ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ, ಕರಾವಳಿಗೆ ಬಸ್‌ ಸಂಚಾರ ಆರಂಭ: ರೈಲು ಇನ್ನೂ ತಡ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 18: ಭಾರಿ ಮಳೆಯಿಂದಾಗಿ ಕೇರಳ ಮತ್ತು ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಕುಂಠಿತಗೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕ್ರ‌ಮೇಣ ಆರಂಭಗೊಂಡಿದೆ. ಬೆಂಗಳೂರಿನಿಂದ ಕೇರಳ, ಕ್ಯಾಲಿಕಟ್‌, ಕೋಯಿಕ್ಕೊಡ್‌ಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಇದೀಗ ಶನಿವಾರದಿಂದ ಕೊಯಿಕ್ಕೋಡ್‌, ಕ್ಯಾಲಿಕಟ್‌ ನಿಂದ ಬೆಂಗಳೂರಿಗೆ ಒಟ್ಟು ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಗೊಂಡಿದೆ.ಪಾಲ್‌ಘಾಟ್‌, ತ್ರಿಶೂರ್‌, ಎರ್ನಾಕ್ಯುಲಮ್‌ ಮಾರ್ಗದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿರುವ ಕಾರಣ ಆ ಮಾರ್ಗದಲ್ಲಿ ಇನ್ನೂ ಬಸ್‌ಗಳ ಸಂಚಾರ ಆರಂಭವಾಗಿಲ್ಲ. ದಿನನಿತ್ಯ ಆ ಮಾರ್ಗದಲ್ಲಿ ರಾಜ್ಯದಿಂದ 13 ಬಸ್‌ಗಳು ಸಂಚರಿಸುತ್ತಿದ್ದವು.

ಸೇನಾ ವಿಮಾನದಲ್ಲಿ ಕೊಡಗು ಪ್ರವಾಹ ಸಮೀಕ್ಷೆಗೆ ಹೊರಟ ಎಚ್‌ಡಿಕೆ ಸೇನಾ ವಿಮಾನದಲ್ಲಿ ಕೊಡಗು ಪ್ರವಾಹ ಸಮೀಕ್ಷೆಗೆ ಹೊರಟ ಎಚ್‌ಡಿಕೆ

ಶನಿವಾರ ಬೆಳಗ್ಗೆ 6ಗಂಟೆಗೆ 45 ಮಂದಿ ಪ್ರಯಾಣಿಕರನ್ನೊಳಗೊಂಡ ಮಲ್ಟಿ ಎಕ್ಸೆಲ್‌ ವೋಲ್ವೊ ಐರಾವತ ಕ್ಲಬ್‌ ಕ್ಲಾಸ್‌ ಬಸ್‌ ಬೆಂಗಳೂರಿನಿಂದ ಹೊರಟಿದೆ. ಏಳು ಗಂಟೆಗೆ 37 ಮಂದಿ ಪ್ರಯಾಣಿಕನ್ನು ಒಳಗೊಂಡ ಬಸ್‌ ಹಾಗೂ ಎಂಟು ಗಂಟೆಗೆ 42 ಮಂದಿ ಪ್ರಯಾಣಿಕರನ್ನು ಒಳಗೊಂಡ ಬಸ್‌ ಕೇರಳಕ್ಕೆ ತೆರಳಿದೆ. ಈ ಬಸ್‌ಗಳು ಆಗಸ್ಟ್ 15ರಿಂದ ಸಂಚಾರ ಸ್ಥಗಿತಗೊಳಿದ್ದವು.

Bus connectivity resumes to Kerala and Coastal districts

ಶನಿವಾರ ಬೆಂಗಳೂರು ಕನ್ಯಾಕುಮಾರಿ, ಯಶವಂತಪುರ-ಕಣ್ಣೂರು, ಬೆಂಗಳೂರು-ಕಣ್ಣೂರು ರೈಲುಗಳು ಕಾರ್ಯಾಚರಣೆಗೊಳಿಸಲು ನಿರ್ಧರಿಸಿತ್ತು ಆದರೆ ರದ್ದುಗೊಳಿಸಲಾಯಿತು. ಕೊಯಮತ್ತೂರ್‌-ಬೆಂಗಳೂರು ಎರ್ನಾಕ್ಯುಲಮ್‌-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಕಾರ್ಯಚರಣೆಯನ್ನೂ ಸ್ಥಗಿತಗೊಳಿಸಲಾಗಿದೆ.

ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ? ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?

ಅಷ್ಟೇ ಅಲ್ಲದೆ ಯಶವಂತಪುರ-ಕಾರವಾರ, ಹಾಸನ-ಕಾರವಾರ ರೈಲನ್ನು ಕೂಡ ಆಗಸ್ಟ್ 21ರವರೆಗೆ ಸ್ಥಗಿತಗೊಳಿಸಲಾಗಿದೆ.

English summary
After a week of interruption of bus service resumed between Bangalore and Kerala and coastal districts due to heavy rainfall, flood and land slides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X