ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದಿನದಲ್ಲಿ 4.75 ಕೋಟಿ ಮತದಾರರನ್ನು ತಲುಪಲಿರುವ ಬಿಜೆಪಿ!

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ನವದೆಹಲಿ, ನವೆಂಬರ್ 03: ರಾಜಸ್ಥಾನದ ವಿಧಾನಸಭೆ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ದೀಪಾವಳಿ ವಿಶೇಷ ಪುರವಣಿ

ಮೂರು ದಿನಗಳಲ್ಲಿ 4.75 ಕೋಟಿ ಮತದಾರರನ್ನು ತಲುಪಲು ಯೋಜನೆ ರೂಪಿಸಿಕೊಂಡಿರುವ ಬಿಜೆಪಿ, 'ಭೂತ್ ಮಹಾಸಂಪರ್ಕ ಅಭಿಯಾನ' ಹಮ್ಮಿಕೊಂಡಿದೆ.

ರಾಜಸ್ಥಾನ ಚುನಾವಣೆ: ಮೋದಿ, ಶಾ, ಯೋಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!ರಾಜಸ್ಥಾನ ಚುನಾವಣೆ: ಮೋದಿ, ಶಾ, ಯೋಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಪಕ್ಷದ ಹಿರಿಯ ನಾಯಕರು, ಪಕ್ಷದ ಉಸ್ತುವಾರ ಹೊತ್ತವರು ಸೇರಿದಂತೆ ಎಲ್ಲಾ ಘಟಾನುಘಟಿ ನಾಯಕರು ಈ ಅಭಿಯಾನದಲ್ಲಿ ಭಾಗವಹಿಸಿ, ಜನರಿಗೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ. ಈಗಾಗಲೇ ಈ ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ವಸುಂಧರಾ ರಾಜೆ, ಗೃಹಮಂತ್ರಿ ಗುಲಾಬ್ ಚಂದ್ರ ಕಟಾರಿಯಾ ಸೇರಿದಂತೆ ಗಣ್ಯರು ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.

ಮೂರು ದಿನದಲ್ಲಿ ನಾಲ್ಕೂ ಮುಕ್ಕಾಲು ಕೋಟಿ ಮತದಾರರು

ಮೂರು ದಿನದಲ್ಲಿ ನಾಲ್ಕೂ ಮುಕ್ಕಾಲು ಕೋಟಿ ಮತದಾರರು

ಮೂರೇ ಮೂರು ದಿನಗಳಲ್ಲಿ 4.75 ಕೋಟಿ ಮತದಾರರನ್ನು ತಲುಪಲು ನಿರ್ಧರಿಸುವ ಬಿಜೆಪಿ, ತನ್ನ ಬೇರೆ ಬೇರೆ ನಾಯಕರನ್ನು ವಿವಿಧ ಕ್ಷೇತ್ರಗಳಿಗೆ ಕಳಿಸಿ, ಪಕ್ಷದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರೂ ಈ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.

ಟಿಕೆಟ್ ಸಿಗದಿದ್ದರೆ ಬಂಡಾಯದ ಹಾಡು, ರಾಜಸ್ಥಾನದ್ದೂ ಅದೇ ಪಾಡು!ಟಿಕೆಟ್ ಸಿಗದಿದ್ದರೆ ಬಂಡಾಯದ ಹಾಡು, ರಾಜಸ್ಥಾನದ್ದೂ ಅದೇ ಪಾಡು!

ಅಭಿಯಾನಕ್ಕೆ ನಾಂದಿ ಹಾಡಿದ ರಾಜೆ

ಅಭಿಯಾನಕ್ಕೆ ನಾಂದಿ ಹಾಡಿದ ರಾಜೆ

ಹಾಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಜಲ್ವಾಡ್ ದಿಂದ ಅಭಿಯಾನ ಆರಂಭಿಸಿದ್ದರೆ, ಗೃಹ ಮಂತ್ರಿ ಗುಲಾಬ್ ಚಂದ್ರ ಕಟಾರಿಯಾ ಉದಯಪುರದಿಂದ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಜೈಪುರದ ಗೋವಿಂದೇವ್ ದೇವಾಲಯದಿಂದ ಅಭಿಯಾನ ಆರಂಭಿಸಿದ್ದಾರೆ.

'ಮಾಜಿ ಸಂಸದರಿಗೆ ವಿಧಾನಸಭೆ ಟಿಕೆಟ್ ಬೇಡವೇ ಬೇಡ! ಯಾಕಂದ್ರೆ...''ಮಾಜಿ ಸಂಸದರಿಗೆ ವಿಧಾನಸಭೆ ಟಿಕೆಟ್ ಬೇಡವೇ ಬೇಡ! ಯಾಕಂದ್ರೆ...'

ಭಿತ್ತಿಪತ್ರ ಹಂಚುತ್ತಿರುವ ಬಿಜೆಪಿ

ಭಿತ್ತಿಪತ್ರ ಹಂಚುತ್ತಿರುವ ಬಿಜೆಪಿ

ರಾಜ್ಯದ 200 ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲೂ ಮೂರು ದಿನಗಳಲ್ಲಿ ಅಭಿಯಾನ ಮುಗಿಸಲಿರುವ ಬಿಜೆಪಿ, 'ನಾನು ಬಿಜೆಪಿಯೊಂದಿಗಿದ್ದೇನೆ' ಎಂಬ ಸ್ಟಿಕ್ಕರ್ ಗಳನ್ನು ಸಹ ಜನರಿಗೆ ನೀಡುತ್ತಿದೆ. ಜೊತೆಗೆ ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮತ್ತು ನಾಲ್ಕೂ ಮುಕ್ಕಾಲು ವರ್ಷಗಳ ಸಾಧನೆಯನ್ನು ವಿವರಿಸುವ ಭಿತ್ತಿಪತ್ರಗಳನ್ನು ಹಂಚುತ್ತಿದೆ. ಇವೆಲ್ಲ ಬಿಜೆಪಿಗೆ ಎಷ್ಟರಮಟ್ಟಿಗೆ ಸಹಾಯಕವಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.

ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?

ರಾಜಸ್ಥಾನದಲ್ಲಿ ಚುನಾವಣೆ ಎಂದು?

ರಾಜಸ್ಥಾನದಲ್ಲಿ ಚುನಾವಣೆ ಎಂದು?

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101.

English summary
The Bharatiya Janata Party (BJP) has made a target of reaching out to around 4.75 crore voters of Rajasthan in three days by starting a Booth Mahasampark Abhiyan (booth mass campaign programme) with all its senior and other leaders participating including party in-charge and Union human resources development minister Prakash Javadekar and chief minister Vasundhara Raje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X