ಚಾರ್ಧಾಮ್ ಯಾತ್ರೆ: 18 ಲಕ್ಷ ದಾಟಿದ ಭಕ್ತರ ಸಂಖ್ಯೆ; 10 ದಿನ ನೊಂದಣಿ ಬಂದ್
ಡೆಹ್ರಾಡೂನ್ ಜೂನ್ 10: ಚಾರ್ಧಾಮ್ ಯಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ 18 ಲಕ್ಷ ದಾಟಿದೆ. ಹೀಗಾಗಿ ಚಾರ್ಧಾಮ್ ಯಾತ್ರೆಯ ಆನ್ಲೈನ್ ನೋಂದಣಿಯನ್ನು ಮುಂದಿನ 10 ದಿನಗಳವರೆಗೆ ಮುಚ್ಚಲಾಗಿದೆ. ಕೇದಾರನಾಥ ಧಾಮದ ಸ್ಲಾಟ್ ಜೂನ್ 20 ರ ನಂತರ ಲಭ್ಯವಿರುತ್ತದೆ. ಜೂನ್ 18 ರ ನಂತರ ಗಂಗೋತ್ರಿ ಮತ್ತು ಯಮುನೋತ್ರಿ ಹಾಗೂ ಜೂನ್ 15 ರಂದು ಬದರಿನಾಥಕ್ಕೆ ಸ್ಲಾಟ್ಗಳು ಲಭ್ಯವಿರುತ್ತವೆ. ಇದುವರೆಗೆ 30 ಲಕ್ಷ ಭಕ್ತರು ಚಾರ್ಧಾಮಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಇದುವರೆಗೆ 618312 ಯಾತ್ರಾರ್ಥಿಗಳು ಬದರಿನಾಥವನ್ನು ತಲುಪಿದ್ದಾರೆ.
ಚಾರ್ಧಾಮ್ ಯಾತ್ರೆಯು ಮೇ 3 ರಿಂದ ಪ್ರಾರಂಭವಾಯಿತು. ಬದರಿನಾಥ ಧಾಮದ ಬಾಗಿಲು ತೆರೆದ ದಿನಾಂಕ ಮೇ 8 ರಿಂದ ಇಲ್ಲಿಯವರೆಗೆ 618312 ಯಾತ್ರಿಕರು ಭೇಟಿ ನೀಡಿದ್ದಾರೆ. ಅದೇ ರೀತಿ, 598590 ಯಾತ್ರಿಕರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ್ದು, ಅದರಲ್ಲಿ 61273 ಯಾತ್ರಿಕರು ಹೆಲಿಸೇವಾ ಮೂಲಕ ತಲುಪಿದ್ದಾರೆ. ಇಲ್ಲಿಯವರೆಗೆ 333909 ಯಾತ್ರಿಕರು ಗಂಗೋತ್ರಿ ಧಾಮವನ್ನು ಮತ್ತು 250398 ಯಾತ್ರಿಕರು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಬಾಗಿಲು ತೆರೆಯುವ ದಿನಾಂಕವಾದ ಮೇ 22 ರಿಂದ ಗುರುದ್ವಾರ ಹೇಮಕುಂಟ್ ಸಾಹಿಬ್ ತಲುಪಿದ ಯಾತ್ರಾರ್ಥಿಗಳ ಸಂಖ್ಯೆ 63124 ಆಗಿದೆ.
ಮೂವರು ಯಾತ್ರಾರ್ಥಿಗಳಿಗೆ ಹೃದಯಾಘಾತ
ಇಲ್ಲಿ ಪ್ರಯಾಣದ ವೇಳೆ ಸಾವನ್ನಪ್ಪಿದವರ ಸಂಖ್ಯೆ 155 ಕ್ಕೆ ತಲುಪಿದೆ. ಗುರುವಾರ, ಕೇದಾರನಾಥ ಮತ್ತು ಯಮುನೋತ್ರಿಯಲ್ಲಿ ತಲಾ ಮೂವರು ಯಾತ್ರಾರ್ಥಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇದುವರೆಗೆ ಕೇದಾರನಾಥದಲ್ಲಿ 70 ಮತ್ತು ಯಮುನೋತ್ರಿಯಲ್ಲಿ 37 ಯಾತ್ರಾರ್ಥಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ, ಋಷಿಕೇಶ ಸೇರಿದಂತೆ ಎಲ್ಲಾ ನಾಲ್ಕು ಧಾಮಗಳಲ್ಲಿ ಈ ಸಂಖ್ಯೆ 155 ತಲುಪಿದೆ.
6880 ಪ್ರಾಣಿಗಳ ತಪಾಸಣೆ
ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಡಾ.ವಿವಿಆರ್ಸಿ ಪುರುಷೋತ್ತಮ್ ಮಾತನಾಡಿ, ಕೇದಾರನಾಥ ಧಾಮ ಯಾತ್ರೆ ಮಾರ್ಗದಲ್ಲಿ ಪ್ರಾಣಿಗಳು ಸಾವನ್ನಪ್ಪಿರುವ ಬಗ್ಗೆ ಇಲಾಖೆ ಸಂಪೂರ್ಣ ಗಂಭೀರವಾಗಿದೆ. ಯಾತ್ರೆ ಮಾರ್ಗದಲ್ಲಿ ಪಶುಸಂಗೋಪನಾ ಇಲಾಖೆ ನಿರಂತರ ನಿಗಾ ವಹಿಸುತ್ತಿದೆ ಎಂದು ಮಾಹಿತಿ ನೀಡಿದರು. ಇಲಾಖೆಯು ಪ್ರಾಣಿಗಳಿಗೆ ನಿರಂತರ ವೈದ್ಯಕೀಯ ಚಿಕಿತ್ಸೆ ಮತ್ತು ಅವುಗಳ ಮಾಲೀಕರಿಗೆ ಸೌಲಭ್ಯಗಳನ್ನು ನೀಡುತ್ತಿದೆ. ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಇದುವರೆಗೆ 140 ಪ್ರಾಣಿಗಳು ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದರು. ಇಲಾಖೆಯಿಂದ ಇದುವರೆಗೆ 6880 ಪ್ರಾಣಿಗಳನ್ನು ತಪಾಸಣೆ ಮಾಡಲಾಗಿದೆ. ಇದರಲ್ಲಿ 1804 ಪ್ರಾಣಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಮತ್ತು 118 ಪ್ರಾಣಿಗಳು ಪ್ರಯಾಣಕ್ಕೆ ಯೋಗ್ಯವಾಗಿಲ್ಲ ಎಂದು ಕಂಡುಬಂದಿದೆ. ಇದರೊಂದಿಗೆ 91 ಪ್ರಾಣಿಗಳ ಮಾಲೀಕರ ಚಲನ್ಗಳನ್ನು ಸಹ ಮಾಡಲಾಗಿದೆ. 411 ಪ್ರಾಣಿಗಳನ್ನು ಪ್ರಯಾಣಿಸದಂತೆ ನಿರ್ಬಂಧಿಸಲಾಗಿದೆ ಮತ್ತು 09 ಎಫ್ಐಆರ್ಗಳನ್ನು ಸಹ ದಾಖಲಿಸಲಾಗಿದೆ. ಇದರೊಂದಿಗೆ ನೀರಿನ ಕಾಲುವೆಗಳನ್ನು ನಿರಂತರವಾಗಿ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ವೈದ್ಯಕೀಯ ಸೌಲಭ್ಯ ನೀಡಲು ಮನವಿ
ಸಾಮಾಜಿಕ ಕಾರ್ಯಕರ್ತೆ ಗೌರಿ ಮೌಲೇಖಿ ಅವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಚಾರ್ಧಾಮ್ ಯಾತ್ರೆಯಲ್ಲಿ ಇದುವರೆಗೆ 600 ಕುದುರೆಗಳು ಸಾವನ್ನಪ್ಪಿದ್ದು, ಆ ಪ್ರದೇಶದಲ್ಲಿ ರೋಗ ಹರಡುವ ಅಪಾಯವಿದೆ ಎಂದು ಅವರು ಹೇಳಿದರು. ಪ್ರಾಣಿಗಳು ಮತ್ತು ಮನುಷ್ಯರ ಸುರಕ್ಷತೆಯ ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ ಚಾರ್ಧಾಮ್ ಯಾತ್ರೆಯಲ್ಲಿ ಜನಸಂದಣಿ ನಿರಂತರವಾಗಿ ಹೆಚ್ಚುತ್ತಿದ್ದು, ಇದರಿಂದ ಪ್ರಾಣಿಗಳು ಮತ್ತು ಮನುಷ್ಯರು ಆಹಾರ ಮತ್ತು ಜೀವನಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೊಂಡೊಯ್ಯುವ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರ ನೀಡಬೇಕು ಎಂದು ನ್ಯಾಯಾಲಯದಿಂದ ಬೇಡಿಕೆ ಸಲ್ಲಿಸಲಾಗಿದೆ.
ಭಕ್ತರಿಗೆ ಅನ್ನ-ಪಾನೀಯ ಸಮಸ್ಯೆ
ಇಲ್ಲಿ ಎಷ್ಟು ಜನರಿಗೆ ಅವಕಾಶ ನೀಡಬೇಕು? ಎಷ್ಟು ಜನರು ಊಟ, ಪಾನೀಯ ಮತ್ತು ವಸತಿ ಸೌಲಭ್ಯಗಳನ್ನು ಪಡೆಯಬಹುದು ಎಂಬುದು ಖಾತರಿ ಪಡಿಸಿಕೊಳ್ಳಬೇಕು. ಅದಕ್ಕನುಗುಣವಾಗಿ ಕ್ರಮ ಕೈಗೊಳ್ಳಬೇಡು ಎಂದಿದ್ದಾರೆ. ಅರ್ಜಿದಾರರಾದ ಸಮಾಜ ಸೇವಕಿ ಗೌರಿ ಮೌಲೇಖಿ ಮಾತನಾಡಿ, ಚಾರ್ಧಾಮ್ ಯಾತ್ರೆಯ ಸಂದರ್ಭದಲ್ಲಿ ಈ ಅವ್ಯವಸ್ಥೆ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅವರು ಇಲ್ಲಿ ಜನರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಾಲಿನ್ಯ ಹರಡುವ ಅಪಾಯ
ಅಷ್ಟೇ ಅಲ್ಲ, ಭಕ್ತರಿಗೆ ಅನ್ನ-ಪಾನೀಯ ಸಮಸ್ಯೆಯಿಂದ ಜನ ಕಂಗಾಲಾಗಿದ್ದಾರೆ. ಹಲವು ವರ್ಷಗಳಿಂದ ಕುದುರೆ, ಹೇಸರಗತ್ತೆಗಳನ್ನು ಪ್ರಯಾಣದಲ್ಲಿ ಬಳಸಲಾಗುತ್ತಿದೆಯಾದರೂ ಯಾವುದೇ ನೀತಿ ರೂಪಿಸಿಲ್ಲ. ಸರಕಾರದಿಂದ ನೀತಿ ರೂಪಿಸಬೇಕೆಂಬ ಆಗ್ರಹವಿದೆ. ಅಲ್ಲದೆ ಅನಾರೋಗ್ಯದ ಕುದುರೆಗಳನ್ನು ಸಹ ಪ್ರಯಾಣದಲ್ಲಿ ಅನೇಕ ಸುತ್ತುಗಳನ್ನು ಮಾಡಲು ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು. ಹೀಗಾಗಿ ಅವು ಸಾಯುತ್ತಿವೆ. ಸತ್ತ ಬಳಿಕ ಅವುಗಳನ್ನು ಪವಿತ್ರ ನದಿಗಳಲ್ಲಿ ವಿಸರ್ಜಿಸಲಾಗುತ್ತಿದ್ದು, ಇದರಿಂದ ಮಾಲಿನ್ಯ ಹರಡುವ ಅಪಾಯವೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
Recommended Video