ಛತ್ತೀಸ್ ಗಢ: ಮೋದಿ ಸಭೆಗೂ ಮುನ್ನಾದಿನ ನಕ್ಸಲರ ದಾಳಿಗೆ ನಾಲ್ವರು ಬಲಿ
ದಾಂತೇವಾಡ, ನವೆಂಬರ್ 8: ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಛತ್ತೀಸ್ ಗಢದಲ್ಲಿ ನಕ್ಸಲರು ಮತ್ತೊಂದು ದಾಳಿ ನಡೆಸಿದ್ದು, ಸಿಐಎಸ್ಎಫ್ ಯೋಧ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿದ್ದು, ಅವರ ಭೇಟಿಯ ಮುನ್ನಾದಿನವೇ ದಾಂತೇವಾಡದಲ್ಲಿ ಈ ದಾಳಿ ನಡೆದಿದೆ.
ಮಾಧ್ಯಮದವರನ್ನು ಕೊಲ್ಲುವ ಉದ್ದೇಶ ಇರಲಿಲ್ಲ: ನಕ್ಸಲರ ಹೇಳಿಕೆ
ನಕ್ಸಲರು ಸುಧಾರಿತ ಸ್ಫೋಟಕಗಳನ್ನು ಬಳಸಿ ಕೇಂದ್ರೀಯ ಕೈಗಾರಿಕಾ ಪಡೆಯ ವಾಹನವನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಸಿಐಎಸ್ಎಫ್ ಯೋಧ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ನರೇಂದ್ರ ಮೋದಿ ಜಗ್ದಲ್ಪುರದಲ್ಲಿ ಪ್ರಚಾರ ನಡೆಸಲಿದ್ದರೆ, ರಾಹುಲ್ ಗಾಂಧಿ ಎರಡು ದಿನದಲ್ಲಿ ಐದು ಕಡೆ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಛತ್ತೀಸ್ ಗಢ ನಕ್ಸಲ್ ದಾಳಿ: ಮಾಧ್ಯಮದ ಮುಂದೆ ಮಾತಾಡುವಾಗ ಕಣ್ಣೀರಿಟ್ಟ ಎಸ್ಪಿ
ನಕ್ಸಲ್ ಪೀಡಿತ ದಾಂತೇವಾಡ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಇದು ಎರಡನೆಯ ದಾಳಿಯಾಗಿದೆ. ಅ.30ರಂದು ನಕ್ಸಲರು ದೂರದರ್ಶನದ ಛಾಯಾಗ್ರಾಹಕ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು.
Cowardly Maoist terror attack in Dantewada of Chattisgarh this morning. 3 CISF Jawans and 3 civilians injured seriously, battling for their life. CISF Coy in civilian bus was on election duty and going to buy vegetables/groceries this morning. Reports of casualties as well. pic.twitter.com/RvNUcD4GnL
— Aditya Raj Kaul (@AdityaRajKaul) 8 November 2018
ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿ ನಡೆದಿದೆ.
ನಕ್ಸಲರಿಂದ ದೂರದರ್ಶನ ಛಾಯಾಗ್ರಾಹಕನ ಬರ್ಬರ ಹತ್ಯೆ
ಛತ್ತೀಸ್ ಗಢದಲ್ಲಿ ನವೆಂಬರ್ 12ರಂದು ಎಂಟು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ 18 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ನವೆಂಬರ್ 20ರಂದು ಉಳಿದ 72 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.