ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಬಗ್ಗೆ ಐಐಎಂಬಿ ಪ್ರೊಫೆಸರ್ ವೈದ್ಯನಾಥನ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 01: ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅರುಣ್ ಜೇಟ್ಲಿ ಅವರು ಮುಂದಾಗಿದ್ದಾರೆ. ಈ ಬಾರಿ ಜನಪ್ರಿಯ ಹಾಗೂ ಚುನಾವಣಾ ಪೂರ್ವ ಬಜೆಟ್ ಮಂಡಿಸುವ ಸಾಧ್ಯತೆಯಿದೆ.

ನಿರೀಕ್ಷೆಯಂತೆ 2018-19ನೇ ಸಾಲಿನ ಆಯ ವ್ಯಯ ಪತ್ರದಲ್ಲಿ ಜನಪರ, ಉದ್ಯೋಗಿಗಳ ಹಿತ ಕಾಯುವ ಅಂಶಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಪ್ರೊಫೆಸರ್ ಆರ್ ವೈದ್ಯನಾಥನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್: ಕರ್ನಾಟಕದ ನಿರೀಕ್ಷೆಯ ಹಳಿ ಮೇಲೆ ಜೇಟ್ಲಿ ರೈಲು ಓಡಿಸುವರೇ?ಬಜೆಟ್: ಕರ್ನಾಟಕದ ನಿರೀಕ್ಷೆಯ ಹಳಿ ಮೇಲೆ ಜೇಟ್ಲಿ ರೈಲು ಓಡಿಸುವರೇ?

ಕರ್ನಾಟಕ ಸೇರಿದಂತೆ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೆ ಸಾಲಿನ ಬಜೆಟ್ ಜನಸ್ನೇಹಿ, ಪ್ರಗತಿಪರವಾಗಿರುತ್ತದೆ ಎಂಬ ನಿರೀಕ್ಷೆಯಿದೆ.

Budget 2018: Here is financial expert Prof Vaidyanathan’s wish list

ಆರ್ ವೈದ್ಯನಾಥನ್ ಅವರ ನಿರೀಕ್ಷೆಗಳು:
* ಮುದ್ರಾ ಕಾಯ್ದೆ ಬಗ್ಗೆ ಘೋಷಣೆಯನ್ನು ನಿರೀಕ್ಷಿಸುತ್ತೇನೆ.
* ವೈಯಕ್ತಿಕ ಆದಾಯ ತೆರಿಗೆ ಮಿತಿ ಏರಿಕೆ ಮಾಡಿ, ತೆರಿಗೆ ಹೊರೆ ಕಡಿಮೆ ಮಾಡುವ ನಿರೀಕ್ಷೆಯಿದೆ.
* ಸರಕು ಸೇವಾ ತೆರಿಗೆ (ಜಿಎಸ್ ಟಿ) ಮಿತಿಯನ್ನು 20 ಲಕ್ಷ ರು ದಿಂದ 10 ಕೋಟಿ ರುಗೆ ಏರಿಸಬೇಕು.
* ವಿದೇಶದಲ್ಲಿರಿಸಿರುವ ಹಣವನ್ನು ಇಲ್ಲಿಗೆ ತಂದರೆ ಅನೇಕ ರೀತಿಗಳಲ್ಲಿ ಉಪಯೋಗ.
* ಕೇಂದ್ರ ಸರ್ಕಾರದ ಅನೇಕ ಕಾಯ್ದೆಗಳನ್ನು ತೆಗೆದು ಹಾಕುವಂತೆ ಅನೇಕ ಖಾತೆಗಳನ್ನು ರದ್ದು ಮಾಡಿದರೆ ಸಾಕಷ್ಟು ಮೊತ್ತವನ್ನು ಉಳಿಸಬಹುದು.
* ಅಧಿಕಾರ ವಿಕೇಂದ್ರಿಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು.

English summary
The Budget 2018 is set to be presented by Union Finance Minister Arun Jaitley. It would be one of the toughest budgets for the Union Government and the last full one before the next Lok Sabha elections.Here is financial expert Prof Vaidyanathan’s wish list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X