ಆರುಷಿ ತಲ್ವಾರ್ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್ ಗೆ ಸಿಬಿಐ ಮೇಲ್ಮನವಿ
ನವದೆಹಲಿ, ಮಾರ್ಚ್ 8: ಆರುಷಿ ತಲ್ವಾರ್ ಹತ್ಯೆ ಪ್ರಕರಣದಲ್ಲಿ ಪೋಷಕರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಅಧಿಕಾರಿಗಳು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಆರುಷಿ ತಲ್ವಾರ್-ಹೇಮರಾಜ್ ಡಬಲ್ ಮರ್ಡರ್ ಕೇಸ್ ನಲ್ಲಿ 2017ರ ಅಕ್ಟೋಬರ್ ನಲ್ಲಿ ಅಲಹಾಬಾದ್ ಹೈಕೋರ್ಟ್ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗಳಿಗೆ ಕ್ಲೀನ್ ಚಿಟ್ ನೀಡಿತ್ತು.
ಪ್ರಕರಣದಲ್ಲಿ
ತಪ್ಪಾಗಿ
ದಂಪತಿಗಳಿಗೆ
ಕ್ಲೀನ್
ಚಿಟ್
ಸಿಕ್ಕಿದೆ
ಎಂದು
ಸಿಬಿಐ
ಮೇಲ್ಮನವಿಯಲ್ಲಿ
ವಾದಿಸಿದೆ.
ಅಲಹಾಬಾದ್
ಹೈಕೋರ್ಟ್
ಪ್ರಕರಣದಲ್ಲಿ
ತಲ್ವಾರ್
ದಂಪತಿಗಳನ್ನು
ಅಪರಾಧಿಗಳೆನ್ನಲು
ಸಾಕಷ್ಟು
ಸಾಕ್ಷ್ಯವಿಲ್ಲ
ಎಂದು
ಹೇಳಿ
ಇಬ್ಬರಿಗೂ
ಪ್ರಕರಣದಿಂದ
ಖುಲಾಸೆಗೊಳಿಸಿತ್ತು.
ಇದಕ್ಕೂ ಮೊದಲು 2013ರಲ್ಲಿ ಗಾಜಿಯಾಬಾದ್ ನ ಸಿಬಿಐ ನ್ಯಾಯಾಲಯ ತಲ್ವಾರ್ ದಂಪತಿಗಳಿಗೆ ಜೀವಾವಧಿ ಜೈಲು ಶಿಕ್ಷೆ ನೀಡಿತ್ತು.
2008ರಲ್ಲಿ 14 ವರ್ಷದ ಆರುಷಿ ತಲ್ವಾರ್ ಮತ್ತು ಅವರ ಮನೆ ಕೆಲಸದ ಆಳು ಹೇಮರಾಜ್ ನಿಗೂಢವಾಗಿ ಕೊಲೆಯಾಗಿದ್ದರು. ಕೊಲೆ ನಡೆದು 10 ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.