ಮುಸ್ಲಿಮರು ಕಡ್ಡಾಯವಾಗಿ 'ಭಾರತ್ ಮಾತಾ ಕೀ ಜೈ' ಎನ್ನಿ: ರಿಜ್ವಿ
ಲಕ್ನೋ, ಆಗಸ್ಟ್ 13: ಮುಸ್ಲಿಮರು ಕಡ್ಡಾಯವಾಗಿ ಭಾರತ್ ಮಾತಾ ಕೀ ಜೈ ಎಂದು ಜೈಕಾರ ಹಾಕಿ. ಇಲ್ಲವೆಂದರೆ ಪರಿಣಾಮ ಎದುರಿಸಿ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ಹೇಳಿದೆ.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ಪ್ರತಿಯೊಬ್ಬರೂ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೂಗಬೇಕು. ರಾಷ್ಟ್ರಗೀತೆಗೆ ದನಿಗೂಡಿಸಿ, ನಂತರ ಕೂಗುವ ಭಾರತ್ ಮಾತಾ ಕೀ ಜೈ ಘೋಷಣೆಗೂ ಧನಿಗೂಡಿಸಿ ಎಂದು ಶಿಯಾ ವಕ್ಫ್ ಬೋರ್ಡ್ ಚೇರ್ ಮನ್ ವಾಸೀಮ್ ರಿಜ್ವಿ ಹೇಳಿದ್ದಾರೆ.
ನಮ್ಮ ಕತ್ತು ಸೀಳಿದರೂ ನಾವು ಮುಸ್ಲಿಮರಾಗಿಯೇ ಇರುತ್ತೇವೆ: ಓವೈಸಿ
"ಪ್ರತಿಯೊಬ್ಬರೂ ಈ ಘೋಷಣೆ ಕೂಗಬೇಕು ಎಂಬುದು ಶಿಯಾ ವಕ್ಫ್ ಬೋರ್ಡಿನ ಆಜ್ಞೆಯಾಗಿದ್ದು, ಈ ಆಜ್ಞೆಯನ್ನು ಯಾರಾದರೂ ಮುರಿದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು" ಎಂದು ರಿಜ್ವಿ ಹೇಳಿದ್ದಾರೆ.
ಮುಸ್ಲಿಮರು ಗೋಮಾಂಸ ತಿನ್ನಬಾರದು ಎಂದ ಮುಸ್ಲಿಂ ಮುಖಂಡ
ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ಉತ್ತರ ಪ್ರದೇಶದ ಲಕ್ನೋದ ವಕ್ಫ್ ಗೆ ಸೇರಿದ ಜಾಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಸ್ಲಿಮರಿಗೆ ಈ ಆಜ್ಞೆ ಹೊರಡಿಸಲಾಗಿದೆ.