ಬುಖಾರಿ ಹತ್ಯೆ ಹಿಂದೆ ಎಲ್ಇಟಿ, ಪಾಕಿಸ್ತಾನದಲ್ಲಿ ಸಂಚು: ಪೊಲೀಸ್
ಕಾಶ್ಮೀರ, ಜೂನ್ 28: ಪತ್ರಕರ್ತ ಶೂಜತ್ ಬುಖಾರಿ ಹತ್ಯೆಗೆ ಪಾಕಿಸ್ತಾನದಲ್ಲಿ ಸಂಚು ರೂಪಿಸಲಾಗಿದೆ. ಇದನ್ನು ಲಷ್ಕರ್ ಇ ತಯ್ಯಬಾ ಕಾರ್ಯರೂಪಕ್ಕೆ ತಂದಿದೆ ಎಂಬ ಸ್ಪೋಟಕ ಸತ್ಯವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದರು.
ಕಾಶ್ಮೀರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಶ್ಮೀರ ಎಸ್ಪಿ ಪಣಿ, ಈ ಭಯೋತ್ಪಾದಕ ಕೃತ್ಯವನ್ನು ಲಷ್ಕರ್ ಇ ತಯ್ಯಬಾ ನಡೆಸಿದ್ದು, ಇದಕ್ಕೆ ಪಾಕಿಸ್ತಾನದಲ್ಲೇ ಯೋಜನೆ ರೂಪಿಸಲಾಗಿತ್ತು ಎಂದಿದ್ದಾರೆ.
ಪತ್ರಕರ್ತ ಬುಖಾರಿ ಹತ್ಯೆ ಸಂಚುಕೋರ ಓದಿದ್ದು ಬೆಂಗಳೂರಿನಲ್ಲಿ!
"ಪಾಕಿಸ್ತಾನದಲ್ಲೇ ಈ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನುವುದಕ್ಕೆ ನಮ್ಮ ಬಳಿ ಪ್ರಬಲ ಸಾಕ್ಷ್ಯಾಧಾರಗಳಿವೆ. ಮಾಹಿತಿ ಪೂರೈಕೆದಾರರ ಸಹಕಾರದಿಂದ ಹತ್ಯೆ ನಡೆಸಿದವರು ಪಾಕಿಸ್ತಾನಕ್ಕೆ ಸೇರಿದವರು ಎನ್ನುವುದಕ್ಕೆ ನಮಗೆ ಪುರಾವೆಗಳು ಸಿಕ್ಕಿವೆ," ಎಂದವರು ಮಾಹಿತಿ ನೀಡಿದರು.
ಹತ್ಯೆ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಸಾಜದ್ ಗುಲ್ ಪಾಕಿಸ್ತಾನದಲ್ಲಿದ್ದಾನೆ. ಮತ್ತೋರ್ವ ಅಝಾದ್ ಅಹ್ಮದ್ ಮಲಿಕ್ ಎಲ್ಇಟಿ ಉಗ್ರನಾಗಿದ್ದು ಈತ ಅನಂತ್ ನಾಗ್ ಜಿಲ್ಲೆಗೆ ಸೇರಿದ್ದಾನೆ. ಮುಝಾಫರ್ ಅಹ್ಮದ್ ಭಟ್ ಮತ್ತು ನವೀದ್ ಜಾಟ್ ಎಂಬ ಇನ್ನಿಬ್ಬರು ಕೊಲೆಯಲ್ಲಿ ಪಾಲ್ಗೊಂಡವರಾಗಿದ್ದಾರೆ ಎಂದು ಪಣಿ ವಿವರಿಸಿದರು.
Sajad Gul now based in Pakistan, Azad Ahmed Malik, LeT oeprative from anantnag district, Muzafar Ahmad bhat, LeT ,Naveed Jatt have been identified in #ShujaatBukhari murder case: IGP Kashmir SP Pani pic.twitter.com/x8zDibBmzl
— ANI (@ANI) June 28, 2018
ಜೂನ್ 14ರಂದು ರೈಸಿಂಗ್ ಕಾಶ್ಮೀರ್ ಸಂಪಾದಕ ಶೂಜತ್ ಬುಖಾರಿ ಅವರನ್ನು ಪತ್ರಿಕೆಯ ಕಚೇರಿ ಹೊರಗಡೆ ಬೈಕ್ ನಲ್ಲಿ ಬಂದ ಮೂವರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.