ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಉತ್ತರಾಖಂಡ, ನದಿಯಲ್ಲಿ ಕೊಚ್ಚಿಹೋದ ಕಾರು; 9 ಮಂದಿ ಸಾವು

|
Google Oneindia Kannada News

ನವದೆಹಲಿ, ಜುಲೈ 8: ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ರಾಜ್ಯದ ನದಿಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಿವೆ. ಇಂಥ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳಿದ್ದ 9 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರಾಖಂಡದ ರಾಮನಗರದಲ್ಲಿ ಇರುವ ಧೇಲಾ ನದಿಯಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಕಾರಿನಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉತ್ತರಾಖಂಡಕ್ಕೆ ಮುಂಗಾರು: 4 ದಿನಗಳವರೆಗೆ ಭಾರಿ ಮಳೆ, ಭೂಕುಸಿತದ ಎಚ್ಚರಿಕೆಉತ್ತರಾಖಂಡಕ್ಕೆ ಮುಂಗಾರು: 4 ದಿನಗಳವರೆಗೆ ಭಾರಿ ಮಳೆ, ಭೂಕುಸಿತದ ಎಚ್ಚರಿಕೆ

ಪ್ರವಾಸಕ್ಕೆ ತೆರಳಿದ್ದ ಅಷ್ಟೂ ಮಂದಿ ಪಟಿಯಾಲದ ನಿವಾಸಿಗಳು ಎಂದು ತಿಳಿದು ಬಂದಿದೆ. ಪಟಿಯಾಲದಿಂದ ಪಂಜಾಬ್‌ಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ 5:45ರ ಸುಮಾರಿಗೆ ಈ ಕಾರು ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಕಾರಿನಲ್ಲೇ ಸಿಲುಕಿರುವ ಐದು ಶವಗಳು: ಉತ್ತರಾಖಂಡ ಥೇಲಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಕಾರಿನಲ್ಲಿದ್ದ ನಾಲ್ಕು ಶವಗಳು ಸಿಕ್ಕಿವೆ. ಆದರೆ ಇನ್ನೂ ಐದು ಶವಗಳು ಕಾರಿನಲ್ಲೇ ಸಿಲುಕಿಕೊಂಡಿದ್ದು, ಅವುಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕುಮಾವೂನ್ ವ್ಯಾಪ್ತಿಯ ಡಿಐಜಿ ಆನಂದ್ ಭರನ್ ಮಾಹಿತಿ ನೀಡಿದ್ದಾರೆ.

Car Is Swept Away in Uttarakhand River; 9 Death, 1 Woman Rescued in Incident

ಅಪಘಾತದಲ್ಲಿ ಒಬ್ಬ ಮಹಿಳೆಯ ರಕ್ಷಣೆ: ಉತ್ತರಾಖಂಡದಲ್ಲಿ ಶುಕ್ರವಾರ ನಡೆದ ಕಾರು ಅಪಘಾತದಲ್ಲಿ 22 ವರ್ಷದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಹೀಗೆ ರಕ್ಷಿಸಲಾಗಿರುವ ಮಹಿಳೆಯನ್ನು ನಾಜಿಯಾ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಮಹಿಳೆಯನ್ನು ರಾಮನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರವಾಸಕ್ಕೆ ತೆರಳಿದ್ದ 10 ಪ್ರವಾಸಿಗರು ಧೇಲಾದಲ್ಲಿನ ರೆಸಾರ್ಟ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Recommended Video

ತನ್ನ ವಿಶೇಷವಾದ ಬ್ಯಾಟಿಂಗ್ ಶೈಲಿಯಿಂದ ದಾಖಲೆ ಮಾಡಿದ ಸೂರ್ಯ ಕುಮಾರ್ | *Cricket | OneIndia Kannada

English summary
Car Is Swept Away In Uttarakhand River; 9 death, 1 Woman Rescued in incident. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X