ನ್ಯಾಯಮೂರ್ತಿಗಳು ಎಚ್ಚರಿಕೆಯಿಂದಿರಬೇಕು: ನ್ಯಾ. ಹೆಗ್ಡೆ
ರಾಜಸ್ತಾನ ಹೈಕೋರ್ಟ್ ನ ನ್ಯಾಯಾಧೀಶ ಮಹೇಶ್ ಚಂದ್ರ ಶರ್ಮಾ ಅವರು ನವಿಲಿನ ಸಂತಾನೋತ್ಪತ್ತಿ ಬಗ್ಗೆ ಹೇಳಿದ ಮಾತುಗಳನ್ನು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನಯವಾಗಿ ಅಲ್ಲಗಳೆದಿದ್ದು, ನ್ಯಾಯಾಧೀಶರಿಗೆ ಕಿವಿಮಾತನ್ನೂ ಹೇಳಿ
ಬೆಂಗಳೂರು, ಜೂನ್ 1: ನ್ಯಾಯಾಧೀಶರ ಹುದ್ದೆಯಲ್ಲಿರುವವರು ಕೆಲವೊಂದು ಹೇಳಿಕೆಗಳನ್ನು, ತೀರ್ಪುಗಳನ್ನು ನೀಡುವಾಗ ಗಂಭೀರತೆಯಿಂದ ವರ್ತಿಸಬೇಕು. ನ್ಯಾಯಾಂಗದ ಗೌರವಕ್ಕೆ ಕುಂದುಂಟಾಗುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಇತ್ತೀಚೆಗೆ, ರಾಜಸ್ಥಾನ ಹೈಕೋರ್ಟ್ ನ ನ್ಯಾಯಾಧೀಶ ಮಹೇಶ್ ಚಂದ್ರ ಶರ್ಮಾ ಅವರು, ಹೆಣ್ಣು ನವಿಲುಗಳು ಗಂಡು ನವಿಲಿನ ಕಣ್ಣೀರಿನಿಂದ ಗರ್ಭ ಧರಿಸುತ್ತವೆ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಸ್ತುವಾಯಿತು.[''ಹೇ... ನವಿಲೇ... ಹೆಣ್ಣವಿಲೇ...'' (ಮಯೂರನ ಜನ್ಮ ರಹಸ್ಯ - ಏನು, ಹೇಗೆ?)]
ಹಲವಾರು ಮಂದಿ, ಕನಿಷ್ಟ ಸಾಮಾನ್ಯ ಜ್ಞಾನ ಇಲ್ಲದವರೆಲ್ಲಾ ನಮ್ಮ ದೇಶದಲ್ಲಿ ನ್ಯಾಯಮೂರ್ತಿಗಳಾಗಿದ್ದಾರೆಂದು ಜರಿದರೆ, ಮತ್ತೆ ಕೆಲವರು ಆ ಹೇಳಿಕೆಯ ಆಧಾರದಲ್ಲಿ ಜೋಕುಗಳನ್ನು ಹರಿಯಬಿಟ್ಟರು.[ಜೋಕನ್ನೆಲ್ಲ ಕೇಳಿ ನವಿಲುಗಳು ಅಳಲು ಪ್ರಾರಂಭಿಸಿದರೆ!]
ಈ ಹಿನ್ನೆಲೆಯಲ್ಲಿ ತಮ್ಮ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳಿಗೆ, ಸಂತೋಷ್ ಹೆಗ್ಡೆ ಮೇಲಿನಂತೆ ಉತ್ತರಿಸಿದ್ದಾರೆ. ಅಲ್ಲದೆ, ನ್ಯಾಯಾಂಗದಲ್ಲಿ ಉನ್ನತ ಸ್ಥಾನಗಳಲ್ಲಿರುವವರು ಬೇಕಾಬಿಟ್ಟಿ ಹೇಳಿಕೆ ನೀಡಿದರೆ, ಅದರಿಂದ ಜನರು ನ್ಯಾಯಾಂಗವನ್ನು ಅನುಮಾನದಿಂದ ನೋಡುವಂತಾಗುತ್ತದೆ ಎಂದೂ ಕಿವಿಮಾತು ಹೇಳಿದರು.