸೆಯಲ್ಲ, ಸಂಕಲ್ಪ: ಭಾಗವತ್
ಛತ್ತರ್ಪುರ್, ಮಾರ್ಚ್ 22: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ನಮ್ಮ ಆಸೆ ಮಾತ್ರವಲ್ಲ, ನಮ್ಮ ಸಂಕಲ್ಪ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಮಾ.21 ರಂದು ಮಹಾರಾಜ ಛತ್ರಸಾಲ್ ರ 52 ಅಡಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
"ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು!"
ರಾಮಮಂದಿರದ ನಿರ್ಮಾಣವಾಗಬೇಕು ಎಂದು ಬಯಸುವವರು ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ಕರೆನೀಡಿದರು.
ಮಹಾರಾಜ ಛತ್ರಸಾಲ್(4 ಮೇ 1649 - 20 ಡಿಸೆಂಬರ್ 1731) ಮಧ್ಯಕಾಲೀನ ದೊರೆ. ಛತ್ರಪತಿ ಶಿವಾಜಿ ಅವರ ಆದರ್ಶಗಳನ್ನು ಪಾಲಿಸುತ್ತ, ಮೊಘಲರ ವಿರುದ್ಧ ಹೋರಾಡಿದ ಮಹಾನ್ ನಾಯಕ ಎಂಬ ಖ್ಯಾತಿಗಳಿಸಿದ ಛತ್ರಸಾಲ್ ಅವರು ಭಾರತಕ್ಕೆ ನೀದಿದ ಕೊಡುಗೆಯನ್ನು ಈ ಸಮಯದಲ್ಲಿ ಭಾಗವತ್ ನೆನಪಿಸಿಕೊಂಡರು.
ಮೊಘಲ್ ದೊತರೆಮ ಕ್ರೂರ ನಾಯಕ ಔರಂಗ್ ಜೇಬ್ ವಿರುದ್ಧ ಧೈರ್ಯವಾಗಿ ಹೋರಾಡಿದ ಕೀರ್ತಿಯೂ ಛತ್ರಸಾಲ್ ಗೆ ಸಲ್ಲುತ್ತದೆ.