Work From Home: ಕೇಂದ್ರ ಸರ್ಕಾರದ ಶೇ.50ರಷ್ಟು ನೌಕರರ ಹಾಜರಾತಿಗಷ್ಟೇ ಅನುಮತಿ
ನವದೆಹಲಿ, ಜನವರಿ 3: ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಧೀನ ಕಾರ್ಯದರ್ಶಿ ಮಟ್ಟಕ್ಕಿಂತ ಕೆಳಗಿನ ಸರ್ಕಾರಿ ನೌಕರರಲ್ಲಿ ಶೇ.50ರಷ್ಟು ಜನರು ಮಾತ್ರ ಕಚೇರಿಗೆ ಹಾಜರಾಗಬೇಕು, ಉಳಿದ ಶೇ.50ರಷ್ಟು ನೌಕರರು ಮುಂದಿನ ಆದೇಶದವರೆಗೂ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
ಎಲ್ಲಾ ಸರ್ಕಾರಿ ನೌಕರರು ಮತ್ತು ವಿಕಲಚೇತನರು ಮತ್ತು ಗರ್ಭಾವಸ್ಥೆಯಲ್ಲಿ ಇರುವ ಮಹಿಳಾ ಉದ್ಯೋಗಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.
ಎಚ್ಚರಿಕೆ ಗಂಟೆ: ಭಾರತದಲ್ಲಿ ಕೊವಿಡ್-19 ಸೋಂಕಿನ 3ನೇ ಅಲೆ ಶುರು!
ಕೋವಿಡ್ ಕಂಟೇನ್ಮೆಂಟ್ ವಲಯಗಳಲ್ಲಿ ವಾಸಿಸುವ ಎಲ್ಲಾ ಸರ್ಕಾರಿ ಅಧಿಕಾರಿಗಳು/ಸಿಬ್ಬಂದಿ ಕಂಟೇನ್ಮೆಂಟ್ ವಲಯಗಳನ್ನು ಡಿ-ನೋಟಿಫೈ ಮಾಡುವವರೆಗೆ ಕಚೇರಿಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮಯವನ್ನು ಬದಲಾಯಿಸಲಾಗಿದೆ.
ಬಯೋಮೆಟ್ರಿಕ್
ಹಾಜರಾತಿ
ರದ್ದು:
ಭಾರತದಲ್ಲಿ
ಕೇಂದ್ರ
ಸರ್ಕಾರವು
ತನ್ನ
ಸರ್ಕಾರಿ
ಅಧಿಕಾರಿಗಳು
ಮತ್ತು
ಉದ್ಯೋಗಿಗಳ
ಬಯೋಮೆಟ್ರಿಕ್
ಹಾಜರಾತಿಯನ್ನು
ತಕ್ಷಣದಿಂದಲೇ
ಜಾರಿಗೆ
ಬರುವಂತೆ
ಮುಂದಿನ
ಆದೇಶದವರೆಗೆ
ಅಮಾನತುಗೊಳಿಸಿದೆ.
ಸರ್ಕಾರಿ
ನೌಕರರ
ಸುರಕ್ಷತೆ
ಮತ್ತು
ಆರೋಗ್ಯದ
ಹಿತದೃಷ್ಟಿಯಿಂದ
ಈ
ನಿರ್ಧಾರ
ಕೈಗೊಳ್ಳಲಾಗಿದೆ
ಎಂದು
ಕೇಂದ್ರದ
ರಾಜ್ಯ
ಸಚಿವ
ಜಿತೇಂದ್ರ
ಸಿಂಗ್
ಹೇಳಿದ್ದಾರೆ.ಹಾಜರಾತಿ
ನಮೂದಿಸಲು
ಆದೇಶದಲ್ಲಿ
ಸೂಚನೆ:
ಕೇಂದ್ರದ
ಸಿಬ್ಬಂದಿ
ಸಚಿವಾಲಯ
ಹೊರಡಿಸಿದ
ಆದೇಶದಲ್ಲಿ
ಎಲ್ಲಾ
ಉದ್ಯೋಗಿಗಳು
ಹಾಜರಾತಿ
ರಿಜಿಸ್ಟರ್ಗಳಲ್ಲಿ
ತಮ್ಮ
ಹಾಜರಾತಿಯನ್ನು
ನಮೂದಿಸಬೇಕು
ಎಂದು
ಹೇಳಿದೆ.
"ಮುಂಜಾಗ್ರತಾ
ಕ್ರಮವಾಗಿ,
ಭಾರತ
ಸರ್ಕಾರದ
ಎಲ್ಲಾ
ಸಚಿವಾಲಯಗಳು,
ಇಲಾಖೆಗಳು,
ಅದರ
ಲಗತ್ತಿಸಲಾದ
ಅಧೀನ
ಕಚೇರಿಗಳು
ಸೇರಿದಂತೆ
ಆಧಾರ್
ಆಧಾರಿತ
ಬಯೋಮೆಟ್ರಿಕ್
ಹಾಜರಾತಿ
ವ್ಯವಸ್ಥೆಯಲ್ಲಿ
ಬಯೋಮೆಟ್ರಿಕ್
ಹಾಜರಾತಿಯನ್ನು
ಗುರುತಿಸುವುದನ್ನು
ಜನವರಿ
31
ರವರೆಗೆ
ತಕ್ಷಣದಿಂದಲೇ
ಜಾರಿಗೆ
ತರಲು
ನಿರ್ಧರಿಸಲಾಗಿದೆ.
ನ.8ರಂದು
ಆರಂಭಿಸಲಾಗಿದ್ದ
ಬಯೋಮೆಟ್ರಿಕ್:
ಕೇಂದ್ರ
ಸರ್ಕಾರವು
ಕಳೆದ
ವರ್ಷ
ನವೆಂಬರ್
8
ರಿಂದ
ಎಲ್ಲಾ
ಹಂತದ
ಉದ್ಯೋಗಿಗಳಿಗೆ
ಬಯೋಮೆಟ್ರಿಕ್
ಹಾಜರಾತಿಯನ್ನು
ಪುನರಾರಂಭಿಸಿತ್ತು.
ಕರೋನವೈರಸ್
ಸಾಂಕ್ರಾಮಿಕ
ರೋಗದಿಂದಾಗಿ
ಉದ್ಯೋಗಿಗಳಿಗೆ
ಈ
ಹಿಂದೆ
ಬಯೋಮೆಟ್ರಿಕ್
ಹಾಜರಾತಿಯಿಂದ
ವಿನಾಯಿತಿ
ನೀಡಲಾಗಿತ್ತು.
ದೇಶದಲ್ಲಿ ಮೂರನೇ ಅಲೆಯ ಭೀತಿ:
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಶುರುವಾಗಲು ಹೊಸ ರೂಪಾಂತರಿ ಓಮಿಕ್ರಾನ್ ಕಾರಣವಾಗಿದೆ. ದೇಶದ ಮೆಟ್ರೋ ಸಿಟಿಗಳಲ್ಲಿ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ ಎಂದು ಲಸಿಕೆ ಕಾರ್ಯಪಡೆ ಮುಖ್ಯಸ್ಥ ಡಾ. ಎನ್ ಕೆ ಅರೋರಾ ಎಚ್ಚರಿಕೆ ನೀಡಿದ್ದಾರೆ."ಮುಂಬೈ, ದೆಹಲಿ, ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಇತ್ತೀಚಿಗೆ ವರದಿ ಆಗುತ್ತಿರುವ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಶೇ.75ರಷ್ಟು ಪ್ರಕರಣಗಳು ಓಮಿಕ್ರಾನ್ ರೂಪಾಂತರಿ ಆಗಿವೆ. ಕಳೆದ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ಈ ಓಮಿಕ್ರಾನ್ ಸೋಂಕು ಅತಿಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ," ಎಂದು ಕೊವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ಎನ್ ಕೆ ಅರೋರಾ ಹೇಳಿದ್ದಾರೆ.
ದೇಶದಲ್ಲಿ
ಕೊವಿಡ್-19
ಭೀತಿ
ಹೆಚ್ಚಳ:
ಕೊರೊನಾವೈರಸ್
ಸಾಂಕ್ರಾಮಿಕ
ಪಿಡುಗಿನ
ಮೂರನೇ
ಅಲೆ
ಭೀತಿ
ನಡುವೆ
ಭಾರತದಲ್ಲಿ
ಒಂದೇ
ದಿನ
13,000ಕ್ಕೂ
ಹೆಚ್ಚು
ಸೋಂಕಿತ
ಪ್ರಕರಣಗಳು
ವರದಿಯಾಗಿವೆ.
ಕಳೆದ
24
ಗಂಟೆಗಳಲ್ಲಿ
33,750
ಮಂದಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ಪರೀಕ್ಷೆಯಲ್ಲಿ
ದೃಢಪಟ್ಟಿದೆ.
ಇದೇ
ಅವಧಿಯಲ್ಲಿ
123
ಮಂದಿ
ಮಹಾಮಾರಿಗೆ
ಬಲಿಯಾಗಿದ್ದು,
10,846
ಸೋಂಕಿತರು
ಗುಣಮುಖರಾಗಿದ್ದಾರೆ.
ಇದರ
ಹೊರತಾಗಿ
ದೇಶದಲ್ಲಿ
ಈವರೆಗೂ
3,42,95,407
ಸೋಂಕಿತರು
ಗುಣಮುಖರಾಗಿದ್ದರೆ,
4,81,893
ಮಂದಿ
ಸೋಂಕಿನಿಂದ
ಪ್ರಾಣ
ಬಿಟ್ಟಿದ್ದಾರೆ.
1,45,582
ಕೊವಿಡ್-19
ಸಕ್ರಿಯ
ಪ್ರಕರಣಗಳಿವೆ.
ಈ
ಪೈಕಿ
1,700
ಹೊಸ
ರೂಪಾಂತರಿ
ಓಮಿಕ್ರಾನ್
ಸೋಂಕಿತ
ಪ್ರಕರಣಗಳಾಗಿವೆ
ಎಂದು
ಕೇಂದ್ರ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಸಚಿವಾಲಯ
ಮಾಹಿತಿ
ನೀಡಿದೆ.