ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಪ್ರವಾಹದಲ್ಲಿ ಕೊಚ್ಚಿಹೋದ ಸರ್ಟಿಫಿಕೇಟ್, ವಿದ್ಯಾರ್ಥಿ ಆತ್ಮಹತ್ಯೆ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 20: ಕೇರಳದ ಪ್ರವಾಹದಲ್ಲಿ ತನ್ನ ಶಾಲಾ ಪ್ರಮಾಣಪತ್ರ ಕೊಚ್ಚಿಕೊಂಡು ಹೋಯಿತೆಂದು ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಳಿಕೊಡೆ ಜಿಲ್ಲೆಯ ಕಾರಂತೂರ್ ನಲ್ಲಿ ನಡೆದಿದೆ.

ನೆರೆ ಸಂತ್ರಸ್ತರನ್ನು ಲೇವಡಿ ಮಾಡಿ ದುಬೈನಲ್ಲಿ ಕೆಲಸ ಕಳೆದುಕೊಂಡ ಕೇರಳಿಗನೆರೆ ಸಂತ್ರಸ್ತರನ್ನು ಲೇವಡಿ ಮಾಡಿ ದುಬೈನಲ್ಲಿ ಕೆಲಸ ಕಳೆದುಕೊಂಡ ಕೇರಳಿಗ

ಕೈಲಾಶ್ ಎಂಬ 19 ವರ್ಷ ವಯಸ್ಸಿನ ಹುಡುಗ ಇಂಡಸ್ಟ್ರೀಯಲ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಓದಲು ಸೀಟು ಗಿಟ್ಟಿಸಿದ್ದ. ಆದರೆ ಕೇರಳದಲ್ಲಿ ಬಿದ್ದ ಭಾರೀ ಮಳೆಗೆ, ಪ್ರವಾಹ ಆರಂಭವಾದ್ದರಿಂದ ಈತನ ಮನೆಯೊಳಗೂ ನೀರಿ ಬಂದು ಮನೆ ಮುಳುಗಿದೆ. ಈ ಸಂದರ್ಭದಲ್ಲಿ ಇಡೀ ಕುಟುಂಬವನ್ನೂ ನಿರಾಶ್ರಿತರ ಶಿಬಿರಕ್ಕೆ ಕರೆತರಲಾಗಿತ್ತು.

ಕೊಚ್ಚಿಹೋದದ್ದು ಸೂರೊಂದೇ ಅಲ್ಲ,ಕನಸೂ!ಪ್ರವಾಹ ಸಂತ್ರಸ್ತನ ಕಣ್ಣೀರ ಕತೆಕೊಚ್ಚಿಹೋದದ್ದು ಸೂರೊಂದೇ ಅಲ್ಲ,ಕನಸೂ!ಪ್ರವಾಹ ಸಂತ್ರಸ್ತನ ಕಣ್ಣೀರ ಕತೆ

ನೀರಿನ ಮಟ್ಟ ಕಡಿಮೆಯಾಗಿ, ಪ್ರವಾಹವೂ ನಿಂತ ಮೇಲೆ ಮನೆಗೆ ಹೋಗಿ ನೋಡಿದರೆ ಕೈಲಾಶ್ ನ ಶಾಲೆಯ ಸರ್ಟಿಫಿಕೇಟ್ ಗಳು ಒದ್ದೆಯಾಗಿ, ಸಂಪೂರ್ಣ ಹಾಳಾಗಿದ್ದವು. ಇದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Boy commits suicide after school certificates get destroyed in Kerala flood

ಕೇರಳ ಪ್ರವಾಹದಿಂದಾಗಿ ಲಕ್ಷಾಂತರ ಜನ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಆದರೆ ಶಾಲಾ ಸರ್ಟಿಫಿಕೇಟ್ ಕೊಚ್ಚಿಕೊಂಡು ಹೋಯಿತೆಂದು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿನ ದುಡುಕಿನ ಯೋಚನೆ ಸರಿಯಲ್ಲ ಎಂಬುದು ಆತನ ಪಾಲಕರದೇ ಮಾತು.

English summary
Heartbroken on finding his class twelve certificates destroyed in the devastation caused by the deadly monsoon in Kerala, a 19-year-old boy, committed suicide, police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X