ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿಯ ನವಭಾರತಕ್ಕೆ ಸ್ವಾಗತ': ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ವ್ಯಂಗ್ಯ

|
Google Oneindia Kannada News

ನವದೆಹಲಿ, ಫೆಬ್ರವರಿ 21: ಪುಲ್ವಾಮಾ ದಾಳಿಯ ಬಳಿಕ ಒಂದು ವಾರದಿಂದ ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದರಿಂದ ದೂರವುಳಿದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈಗ ತಮ್ಮ ಹಳೆಯ ಹಳಿಗೆ ಮರಳಿದ್ದಾರೆ.

ಕಾಶ್ಮೀರ ಬೇಕು, ಕಾಶ್ಮೀರಿಗಳು ಬೇಡ; ಇದ್ಯಾವ ನ್ಯಾಯ?: ಚಿದಂಬರಂ ವಿಷಾದಕಾಶ್ಮೀರ ಬೇಕು, ಕಾಶ್ಮೀರಿಗಳು ಬೇಡ; ಇದ್ಯಾವ ನ್ಯಾಯ?: ಚಿದಂಬರಂ ವಿಷಾದ

ರಫೇಲ್ ಒಪ್ಪಂದ, ಅನಿಲ್ ಅಂಬಾನಿ ಜತೆಗಿನ ಸಖ್ಯ ಮುಂತಾದ ವಿಚಾರಗಳನ್ನು ಮುಂದಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರಾಹುಲ್‌, ಹುತಾತ್ಮ ಸೈನಿಕರ ವಿಚಾರವನ್ನು ಅನಿಲ್ ಅಂಬಾನಿಯ ಸಾಲದ ಹೊರೆಯೊಂದಿಗೆ ಬೆಸೆದು ಟೀಕಾಪ್ರಹಾರ ನಡೆಸಿದ್ದಾರೆ.

ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ

'ಧೈರ್ಯಶಾಲಿಗಳು ಹುತಾತ್ಮರಾಗಿದ್ದಾರೆ. ಅವರ ಕುಟುಂಬಗಳು ಒದ್ದಾಡುತ್ತಿವೆ. 40 ಯೋಧರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಆದರೆ ಅವರಿಗೆ (ಶಹೀದ್) ಹುತಾತ್ಮರ ಮಾನ್ಯತೆ ನಿರಾಕರಿಸಲಾಗಿದೆ. ಇತ್ತ ಈ ಮನುಷ್ಯ ಒಮ್ಮೆಯೂ ಕೊಟ್ಟಿಲ್ಲ ಮತ್ತು ಕೇವಲ ಪಡೆದುಕೊಂಡಿದ್ದಾರೆ. ಅವರು 30,000 ಕೋಟಿಯಷ್ಟು ಅವರ ಹಣವನ್ನು ಕಾಣಿಕೆಯಾಗಿ ನೀಡಿದ್ದಾರೆ. ಕೊನೆಯವರೆಗೂ ಸಂತೋಷದಿಂದ ಬದುಕುತ್ತಾರೆ. ಮೋದಿ ಅವರ ನವಭಾರತಕ್ಕೆ ಸ್ವಾಗತ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್‌ನೊಂದಿಗೆ ಅವರು, ಅನಿಲ್ ಅಂಬಾನಿಗೆ ಸಾಲದ ಹಣ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ ಎಂದು ಸುಪ್ರೀಂಕೋರ್ಟ್ ಕಟುವಾಗಿ ಎಚ್ಚರಿಕೆ ನೀಡಿದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Congress president Rahul gandhi attacks narendra modi and anil ambani

ಪುಲ್ವಾಮಾದಲ್ಲಿ ಉಗ್ರರ ಮೇಲೆ ದಾಳಿ ನಡೆದ ಮರುದಿನ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಈ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮತ್ತು ಯೋಧರೊಂದಿಗೆ ಇರುವುದಾಗಿ ಹೇಳಿದ್ದರು. ಅದರ ನಂತರ ಇದುವರೆಗೂ ಯಾವುದೇ ರಾಜಕೀಯ ಹೇಳಿಕೆಯನ್ನು ಅವರು ನೀಡಿರಲಿಲ್ಲ.

English summary
Congress President Rahul Gandhi slams Prime Minister Narendra Modi on Pulwama Terror attack and Anil Ambani's dues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X