ಜಪಾನ್ ಪ್ರಧಾನಿ ಕಿಶಿಡಾ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ನವದೆಹಲಿ,
ಮಾರ್ಚ್
19:
ಭಾರತ-ಜಪಾನ್
ವಾರ್ಷಿಕ
ಶೃಂಗಸಭೆ
ನಡುವೆ
ನವದೆಹಲಿಯ
ಹೈದರಾಬಾದ್
ಹೌಸ್ನಲ್ಲಿ
ಪ್ರಧಾನಿ
ನರೇಂದ್ರ
ಮೋದಿಯವರು
ಜಪಾನ್
ಪ್ರಧಾನಿ
ಫ್ಯೂಮಿಯೊ
ಕಿಶಿಡಾ
ಅವರೊಂದಿಗೆ
ಶನಿವಾರ
ದ್ವಿಪಕ್ಷೀಯ
ಮಾತುಕತೆ
ನಡೆಸಿದರು.
ಕಳೆದ
ವರ್ಷ
ಅಧಿಕಾರ
ವಹಿಸಿಕೊಂಡ
ನಂತರ
ಜಪಾನ್
ಪ್ರಧಾನಿ
ಕಿಶಿಡಾ
ಮೊದಲ
ಬಾರಿ
ಭಾರತಕ್ಕೆ
ಭೇಟಿ
ನೀಡಿದ್ದಾರೆ.
ಜಪಾನ್
ಅಧಿಕಾರಿಗಳ
ಉನ್ನತ
ಮಟ್ಟದ
ನಿಯೋಗದೊಂದಿಗೆ
ಕಿಶಿದಾ
ಅವರನ್ನು
ರೈಲ್ವೆ
ಸಚಿವ
ಅಶ್ವಿನಿ
ವೈಷ್ಣವ್
ದೆಹಲಿ
ವಿಮಾನ
ನಿಲ್ದಾಣದಲ್ಲಿ
ಸ್ವಾಗತಿಸಿದರು.
Russia-Ukraine War Live Updates: 6.5 ಮಿಲಿಯನ್ ಉಕ್ರೇನಿಯನ್ನರ ಸ್ಥಳಾಂತರ
"ಜಪಾನ್ ಜೊತೆಗಿನ ಸ್ನೇಹವನ್ನು ಮುಂದುವರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪ್ಯೂಮಿಯೋ ಕಿಶಿಡಾ ಮಾತುಕತೆ ನಡೆಸಿದರು. ಉಭಯ ನಾಯಕರು ಎರಡೂ ದೇಶಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು", ಎಂದು ಪಿಎಂಓ ಟ್ವೀಟ್ ಮಾಡಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಕಿಶಿದಾ ಅಧಿಕಾರ ವಹಿಸಿಕೊಂಡ ಕೂಡಲೇ ಪ್ರಧಾನಿ ಮೋದಿ ಜಪಾನ್ನ ನೂತನ ಪ್ರಧಾನಿಯೊಂದಿಗೆ ಮಾತನಾಡಿದ್ದರು. ಭಾರತ ಮತ್ತು ಜಪಾನ್ ನಡುವಿನ ವ್ಯೂಹಾತ್ಮಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಇಚ್ಛೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದ್ದರು.
ಪ್ರಧಾನಿ
ಫ್ಯೂಮಿಯೊ
ಕಿಶಿಡಾ
ಹೇಳಿಕೆ:
ಭಾರತಕ್ಕೆ
ಆಗಮಿಸುವ
ಮೊದಲು,
ಜಪಾನ್ನ
ಪ್ರಧಾನಿ
ಫ್ಯೂಮಿಯೊ
ಕಿಶಿಡಾ
ಅವರು,
"ನಾನು
ಭಾರತ
ಮತ್ತು
ನಂತರ
ಕಾಂಬೋಡಿಯಾಕ್ಕೆ
ಭೇಟಿ
ನೀಡಲಿದ್ದೇನೆ.
ಉಕ್ರೇನ್
ಮೇಲಿನ
ರಷ್ಯಾದ
ಆಕ್ರಮಣದ
ನಡುವೆ
ಈ
ಪ್ರವಾಸ
ಕೈಗೊಳ್ಳುತ್ತಿದ್ದೇನೆ.
ಈ
ಸಂದರ್ಭದಲ್ಲಿ
ನಾನು
ಅಂತರಾಷ್ಟ್ರೀಯ
ಏಕತೆಯ
ಪ್ರಾಮುಖ್ಯತೆಯನ್ನು
ಒತ್ತಿಹೇಳಲು
ಬಯಸುತ್ತೇನೆ.
ಜಪಾನ್
ಮತ್ತು
ಭಾರತವು
ವಿವಿಧ
ವಿಷಯಗಳಲ್ಲಿ
ಒಟ್ಟಿಗೆ
ಕೆಲಸ
ಮಾಡುತ್ತದೆ
ಎಂದು
ಖಚಿತಪಡಿಸಲು
ನಾನು
ಬಯಸುತ್ತೇನೆ,"
ಎಂದು
ಹೇಳಿದ್ದಾರೆ.
"ಮುಂದಿನ ಕೆಲವು ತಿಂಗಳುಗಳಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಾಯಕರ ನಡುವಿನ ಕ್ವಾಡ್ ಶೃಂಗಸಭೆಯ ಯಶಸ್ಸಿಗೆ ಭಾರತದ ಪ್ರಧಾನಿ ಮೋದಿಯವರೊಂದಿಗೆ ಕೆಲಸ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಇದನ್ನು ಖಚಿತಪಡಿಸಲು ನಾವು ಯೋಜನೆ ಹಾಕಿಕೊಂಡಿದ್ದೇವೆ," ಎಂದು ಕಿಶಿಡಾ ಹೇಳಿದರು.
ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್ ಆಕ್ರಮಣದ ನಂತರ ಜಪಾನ್ ಡಜನ್ ಗಟ್ಟಲೆ ರಷ್ಯಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಉಕ್ರೇನಿಯನ್ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಆದಾಗ್ಯೂ, ಭಾರತವು ಕ್ವಾಡ್ ಸದಸ್ಯರಲ್ಲಿ ಆಕ್ರಮಣವನ್ನು ಖಂಡಿಸದ ಏಕೈಕ ರಾಷ್ಟ್ರವಾಗಿದೆ.
ಭಾರತ-ಜಪಾನ್
ಶೃಂಗಸಭೆ:
ಭಾರತ-ಜಪಾನ್
ವಾರ್ಷಿಕ
ಶೃಂಗಸಭೆಯು
ಈ
ಹಿಂದೆ
2018ರ
ಅಕ್ಟೋಬರ್
ತಿಂಗಳಿನಲ್ಲಿ
ನಡೆದಿತ್ತು.
ಅಂದು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಮತ್ತು
ಅಂದಿನ
ಜಪಾನ್
ಪ್ರಧಾನಿ
ಶಿಂಜೋ
ಅಬೆ
ನಡುವೆ
ಮಹತ್ವದ
ಚರ್ಚೆಗಳು
ನಡೆದಿದ್ದವು.
ಕಳೆದ
2019ರಲ್ಲಿ
ಪೌರತ್ವ
ತಿದ್ದುಪಡಿ
ಕಾಯ್ದೆ
ವಿರುದ್ಧದ
ಪ್ರತಿಭಟನೆ
ಹಿನ್ನೆಲೆಯಲ್ಲಿ
ಶೃಂಗಸಭೆಯನ್ನು
ನಡೆಸಲು
ಸಾಧ್ಯವಾಗಿರಲಿಲ್ಲ.
ಅದಾಗಿ
2020
ಮತ್ತು
2021ರಲ್ಲಿ
ಕೊರೊನಾವೈರಸ್
ಸಾಂಕ್ರಾಮಿಕ
ಪಿಡುಗಿನಿಂದಾಗಿ
ಶೃಂಗಸಭೆಯನ್ನು
ನಡೆಸುವುದು
ಅಸಾಧ್ಯವಾಗಿತ್ತು.
70ನೇ
ವಾರ್ಷಿಕೋತ್ಸವ:
ಭಾರತ
ಮತ್ತು
ಜಪಾನ್
ನಡುವಿನ
2022ರಲ್ಲಿ
ನಡೆಯುತ್ತಿರುವ
ಶೃಂಗಸಭೆಯು
ಉಭಯ
ರಾಷ್ಟ್ರಗಳ
ನಡುವಿನ
70ನೇ
ವಾರ್ಷಿಕೋತ್ಸವದ
ಸಂಕೇತವಾಗಿದೆ.
ಎರಡು
ರಾಷ್ಟ್ರಗಳ
ನಡುವೆ
ರಾಜತಾಂತ್ರಿಕ
ಸಂಬಂಧಗಳ
ಸ್ಥಾಪನೆಗೆ
70
ವರ್ಷಗಳು
ಆಗಲಿವೆ.
ಇದರ
ಮಧ್ಯೆ
ವಿದೇಶಾಂಗ
ವ್ಯವಹಾರಗಳ
ಸಚಿವಾಲಯ
(MEA)ದ
ಹೇಳಿಕೆಯಲ್ಲಿ
ಭಾರತ
ಮತ್ತು
ಜಪಾನ್
ಎರಡೂ
ತಮ್ಮ
ಪಾಲುದಾರಿಕೆಯನ್ನು
ಹೆಚ್ಚಿಸಿಕೊಳ್ಳಲು
ಎದುರು
ನೋಡುತ್ತಿವೆ
ಎಂದು
ತಿಳಿಸಿದೆ.
ಈ ಭೇಟಿಯ ಸಮಯದಲ್ಲಿ ಅವರು ಐದು ವರ್ಷಗಳಲ್ಲಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ ($42 ಶತಕೋಟಿ) ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಜಪಾನ್ನ ನಿಕ್ಕಿ ಪತ್ರಿಕೆ ವರದಿ ಮಾಡಿದೆ.