ಕೊರೊನಾ ಸೂಕ್ತ ನಿರ್ವಹಣೆಗೆ ರಾಜ್ಯ ಮಟ್ಟದ ಸೆರೊ ಸಮೀಕ್ಷೆ ನಡೆಸಲು ಸಲಹೆ ನೀಡಿದ ಕೇಂದ್ರ
ನವದೆಹಲಿ, ಜುಲೈ 29: ಕೊರೊನಾ ಮೂರನೇ ಅಲೆ ಕುರಿತ ತಜ್ಞರ ಎಚ್ಚರಿಕೆ ನಡುವೆ, ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿಗೆ ತಕ್ಕಂತೆ ಕ್ರಮಗಳನ್ನು ಅಳವಡಿಸಿಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ರಾಜ್ಯ ಕೇಂದ್ರಿತ ಸೆರೋ ಸರ್ವೇಗಳನ್ನು ನಡೆಸಲು ಕೇಂದ್ರ ಸರ್ಕಾರ ಬುಧವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಐಸಿಎಂಆರ್ನ ನಾಲ್ಕನೇ ರಾಷ್ಟ್ರೀಯ ಸೆರೋ ಸರ್ವೆ ಸಮೀಕ್ಷೆಯ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಐಸಿಎಂಆರ್ನೊಂದಿಗೆ ಸಮಾಲೋಚನೆ ನಡೆಸಿ ತಮ್ಮದೇ ರಾಜ್ಯಗಳಲ್ಲಿ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಹರಡುವಿಕೆ ಕುರಿತು ಅಧ್ಯಯನ ನಡೆಸುವಂತೆ ಸರ್ಕಾರಗಳಿಗೆ ಸಲಹೆ ನೀಡಿದೆ. ಮುಂದೆ ಓದಿ...
ವಸ್ತುನಿಷ್ಠ, ಪಾರದರ್ಶಕ ಕ್ರಮ ತೆಗೆದುಕೊಳ್ಳಲು ಸಲಹೆ
"ಇಂಥ ಅಧ್ಯಯನಗಳು ಆಯಾ ರಾಜ್ಯ/ ಕೇಂದ್ರಾಡಳಿತ ಪ್ರದೇಶವು ತ್ವರಿತವಾಗಿ ಕೊರೊನಾ ಕುರಿತು ವಸ್ತುನಿಷ್ಠ, ಪಾರದರ್ಶಕ ಸಾರ್ವಜನಿಕ ಆರೋಗ್ಯದ ಕುರಿತು ಕ್ರಮ ತೆಗೆದುಕೊಳ್ಳಲು ಸಹಕಾರಿಯಾಗಲಿವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಕೇಂದ್ರಿತ ಸೆರೊ ಸರ್ವೇಗಳನ್ನು ನಡೆಸಲು ಸೂಚಿಸಿದೆ.
ವಿವರವಾದ ದತ್ತಾಂಶಕ್ಕೆ ಸೆರೊ ಸಮೀಕ್ಷೆ
"ಐಸಿಎಂಆರ್ ರಾಷ್ಟ್ರೀಯ ಸೆರೊ ಸಮೀಕ್ಷೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ಸೋಂಕಿನ ಹರಡುವಿಕೆ ವ್ಯಾಪ್ತಿ ತಗ್ಗಿಸಲು ಸಲಹೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಸೆರೊ ಸಮೀಕ್ಷೆ ಫಲಿತಾಂಶಗಳು ಜಿಲ್ಲೆಗಳು ಮತ್ತು ರಾಜ್ಯಗಳ ಚಿತ್ರಣವನ್ನು ವಿವರವಾಗಿ ನೀಡಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಮಟ್ಟದಲ್ಲಿ ಸೆರೊ ಸಮೀಕ್ಷೆ ನಡೆಸಿದರೆ ವಿವರವಾದ ದತ್ತಾಂಶ ಪಡೆಯಲು ಸಾಧ್ಯ" ಎಂದು ತಿಳಿಸಿದೆ.
ರಾಜ್ಯದ 60% ಜನರು ಕೊರೊನಾ ವಿರುದ್ಧ ಪ್ರತಿಕಾಯ ಹೊಂದಿದ್ದಾರೆ ಎಂದ ಸೆರೊ ಸರ್ವೇ
ಮಧ್ಯಪ್ರದೇಶದಲ್ಲಿ ಅತಿ ಹೆಚ್ಚಿನ ಮಟ್ಟದಲ್ಲಿ ಪ್ರತಿಕಾಯ ಉತ್ಪಾದನೆ
ಈಚೆಗೆ ಭಾರತದ 11 ರಾಜ್ಯಗಳ 70 ಜಿಲ್ಲೆಗಳಲ್ಲಿ ಸೆರೊ ಸಮೀಕ್ಷೆ ನಡೆಸಲಾಗಿದೆ. ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕಿನ ವಿರುದ್ಧ ಜನರಲ್ಲಿ ಹೆಚ್ಚಿನ ಮಟ್ಟದಲ್ಲಿ ಪ್ರತಿಕಾಯಗಳ ಉತ್ಪಾದನೆಯಾಗಿದೆ. 79% ಸೆರೋಪ್ರಿವಲೆನ್ಸ್ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) ಇದೆ. ಕೇರಳದಲ್ಲಿ ಅತಿ ಕಡಿಮೆ ಮಟ್ಟದಲ್ಲಿ ದಾಖಲಾಗಿದೆ. 44.4% ಸೆರೊ ಪ್ರಿವಲೆನ್ಸ್ ಇದೆ ಎಂದು ತಿಳಿದುಬಂದಿದೆ.
ಜನಸಂಖ್ಯೆಯ 32% ಮಂದಿಗೆ ಸೋಂಕು ತಗುಲುವ ಭೀತಿ
ಕೊರೊನಾ
ಸೋಂಕಿನಿಂದ
ಚೇತರಿಕೆಯಾದ
ನಂತರ
ಅಥವಾ
ಕೊರೊನಾ
ಲಸಿಕೆಯಿಂದ
67.6%
ಭಾರತೀಯರಲ್ಲಿ
ಸೋಂಕಿನ
ವಿರುದ್ಧ
ಹೋರಾಟಕ್ಕೆ
ಪ್ರತಿಕಾಯಗಳು
ಬೆಳವಣಿಗೆಯಾಗಿರುವುದಾಗಿ
ತಿಳಿಸಿದೆ.
ಇದರ
ಪ್ರಕಾರ,
ಭಾರತದ
ಒಟ್ಟು
ಜನಸಂಖ್ಯೆಯ
ಅರ್ಧದಷ್ಟು
ಜನರಲ್ಲಿ
ರೋಗನಿರೋಧಕ
ಶಕ್ತಿ
ಉತ್ಪತ್ತಿಯಾಗಿರುವುದಾಗಿ
ತಿಳಿಸಿದೆ.
ಈಗಿನ
ಸೆರೋ
ಸರ್ವೇ
ಫಲಿತಾಂಶ
ಭರವಸೆ
ವ್ಯಕ್ತಪಡಿಸಿದೆ.
ಆದರೆ
ಕೊರೊನಾ
ನಿಯಮಗಳನ್ನು
ಮುರಿದರೆ
ಅಪಾಯ
ಕಟ್ಟಿಟ್ಟ
ಬುತ್ತಿ.
ಜನಸಂಖ್ಯೆಯ
32%
ಮಂದಿಗೆ
ಸೋಂಕು
ತಗುಲುವ
ಭೀತಿ
ಇದೆ.
ಹೀಗಾಗಿ
ಕೊರೊನಾ
ನಿಯಮಗಳ
ಪಾಲನೆಯಲ್ಲಿ
ಯಾವುದೇ
ಆಯ್ಕೆಯನ್ನು
ತೆಗೆದುಕೊಳ್ಳಬೇಡಿ
ಎಂದು
ಸಲಹೆ
ನೀಡಿದೆ.