ಛತ್ತೀಸ್ಗಢದಲ್ಲಿ ಕೋವ್ಯಾಕ್ಸಿನ್ ಲಸಿಕೆ ವಿತರಣೆ ನಿಲ್ಲಿಸುವಂತೆ ಮನವಿ
ನವದೆಹಲಿ,ಫೆಬ್ರವರಿ 12: ಛತ್ತೀಸ್ಗಢದಲ್ಲಿ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ವಿತರಣೆ ನಿಲ್ಲಿಸುವಂತೆ ಛತ್ತೀಸ್ಗಢ ಆರೋಗ್ಯ ಸಚಿವರು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಯನ್ನು ಜನತೆಗೆ ನೀಡಲು ಒಲವು ತೋರಿದ್ದಾರೆ, ಆದರೆ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಪ್ರಯೋಗ ಇನ್ನೂ ಪೂರ್ಣಗೊಂಡಿಲ್ಲ, ಹೀಗಾಗಿ ಲಸಿಕೆ ಮೇಲೆ ಭರವಸೆ ಇಲ್ಲ ಎಂದು ಹೇಳಿರುವ ಹರ್ಷವರ್ಧನ್ ಯಾವುದೇ ಕಾರಣಕ್ಕೂ ಆ ಲಸಿಕೆ ನೀಡಬೇಡಿ ಎಂದು ಛತ್ತೀಸ್ಗಢ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.
ವಿಶ್ವಕ್ಕೇ ಆವರಿಸಬಹುದು 'ಕೆಂಟ್' ಕೋವಿಡ್ ವೈರಸ್: ವಿಜ್ಞಾನಿಯ ಎಚ್ಚರಿಕೆ
ಹಾಗೆಯೇ ಲಸಿಕೆ ಮೇಲೆ ಎಕ್ಸಪೈರಿ ದಿನಾಂಕವನ್ನು ಕೂಡ ನಮೂದಿಸಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಕೋವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗ ಇನ್ನೇನು ಮೂರ್ಣಗೊಳ್ಳಲಿದೆ. ಕಳೆದ ತಿಂಗಳಷ್ಟೇ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ದೊರೆತಿದೆ.
ರಾಜ್ಯಗಳಿಗೆ ನೀಡಿರುವ ಕೊರೊನಾ ಲಸಿಕೆಗಳು ಪರಿಣಾಮಕಾರಿಯಾಗಿದ್ದು, ಯಾವುದೇ ಭಯವಿಲ್ಲದೆ ಪಡೆಯಬಹುದು ಎಂದು ಹೇಳಿದ್ದಾರೆ.
ಕೋವಿಡ್-19 ಗೆ ಲಸಿಕೆ ನೀಡುವ ಅಭಿಯಾನ ಜ.16 ರಿಂದ ಪ್ರಾರಂಭವಾಗಿದ್ದು, ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ.
ಈ ನಡುವೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸೀನ್ ಬದಲಿಗೆ ಕೋವಿಶೀಲ್ಡ್ ನ್ನು ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.
ವೈದ್ಯಕೀಯ ಅಧೀಕ್ಷಕರಿಗೆ ವೈದ್ಯಕೀಯ ತಂಡ ಪತ್ರ ಬರೆದಿದ್ದು, ಕೋವ್ಯಾಕ್ಸೀನ್ ಬಗ್ಗೆ ದೇಶದ ಜನರಿಗೆ ಭಯ-ಭೀತಿಗಳಿವೆ, ಆದ್ದರಿಂದ ಲಸಿಕೆ ನೀಡುವ ಅತಿ ದೊಡ್ಡ ಅಭಿಯಾನದಲ್ಲಿ ಭಾಗವಹಿಸದೇ ಇರುವ ಸಾಧ್ಯತೆಗಳೂ ಇವೆ. ಒಂದು ವೇಳೆ ಹೀಗಾದಲ್ಲಿ ಅಭಿಯಾನದ ಉದ್ದೇಶವೇ ಈಡೇರದೇ ಹೋಗಬಹುದು ಎಂದು ವೈದ್ಯರ ತಂಡ ಆತಂಕ ವ್ಯಕ್ತಪಡಿಸಿದೆ.