ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್ಧಾಮ್ ಯಾತ್ರೆ: ಪರ್ವತ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧ

|
Google Oneindia Kannada News

ಉತ್ತರಖಂಡ ಮೇ 4: ಚಾರ್ಧಾಮ್ ಯಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಪರ್ವತ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲು ನಿರ್ಧರಿಸಿದೆ. ಯಾತ್ರಾರ್ಥಿಗಳಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸಲು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ವಾಹನ ಸಂಚಾರವನ್ನು ನಿಷೇಧಾಜ್ಞೆ ವಿಧಿಸಿದೆ.

ವಾಹನ ಸಂಚಾರ ನಿಷೇಧ

ವಾಹನ ಸಂಚಾರ ನಿಷೇಧ

ಆದೇಶವನ್ನು ದೃಢಪಡಿಸಿದ ಉತ್ತರಾಖಂಡ ಸಾರಿಗೆ ಆಯುಕ್ತ ರಣವೀರ್ ಸಿಂಗ್ ಚೌಹಾಣ್, "ಚಾರ್ಧಾಮ್ ಯಾತ್ರೆಯ ಸಮಯದಲ್ಲಿ ಪರ್ವತ ಮಾರ್ಗಗಳಲ್ಲಿ ವಾಹನಗಳ ಸಂಚಾರವನ್ನು ಬೆಳಗ್ಗೆ 10.00 ರಿಂದ ಸಂಜೆ 4.00 ರವರೆಗೆ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ" ಎಂದು ತಿಳಿಸಿದ್ದಾರೆ.

ಈ ವರ್ಷದ ಚಾರ್‌ಧಾಮ್ ಯಾತ್ರೆಯು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುವ ನಿರೀಕ್ಷೆಯಿರುವುದರಿಂದ, ಚಾರ್ಧಾಮ್ ಯಾತ್ರೆಯಲ್ಲಿ ಯಾತ್ರಾರ್ಥಿಗಳ ಅನುಕೂಲ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರದಿಂದ ಯಾತ್ರೆ ಪ್ರಾರಂಭ

ಮಂಗಳವಾರದಿಂದ ಯಾತ್ರೆ ಪ್ರಾರಂಭ

ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಪೋರ್ಟಲ್‌ಗಳನ್ನು ಅಕ್ಷಯ ತೃತೀಯದ ಸಂದರ್ಭದಲ್ಲಿ ಭಕ್ತರಿಗೆ ತೆರೆಯುವುದರೊಂದಿಗೆ ಚಾರ್ ಧಾಮ್ ಯಾತ್ರೆ ಮಂಗಳವಾರ ಪ್ರಾರಂಭವಾಯಿತು. ಸಾವಿರಾರು ಭಕ್ತರು, ಆಡಳಿತ ಮಂಡಳಿ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ಗಂಗೋತ್ರಿಯ ದ್ವಾರಗಳನ್ನು ಮಂಗಳವಾರ ಬೆಳಗ್ಗೆ 11.15ಕ್ಕೆ ಮತ್ತು ಯಮುನೋತ್ರಿಯ ಬಾಗಿಲುಗಳನ್ನು ಮಧ್ಯಾಹ್ನ 12.15ಕ್ಕೆ ತೆರೆಯಲಾಯಿತು.

ಅಲಂಕೃತ ಪಲ್ಲಕ್ಕಿಗಳು

ಅಲಂಕೃತ ಪಲ್ಲಕ್ಕಿಗಳು

ಪುರೋಹಿತರು ವೈದಿಕ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಗಂಗಾ ಮತ್ತು ಯಮುನಾ ದೇವತೆಗಳ ವಿಗ್ರಹಗಳನ್ನು ಹೂವಿನಿಂದ ಅಲಂಕರಿಸಲ್ಪಟ್ಟ ಅಲಂಕೃತ ಪಲ್ಲಕ್ಕಿಗಳಲ್ಲಿ ದೇವಸ್ಥಾನಕ್ಕೆ ತರಲಾಯಿತು.

ಹೆಚ್ಚಿನ ಸಂಖ್ಯೆಯ ಯಾತ್ರಿಕರು ಬರಲಿದ್ದಾರೆ

ಹೆಚ್ಚಿನ ಸಂಖ್ಯೆಯ ಯಾತ್ರಿಕರು ಬರಲಿದ್ದಾರೆ

ಈ ವರ್ಷ ದಾಖಲೆ ಸಂಖ್ಯೆಯ ಯಾತ್ರಿಕರು ಚಾರ್ ಧಾಮ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ಏಕೆಂದರೆ 2019 ರಿಂದ ಮೊದಲ ಬಾರಿಗೆ COVID-ಪ್ರೇರಿತ ನಿರ್ಬಂಧಗಳಿಂದಾಗಿ ಯಾತ್ರಿಕರಿಗೆ ಆಗಮಿಸಲು ಅಡೆತಡೆಗಳಿದ್ದವು. ಈ ಬಾರಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾದ ಬೆನ್ನಲ್ಲೇ ಯಾತ್ರಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೂ ಹಿಮಾಲಯದ ಪುಣ್ಯಕ್ಷೇತ್ರಗಳಲ್ಲಿ ಯಾತ್ರಾರ್ಥಿಗಳಿಗೆ ಲಭ್ಯವಿರುವ ಸೀಮಿತ ವಸತಿಗಳಿಂದಾಗಿ ಯಾವುದೇ ಅನಾನುಕೂಲತೆ ಉಂಟಾಗದಂತೆ ದೇವಾಲಯಗಳಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯ ಮೇಲೆ ದೈನಂದಿನ ಮಿತಿಯನ್ನು ವಿಧಿಸಲಾಗಿದೆ.

English summary
In view of the ongoing Chardham Yatra, the Uttarakhand government has decided to impose a ban on the movement of vehicles on mountain routes. The ban will be imposed from 10 am to 4 pm, to ensure a safe journey for pilgrims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X