ಶಾಸ್ತ್ರೀಯ ಗಾಯಕ ನೆಡನೂರಿ ಕೃಷ್ಣಮೂರ್ತಿ ವಿಧಿವಶ
ಚೆನ್ನೈ, ಡಿ.8: ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಗಾಯಕ, ಸಂಗೀತ ಕಲಾನಿಧಿ ನೆಡನೂರಿ ಕೃಷ್ಣಮೂರ್ತಿ ಅವರು ಸೋಮವಾರ ಮುಂಜಾನೆ ವಿಶಾಖಪಟ್ಟಣಂನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರಿನಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಅವರಿಗೆ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಮೃತರಿಗೆ 87 ವರ್ಷ ವಯಸ್ಸಾಗಿತ್ತು.
ನೆಡನೂರಿ ಗ್ರಾಮದಲ್ಲಿ ಅಕ್ಟೋಬರ್ 10, 1927ರಂದು ಜನಿಸಿದ ಕೃಷ್ಣಮೂರ್ತಿ ಅವರು ಬಾಲ್ಯದಿಂದಲೆ ಪಿಟೀಲು ವಾದನ ಹಾಗೂ ಗಾಯನದಲ್ಲಿ ಆಸಕ್ತಿ ವಹಿಸಿದರು. 1940ರಲ್ಲಿ ದ್ವಾರಂ ನರಸಿಂಗರಾವ್ ನಾಯ್ಡು ಅವರ ಬಳಿ ಶಿಷ್ಯವೃತ್ತಿ ಮಾಡಿದ ಕೃಷ್ಣಮೂರ್ತಿ ಅವರು ನಂತರ ಶ್ರೀಪಾದ ಪಿನಾಕಪಾಣಿ ಅವರಲ್ಲಿ ಕಲಿಕೆ ಮುಂದುವರೆಸಿದರು. ವಿಜಯವಾಡ, ಸಿಕಂದರಾಬಾದ್ ಹಾಗೂ ವಿಶಾಖಪಟ್ಟಣಂನಲ್ಲಿ ಕಲಿಕೆ ಮುಂದುವರೆಯಿತು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ತ್ರಿಮೂರ್ತಿಗಳಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಹಾಗೂ ಶ್ಯಾಮಶಾಸ್ತ್ರಿಗಳ ಸಂಕೀರ್ತನೆಗಳನ್ನು ಹಾಗೂ ಅನ್ನಮಾಚಾರ್ಯ, ಭದ್ರಾಚಾಲ ರಾಮದಾಸರ ಕೆಲವು ಕೀರ್ತನೆಗಳನ್ನು ಸುಶ್ರಾವ್ಯವಾಗಿ ಕೇಳುಗರ ಮನಮುಟ್ಟುವಂತೆ ಮಾಡುವಲ್ಲಿ ನೆಡನೂರಿ ಅವರು ಯಶಸ್ವಿಯಾಗಿದ್ದರು.
ಅನ್ನಮಾಚಾರ್ಯ
ಅವರ
108ಕ್ಕೂ
ಅಧಿಕ
ಕೀರ್ತನೆಗಳಿಗೆ
ಸ್ವರ
ಸಂಯೋಜನೆ
ಮಾಡಿದ
ನೆಡನೂರಿ
ಅವರು
15ನೇ
ಶತಮಾನದ
ಅನ್ನಮಯ್ಯ
ಸಂಕೀರ್ತನೆಗಳ
ಜನಪ್ರಿಯತೆಗೆ
ತಮ್ಮ
ಕೊಡುಗೆ
ನೀಡಿದ್ದಾರೆ.
ನೆಡನೂರಿ
ಕೃಷ್ಣಮೂರ್ತಿ
ಅವರ
ಸಂಗೀತಸೇವೆಯನ್ನು
ಪರಿಗಣಿಸಿ
ಚೆನ್ನೈನ
ಸಂಗೀತ
ಅಕಾಡೆಮಿಯಿಂದ
1991ರಲ್ಲಿ
ಸಂಗೀತ
ಕಲಾನಿಧಿ
ಪ್ರಶಸ್ತಿ
ನೀಡಿ
ಗೌರವಿಸಲಾಗಿತ್ತು.
ಮಲ್ಲಾಡಿ
ಸೋದರರು,
ಶೋಭಾರಾಜು
ಹಾಗೂ
ಜಿ
ಬಾಲಕೃಷ್ಣ
ಪ್ರಸಾದ್
ಅವರು
ನೆಡನೂರಿ
ಅವರ
ಅನೇಕ
ಶಿಷ್ಯಂದಿರ
ಪೈಕಿ
ಪ್ರಮುಖರಾಗಿದ್ದಾರೆ.